ಆ್ಯಪ್ನಗರ

ಮೋದಿ ಇಸ್ರೋಗೆ ಕಾಲಿಟ್ಟಿದ್ದೇ ಚಂದ್ರಯಾನಕ್ಕೆ ಅಪಶಕುನ ! ಎಚ್‌ಡಿಕೆ ವಿವಾದಾತ್ಮಕ ಹೇಳಿಕೆ

ಚಂದ್ರಯಾನ -2 ವೀಕ್ಷಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಸ್ರೋಗೆ ಭೇಟಿ ನೀಡಿದ್ದು ಚಂದ್ರಯಾನಕ್ಕೆ ಅಪಶಕುನವಾಗಲು ಕಾರಣವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಎಚ್.ಡಿ.ಕೆ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

Vijaya Karnataka Web 12 Sep 2019, 11:15 pm
ಮೈಸೂರು : ಚಂದ್ರಯಾನ-2 ವೀಕ್ಷಿಸಲು ಪ್ರಧಾನಿ ಮೋದಿ ಇಸ್ರೋಗೆ ಕಾಲಿಟ್ಟಿದ್ದೇ ವಿಜ್ಞಾನಿಗಳ ಪಾಲಿಗೆ ಅಪಶಕುನವಾಯಿತು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
Vijaya Karnataka Web hdk 1


ಚಂದ್ರಯಾನ -2 ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವುದನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಹು ಮಹಾತ್ವಾಕಾಂಕ್ಷೆಯ ಚಂದ್ರಯಾನ -2 ಲ್ಯಾಂಡರ್ ವಿಕ್ರಮ್ ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತ್ತು.

ಈ ವೇಳೆ ಇಸ್ರೋ ಕೇಂದ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಧೈರ್ಯ ತುಂಬಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರನ್ನು ಸಂತೈಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ರಧಾನಿ ಭೇಟಿಯ ಕುರಿತಾಗಿ ಟೀಕೆ ಮಾಡಿದ ಎಚ್.ಡಿ.ಕೆ ಇಸ್ರೋ ವಿಜ್ಞಾನಿಗಳು ಅನೇಕ ವರ್ಷಗಳಿಂದ ಕಷ್ಟಪಟ್ಟು ಕೈಗೊಂಡಿರುವ ಯೋಜನೆಯ ಯಶಸ್ಸನ್ನು ಪಡೆಯಲು ನರೇಂದ್ರ ಮೋದಿ ಅವರು ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದರು.

ಯಾವ ಗಳಿಗೆಯಲ್ಲಿ ಮೋದಿ ಅವರು ಅಲ್ಲಿ ಕಾಲಿಟ್ಟರೋ ಇಸ್ರೋ ವಿಜ್ಞಾನಿಗಳಿಗೂ ಅಪಶಕುನವಾಯಿತೆಂದು ಕಾಣುತ್ತದೆ ಎಂದಿದ್ದಾರೆ ಕುಮಾರಸ್ವಾಮಿ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ