ಆ್ಯಪ್ನಗರ

ಛಾಯಾಗ್ರಹಣ ಸವಾಲಿನ ವೃತ್ತಿ: ಸಿಎಂ

ಪತ್ರಿಕಾ ಛಾಯಾಗ್ರಹಣ ವೃತ್ತಿ ಸಾಹಸಮಯ ಮತ್ತು ಸವಾಲಿನ ವೃತ್ತಿಯಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

Vijaya Karnataka 12 Sep 2018, 5:00 am
ಮೈಸೂರು: ಪತ್ರಿಕಾ ಛಾಯಾಗ್ರಹಣ ವೃತ್ತಿ ಸಾಹಸಮಯ ಮತ್ತು ಸವಾಲಿನ ವೃತ್ತಿಯಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
Vijaya Karnataka Web photography challenging career cm
ಛಾಯಾಗ್ರಹಣ ಸವಾಲಿನ ವೃತ್ತಿ: ಸಿಎಂ


ಮೈಸೂರು ನಗರ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ನಗರದ ಕಲಾ ಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ 'ಛಾಯಾಚಿತ್ರ ಪ್ರದರ್ಶನ-2018' ಅನ್ನು ಕ್ಯಾಮೆರಾ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.

''ರುದ್ರ ರಮಣೀಯ ಮತ್ತು ಭಾವನಾತ್ಮಕ ದೃಶ್ಯಗಳನ್ನು ಸೆರೆ ಹಿಡಿಯುವ ಛಾಯಾಗ್ರಹಣ ಒಂದು ರೀತಿಯ ಅದ್ಭುತ ಕಲೆಯಾಗಿದೆ,'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

''ಛಾಯಾಗ್ರಾಹಕರು ಹಲವು ವಿಶೇಷ, ವನ್ಯಜೀವಿ ದೃಶ್ಯಗಳನ್ನು ಸೆರೆ ಹಿಡಿಯುವ ಭಾವನಾತ್ಮಕ ಜೀವಿಯಾಗಿದ್ದಾರೆ. ಛಾಯಾಗ್ರಹಣ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಟಿ.ಎಸ್‌.ಸತ್ಯನ್‌ ಅವರು ಮೈಸೂರಿನವರು ಎಂಬುದು ನಮ್ಮ ಹೆಮ್ಮೆಯ ಸಂಗತಿ,'' ಎಂದು ಹೇಳಿದರು. ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ ಅವರಿಗೆ ಟಿ.ಎಸ್‌.ಸತ್ಯನ್‌ ಅವರ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಉದ್ಯಮಿ ಪಿ.ವಿ.ಗಿರಿ, ಪತ್ರಕರ್ತ ಕೆ.ಶಿವಕುಮಾರ್‌ ಇದ್ದರು.

ಪ್ರದರ್ಶನದಲ್ಲಿ ಮೈಸೂರು ನಗರದ ಛಾಯಾಚಿತ್ರಗಾರರಾದ ಅನುರಾಗ್‌ ಬಸವರಾಜ್‌, ಗವಿಮಠ ರವಿ, ಜಿ.ಕೆ.ಹೆಗ್ಡೆ, ಹಂಪಾ ನಾಗರಾಜ್‌, ಕೆ.ಎಚ್‌.ಚಂದ್ರು, ಕೃಷ್ಣೋಜಿರಾವ್‌, ಲಕ್ಷ್ಮಿ ನಾರಾಯಣ ಯಾದವ್‌, ನಾಗೇಶ್‌ ಪಾಣತ್ತಲೆ, ನಂದನ್‌, ನೇತ್ರರಾಜು, ಪ್ರಗತಿ ಗೋಪಾಲ ಕೃಷ್ಣ, ಬಿ.ಆರ್‌.ಸವಿತ, ಎಸ್‌.ಆರ್‌. ಮಧುಸೂದನ್‌, ಶ್ರೀರಾಮ್‌ ಮತ್ತು ಎಸ್‌.ಉದಯಶಂಕರ್‌ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಛಾಯಾಚಿತ್ರಗಳು ಇದ್ದು, ಸೆ.12ರವರೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಅವಕಾಶವಿದೆ.


ಪತ್ರಕರ್ತರಿಗೆ ಆರೋಗ್ಯ ವಿಮೆ, ಪಿಂಚಣಿ, ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಈ ಸಂಬಂಧ ಸಮಿತಿ ಕೂಡ ರಚಿಸಲಾಗಿದೆ. ದೇಶದ ನಾಲ್ಕನೇ ಅಂಗವಾಗಿರುವ ಪತ್ರಕರ್ತರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.

-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ