ಆ್ಯಪ್ನಗರ

ಪಂಕಜ್‌ ಉದಾಸ್‌ ಗಜಲ್‌ ಮೋಡಿ

ಅರಮನೆ ಆವರಣದಲ್ಲಿಭಾನುವಾರ ಸಂಜೆ ನಡೆದ ಪಂಕಜ್‌ ಉದಾಸ್‌ ಅವರ ಗಜಲ್‌ ಗಾಯನ ಸಭಿಕರನ್ನು ನಾದಲೋಕಕ್ಕೆ ಕರೆದೊಯ್ಯಿತು.

Vijaya Karnataka 30 Sep 2019, 5:00 am
ಮನಸೂರೆಗೊಂಡ ನೃತ್ಯರೂಪಕ !
Vijaya Karnataka Web pankaj udhas ghazal charm
ಪಂಕಜ್‌ ಉದಾಸ್‌ ಗಜಲ್‌ ಮೋಡಿ


ಮೈಸೂರು:
ಅರಮನೆ ಆವರಣದಲ್ಲಿಭಾನುವಾರ ಸಂಜೆ ನಡೆದ ಪಂಕಜ್‌ ಉದಾಸ್‌ ಅವರ ಗಜಲ್‌ ಗಾಯನ ಸಭಿಕರನ್ನು ನಾದಲೋಕಕ್ಕೆ ಕರೆದೊಯ್ಯಿತು.

ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮೊದಲ ದಿನವೇ ಸ್ವರಗಳ ಲಾಲಿತ್ಯ, ನಾದದ ಝೇಂಕಾರ, ಸಂಗೀತದ ಸುಸ್ವರ ಗಜಲ್‌ ನಿನಾದ ಅರಮನೆ ಅಂಗಳದಲ್ಲಿನೆರೆದಿದ್ದ ಸಭಿಕರಿಗೆ ಅನನ್ಯ ಅನುಭೂತಿಯನ್ನು ನೀಡಿತು. ನೂರಾರು ಸಂಗೀತಾಸಕ್ತರು ಗಜಲ್‌ ಮೋಡಿಗೆ ಮನಸೋತರು.

ಇದಕ್ಕೂ ಮುನ್ನ ವಿದುಷಿ ರಾಧಿಕಾ ನಂದಕುಮಾರ್‌ ಮತ್ತು ತಂಡದಿಂದ ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಕೃತಿ ಆಧಾರಿತ ನೃತ್ಯರೂಪಕ ಪ್ರೇಕ್ಷಕರ ಕಣ್ಮನ ಸೆಳೆಯಿತು. ಸಂಗೀತದ ಬಗ್ಗೆ ಜಯಚಾಮರಾಜೇಂದ್ರ ಅವರ 94 ಕೃತಿಗಳ ಚಿತ್ರಣ ನೃತ್ಯ ರೂಪಕದಲ್ಲಿಮೂಡಿ ಬಂತು. ತ್ರಿಶಕ್ತಿ ಸ್ವರೂಪಿಣಿ ಚಾಮುಂಡೇಶ್ವರಿಯ ಸ್ತುತಿ ಗಮನ ಸೆಳೆಯಿತು. ಸುಮಾರು ಗಂಟೆಗಳ ಕಾಲ ನೃತ್ಯ ವೈಭವವನ್ನು ಸಭಿಕರು ಕಣ್ತುಂಬಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ