ಆ್ಯಪ್ನಗರ

ವಿಷ ಸೇವನೆ: ಅಪ್ರಾಪ್ತೆ ಸಾವು, ಯುವಕನ ಸ್ಥಿತಿ ಗಂಭೀರ

ತಾಲೂಕಿನ ಗೆಜ್ಜಗನಹಳ್ಳಿ ಸಮೀಪದ ಕಬಿನಿ ಬಲದಂಡೆ ನಾಲೆ ಏರಿ ಸಮೀಪ ಯುವಕ ಹಾಗೂ ಅಪ್ರಾಪ್ತ ಯುವತಿ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದೆ.

Vijaya Karnataka 15 Oct 2018, 5:00 am
ನಂಜನಗೂಡು: ತಾಲೂಕಿನ ಗೆಜ್ಜಗನಹಳ್ಳಿ ಸಮೀಪದ ಕಬಿನಿ ಬಲದಂಡೆ ನಾಲೆ ಏರಿ ಸಮೀಪ ಯುವಕ ಹಾಗೂ ಅಪ್ರಾಪ್ತ ಯುವತಿ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದೆ.
Vijaya Karnataka Web poisoning death of cruelty the condition of the young man is serious
ವಿಷ ಸೇವನೆ: ಅಪ್ರಾಪ್ತೆ ಸಾವು, ಯುವಕನ ಸ್ಥಿತಿ ಗಂಭೀರ


ತಿ.ನರಸೀಪುರ ತಾಲೂಕಿನ ಕಲಿಯೂರು ಗ್ರಾಮದ ನಿವಾಸಿ ಸ್ವಾತಿ(17) ಮೃತಳು. ಈಕೆಯ ಜತೆಯಲ್ಲಿದ್ದ ಚಾಮರಾಜನಗರ ತಾಲೂಕಿನ ಹಂಪಾಪುರ ನಿವಾಸಿ ಯುವಕ ಮಣಿಕಂಠ(18)ನ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ವಾತಿ ಮೂಗೂರು ಗ್ರಾಮದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು, ಮಣಿಕಂಠ ಕಲಿಯೂರು ಗ್ರಾಮದ ತನ್ನ ಅಜ್ಜಿ ಮನೆಯಲ್ಲೇ ವಾಸವಿದ್ದ. ಶನಿವಾರ ಯುವತಿಯು ಈತನೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದ ಸ್ಥಳೀಯರು ನಾಲಾ ಏರಿ ಸಮೀಪ ಯುವಕ ಹಾಗೂ ಯುವತಿ ಬಿದ್ದಿರುವುದನ್ನು ಗಮನಿಸಿ ಬಿಳಿಗೆರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕನನ್ನು ತುರ್ತು ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಸ್ಥಳದಲ್ಲೇ ಮೃತಪಟ್ಟಿದ್ದ ಯುವತಿ ಶವವನ್ನು ತಿ.ನರಸೀಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸ್ಥಳಕ್ಕೆ ಬಿಳಿಗೆರೆ ಪೊಲೀಸ್‌ ಠಾಣೆಯ ಪಿಎಸ್‌ಐ ರವಿಶಂಕರ್‌, ವೃತ್ತ ನಿರೀಕ್ಷ ಕ ಶೇಖರ್‌ ಭೇಟಿ ನೀಡಿದ್ದರು. ಈ ಸಂಬಂಧ ಮೃತ ಯುವತಿ ಸ್ವಾತಿ ತಂದೆ, ''ಅಪ್ರಾಪ್ತ ವಯಸ್ಕಳಾದ ತನ್ನ ಮಗಳನ್ನು ಮಣಿಕಂಠ ಶನಿವಾರ ಅಪಹರಣ ಮಾಡಿದ್ದು, ಇದೀಗ ಮಗಳು ಶವವಾಗಿ ಪತ್ತೆಯಾಗಿದ್ದಾಳೆ. ಈ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು,'' ಎಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ