ಆ್ಯಪ್ನಗರ

ಸಮುದ್ರದ ನೀರು ಕುಡಿಯಲು ಬಳಕೆಗೆ ಯೋಜನೆ

ವಿದೇಶಗಳಲ್ಲಿ ಇರುವಂತೆ ಸಮುದ್ರದ ಉಪ್ಪು ನೀರನ್ನು ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಲು ರಾಜ್ಯ ಸರಕಾರ ಮುಂದಾಗಿದೆ ಎಂದು ನಗರಾಭಿವೃದ್ಧಿ ಮತ್ತು ಹಜ್‌ಖಾತೆ ಸಚಿವ ರೋಷನ್‌ಬೇಗ್‌ ತಿಳಿಸಿದರು.

ವಿಕ ಸುದ್ದಿಲೋಕ 1 Jun 2017, 9:00 am
ಮಂಗಳೂರಿನಲ್ಲಿ ಉಪ್ಪು ನೀರು ಶುದ್ಧೀಕರಣ ಘಟಕ ಸ್ಥಾಪನೆ: ಸಚಿವ ಬೇಗ್‌
Vijaya Karnataka Web planning for use in drinking sea water
ಸಮುದ್ರದ ನೀರು ಕುಡಿಯಲು ಬಳಕೆಗೆ ಯೋಜನೆ


ಪಿರಿಯಾಪಟ್ಟಣ: ವಿದೇಶಗಳಲ್ಲಿ ಇರುವಂತೆ ಸಮುದ್ರದ ಉಪ್ಪು ನೀರನ್ನು ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಲು ರಾಜ್ಯ ಸರಕಾರ ಮುಂದಾಗಿದೆ ಎಂದು ನಗರಾಭಿವೃದ್ಧಿ ಮತ್ತು ಹಜ್‌ಖಾತೆ ಸಚಿವ ರೋಷನ್‌ಬೇಗ್‌ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ಬುಧವಾರ ನಡೆದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ‘‘ಡಿ ಸಾನಿಟೇಶನ್‌ ಆಫ್‌ ವಾಟರ್‌ ಘಟಕವನ್ನು ಮಂಗಳೂರು ಸಮುದ್ರ ತೀರದಲ್ಲಿ ಸ್ಥಾಪಿಸಿ 1500 ಕೋಟಿ ರೂ. ಗಳ ವೆಚ್ಚದಲ್ಲಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಘಟಕ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಖಾಸಗಿಯವರೇ ಘಟಕ ಸ್ಥಾಪಿಸಿ ಯೋಜನೆ ಜಾರಿಗೊಳಿಸುವ ಮೂಲಕ ಸಮುದ್ರದ ಉಪ್ಪ್ಪು ನೀರನ್ನು ಶುದ್ಧೀಕರಿಸಿ ಮಂಗಳೂರಿಗೆ 200 ಎಂಐಟಿ ಕುಡಿಯುವ ನೀರನ್ನು ನೀಡಲಾಗುವುದು,’’ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ