ಆ್ಯಪ್ನಗರ

ಕೊರೊನಾ ಹರಡುವ ಭೀತಿ ಹಿನ್ನೆಲೆ: ನೋಟಿಗೆ ಬೆಂಕಿ ಹಚ್ಚಿದ ಸಾರ್ವಜನಿಕರು!

ಕೊರೊನಾ ವೈರಸ್ ಭೀತಿ ಹಿನ್ನೆಲೆ ರೋಡ್ ನಲ್ಲಿ ಬಿದ್ದಿದ್ದ ನೂರು ರೂಪಾಯಿ ಮುಖಬೆಲೆಯ ನೋಟನ್ನು ಸ್ಯಾನಿಟೈಸರ್ ಬಳಸಿ ಜನರು ಸುಟ್ಟು ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.

Vijaya Karnataka Web 18 Apr 2020, 3:34 pm
ಮೈಸೂರು: ಕೊರೊನಾ ರೆಡ್‌ ಝೋನ್‌ ಎಂದು ಘೋಷಿಸಿರುವ ಮೈಸೂರಿನಲ್ಲಿ ದಿನವೂ ಜನರಿಗೆ ಇಲ್ಲಿನ ಸೋಂಕಿತರ ಏರಿಕೆಯ ಭೀತಿ ನಿದ್ದೆಗೆಡಿಸಿದೆ. ಈ ಹಿನ್ನೆಲೆ ರಸ್ತೆಯಲ್ಲಿ ಬಿದ್ದಿರುವ ದುಡ್ಡಿಗೆ ಜನರು ಬೆಂಕಿ‌ ಹಚ್ಚಿದ ಘಟನೆ ನಜರ್‌ ಬಾದ್‌ನಲ್ಲಿ‌ ನಡೆದಿದೆ.
Vijaya Karnataka Web mysuru


ನಜರ್ ಬಾದ್ ನ ಮೆಡಿಕಲ್ ಸ್ಟೋರ್ ಮುಂಭಾಗ ಶನಿವಾರ ಬೆಳಿಗ್ಗೆ 100 ರೂ. ಮುಖಬೆಲೆಯ ನೋಟು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ನೋಟಿನಲ್ಲಿ ಕೊರೋನಾ ವೈರಸ್ ಇರಬಹುದೆಂಬ ಶಂಕೆಯಿಂದ ನೋಟಿಗೆ ಸ್ಯಾನಿಟೈಸರ್ ಸಿಂಪಡಿಸಿ ನಂತರ ಬೆಂಕಿ ಇಟ್ಟಿದ್ದಾರೆ. ಸದ್ಯ ನೋಟಿಗೆ ಬೆಂಕಿ‌ ಇಟ್ಟ ವಿಡಿಯೋ ವೈರಲ್ ಆಗಿದೆ.

ಇನ್ನು ಇದೇ ಗುರುವಾರ ಹೆಬ್ಬಾಳದಲ್ಲಿಯೂ ಕೂಡ 50ರೂ.ನೋಟು ಕೂಡ ಅಪರಿಚಿತರು ಬಿಸಾಡಿ ಹೋಗಿದ್ದರು. ಅದನ್ನು ಪಾಲಿಕೆ ಅಧಿಕಾರಿಗಳು ಎತ್ತಿಕೊಂಡು ಬಂದಿದ್ದು, ಪರಿಶೀಲನೆ ಸಹ ನಡೆಸಿದ್ದಾರೆ. ಘಟನೆ ಬಳಿಕ ಜನರಲ್ಲಿ ಆತಂಕ ಹೆಚ್ಚಿದೆ. ಸಾಮಾನ್ಯವಾಗಿ ಜನತೆಯಲ್ಲಿ ಭೀತಿ ಹುಟ್ಟಿಸಲು ಬೇಕೆಂದೆ ಈ ಕೆಲಸ ಮಾಡುತ್ತಿದ್ದಾರೋ ಅಥವಾ ವೈರಸ್‌ ಸೋಂಕಿರುವವರೇ ಈ ರೀತಿ ಮಾಡುತ್ತಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ