ಆ್ಯಪ್ನಗರ

ಮೈಸೂರಿನಲ್ಲಿ ರೋಗ ನಿರೋಧಕ ಔಷಧಿ ಪಡೆಯಲು ಮುಗಿಬಿದ್ದ ಜನ

ಮೈಸೂರಿನ ಜನತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಮತ್ತು ಔಷಧ ಮೊರೆ ಹೋಗಿದ್ದು, ನಗರದ ಸರಕಾರಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಆಯುರ್ವೇದ ಔಷಧಿ ಪಡೆಯಲು ಮುಗಿ ಬೀಳುತ್ತಿದ್ದಾರೆ.

Vijaya Karnataka Web 17 Jul 2020, 4:23 pm
ಮೈಸೂರು: ದೇಹದ ರೋಗ ನಿರೋಧಕ ಶಕ್ತಿಯಿಂದಲೇ ಕೊರೊನಾ ವೈರಸ್ ಅನ್ನು ಮಣಿಸಬಹುದು ಎಂಬ ಕಾರಣದಿಂದ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಮತ್ತು ಔಷಧ ಮೊರೆ ಹೋಗಿದ್ದು, ನಗರದ ಸರಕಾರಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದ ಔಷಧಿ ಪಡೆಯಲು ಜನರು ಮುಗಿ ಬೀಳುತ್ತಿದ್ದಾರೆ.
Vijaya Karnataka Web immunity power medicine


ಐದಾರು ದಿನಗಳಿಂದ ಸರಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಂಶಮಾನಿ ವಟಿ ಮಾತ್ರೆಗಳು ಮತ್ತು ಯುನಾನಿ ಔಷಧಿ ಆರ್ಕಾ ಅಜೀಬ್‌ ಎಂಬ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಉಚಿತ ವಿತರಿಸಲಾಗುತ್ತಿದೆ. ಈ ಹಿಂದೆ ಕೊರೊನಾ ವಾರಿಯರ್ಸ್‌ಗೆ ಆಯುರ್ವೇದ ಮಹಾವಿದ್ಯಾಲಯವು ಇದೇ ಔಷಧಿಗಳನ್ನು ನೀಡಿತು. ಅಮೃತ ಬಳ್ಳಿಯಿಂದ ತಯಾರಿಸಿದ 'ದ್ರಾಕ್ಷಾ ಅವಲೇಹ, ಅಮೃತಬಳ್ಳಿಯಿಂದ ತಯಾರಿಸಿದ 'ಶಂಶಮಾನಿ ವಟಿ ಮಾತ್ರೆಗಳು ಮತ್ತು ಯುನಾನಿ ಔಷಧಿ ಆರ್ಕಾ ಅಜೀಬ್‌ ಈ ಮೂರು ಔಷಧಿಗಳನ್ನು ವಿತರಿಸಲಾಗುತ್ತಿದ್ದು, ಪ್ರತಿದಿನ 200 ಮಂದಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ಪಡೆಯಲು ಆಸ್ಪತ್ರೆಗೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಸಾಮಾಜಿಕ ಅಂತರದಡಿ ನಿಂತು ಔಷಧಿಯನ್ನು ಪಡೆಯುತ್ತಿದ್ದಾರೆ.

ಆರೋಗ್ಯ ಇಲಾಖೆಯ ಸೂಚನೆ ಅನುಸರಿಸಿ ಈ ರೋಗ ನಿರೋಧಕ ಔಷಧಿಗಳನ್ನು ವಿತರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ನೀಡಬೇಕಾಗಿರುವುದರಿಂದ ಔಷಧಿ ಪಡೆಯುವರರು ತಮ್ಮ ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಯನ್ನು ನೀಡಬೇಕು.''ಕೊರೊನಾದಂತಹ ವೈರಸ್‌ಗಳನ್ನು ಎದುರಿಸುವ ರೋಗ ನಿರೋಧಕ ಶಕ್ತಿ ಮನುಷ್ಯನಲ್ಲಿರಬೇಕು ಎಂಬ ಉದ್ದೇಶದಿಂದ ಈ ಔಷಧಿಗಳನ್ನು ನೀಡಲಾಗುತ್ತಿದೆ. ಕೊರೊನಾ ಸೋಂಕು ಇಲ್ಲದವರು, ಸೋಂಕು ಇದ್ದವರು ಯಾರು ಬೇಕಾದರೂ, ಯಾವ ವಯಸ್ಸಿನವರಾದರೂ ಇದನ್ನು ತೆಗೆದುಕೊಳ್ಳಬಹುದು. ಐದಾರು ದಿನದಿಂದ ಔಷಧಿ ವಿತರಿಸುತ್ತಿದ್ದು, ಇದುವರೆಗೆ ಐದು ಸಾವಿರ ಮಂದಿಗೆ ವಿತರಿಸಿದ್ದೇವೆ. ಔಷಧಿ ಮುಗಿಯವರೆಗೆ ನಿತ್ಯ ಸಾರ್ವಜನಿಕರಿಗೆ ಈ ಔಷಧಿಗಳನ್ನು ವಿತರಿಸಲಾಗುವುದು. ಇನ್ನೂ 4-5 ಸಾವಿರ ಮಂದಿಗೆ ಆಗುವ ಔಷಧಿಯ ಶೇಖರಣೆ ಇದೆ,'' ಎಂದು ಸರಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಗಜಾನನ ಹೆಗಡೆ ತಿಳಿಸಿದರು.

ವಿದೇಶದಲ್ಲಿನ ಶಾಲೆಗಳ ಮಾದರಿ ನಮಗೆ ಒಂದು ಪಾಠ, ಮರಳಿ ಶಾಲೆ ಮುಚ್ಚಿದ ಚೀನಾ

''ಶಂಶಮಾನಿ ವಟಿ ಮಾತ್ರೆಯನ್ನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಲಾ ಎರಡು ಮಾತ್ರೆ ಹಾಗೂ 'ದ್ರಾಕ್ಷಾ ಅವಲೇಹ' ಚವನಪ್ರಾಶವನ್ನು ಪ್ರತಿದಿನ ಬೆಳಗ್ಗೆ ರಾತ್ರಿ ಒಂದು ಚಮಚ ಸೇವಿಸಬೇಕು. 'ಆರ್ಕಾ ಅಜೀಬ್‌' ದ್ರಾವಣವನ್ನು ನಮ್ಮ ಮಾಸ್ಕ್‌ನ ಒಳಭಾಗದಲ್ಲಿಮೂಗಿನ ಹೊಳ್ಳೆ ಬರುವ ಪ್ರದೇಶದಲ್ಲಿಒಂದು ಹನಿ ಹಾಕಿಕೊಳ್ಳಬೇಕು. ಇದರಿಂದ ಮೂಗಿನೊಳಗೆ ರೋಗಾಣುಗಳ ಪ್ರವೇಶವನ್ನು ಇದು ತಡೆಯುತ್ತದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ