ಆ್ಯಪ್ನಗರ

ಮೈಸೂರು/ ಕಸದ ರಾಶಿಗೆ ಕ್ರಿಮಿನಾಶಕ ಸಿಂಪಡಣೆ

ಸುಯೇಜ್‌ ಫಾರಂ ಆವರಣದಲ್ಲಿ ಗಬ್ಬು ವಾಸನೆ ತಡೆಗಟ್ಟಲು ಸ್ವಚ್ಛ ಭಾರತ್‌ ಅಭಿಯಾನ್‌ ಸಂಘಟನೆ, ಆರ್ಟ್‌ ಆಫ್‌ ಲೀವಿಂಗ್‌ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಸದ ರಾಶಿಗಳಿಗೆ ಬುಧವಾರ ಇಎಂಐ ಕ್ರಿಮಿನಾಶಕ ಸಿಂಪಡಿಸಲಾಯಿತು.

Vijaya Karnataka 14 Dec 2017, 5:00 am

ಮೈಸೂರು: ಸುಯೇಜ್‌ ಫಾರಂ ಆವರಣದಲ್ಲಿ ಗಬ್ಬು ವಾಸನೆ ತಡೆಗಟ್ಟಲು ಸ್ವಚ್ಛ ಭಾರತ್‌ ಅಭಿಯಾನ್‌ ಸಂಘಟನೆ, ಆರ್ಟ್‌ ಆಫ್‌ ಲೀವಿಂಗ್‌ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಸದ ರಾಶಿಗಳಿಗೆ ಬುಧವಾರ ಇಎಂಐ ಕ್ರಿಮಿನಾಶಕ ಸಿಂಪಡಿಸಲಾಯಿತು.

ಸಂಸದ ಪ್ರತಾಪಸಿಂಹ ಅವರ ಬೆಂಬಲಿಗರು, ಬಿಜೆಪಿ ಮುಖಂಡರಾದ ನಗರಾಧ್ಯಕ್ಷ ಡಾ.ಬಿ.ಎಚ್‌. ಮಂಜುನಾಥ್‌, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಚ್‌.ವಿ.ರಾಜೀವ್‌ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಣೀಶ್‌ ಹಾಗೂ ಇತರರು ಕಸದ ರಾಶಿಗೆ ಕ್ರಿಮಿನಾಶಕ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದರು. ಕಸದಲ್ಲಿ ಕೊಳೆತು ದುರ್ವಾಸನೆ ಕಾರಣವಾಗುವ ಕ್ರಿಮಿಗಳ ನಾಶಕ್ಕೆ ಜಪಾನ್‌ನ ಇಎಂಐ ರಾಸಾಯನಿಕ ಸಿಂಪಡಿಸಲಾಯಿತು.

ಇದೇ ವೇಳೆ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಮಾತನಾಡಿ, ಕಸದಲ್ಲಿರುವ ಈಸ್ಟ್‌ ಹಾಗೂ ಬ್ಯಾಕ್ಟಿರಿಯಾ ನಿಯಂತ್ರಣಕ್ಕೆ ಬಯೋ ರಾಸಾಯನಿಕವನ್ನು ಸಿಂಪಡಿಸಲಾಗಿದೆ. ಇದು ದುರ್ವಾಸನೆ ಬಗೆಹರಿಸುವುದರ ಜೊತೆಗೆ ಕಸವನ್ನು ಸಹ ತಿನ್ನುವುದರಿಂದ ರಾಶಿ ಕಸವೂ ಕಡಿಮೆಯಾಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ