ಆ್ಯಪ್ನಗರ

ಮದುವೆಯಾದ ಜೋಡಿಗೆ ಪೊಲೀಸರ ಅಭಯ

ಪ್ರೀತಿಸಿ ಮದುವೆಯಾಗಿ ತಂದೆಯಿಂದಲೇ ಜೀವಭಯವಿದೆ ಎಂದು ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಮಾಡಿದ್ದ ಜೋಡಿಗೆ ಪಟ್ಟಣದ ಪೋಲೀಸರು ಅಭಯ ನೀಡಿದ್ದು, ಯುವತಿಯ ತಂದೆಯಿಂದಲೇ ಮುಚ್ಚಳಿಕೆ ಬರೆಸಿಕೊಂಡು ಸೂಕ್ತ ರಕ್ಷಣೆಯ ಭರವಸೆ ನೀಡಿದ್ದಾರೆ.

Vijaya Karnataka 4 Aug 2018, 5:00 am
ಪಿರಿಯಾಪಟ್ಟಣ : ಪ್ರೀತಿಸಿ ಮದುವೆಯಾಗಿ ತಂದೆಯಿಂದಲೇ ಜೀವಭಯವಿದೆ ಎಂದು ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಮಾಡಿದ್ದ ಜೋಡಿಗೆ ಪಟ್ಟಣದ ಪೋಲೀಸರು ಅಭಯ ನೀಡಿದ್ದು, ಯುವತಿಯ ತಂದೆಯಿಂದಲೇ ಮುಚ್ಚಳಿಕೆ ಬರೆಸಿಕೊಂಡು ಸೂಕ್ತ ರಕ್ಷಣೆಯ ಭರವಸೆ ನೀಡಿದ್ದಾರೆ.
Vijaya Karnataka Web police have been forced to get married couple
ಮದುವೆಯಾದ ಜೋಡಿಗೆ ಪೊಲೀಸರ ಅಭಯ


ಪಿರಿಯಾಪಟ್ಟಣ ಪೊಲೀಸ್‌ ಠಾಣೆಗೆ ಶುಕ್ರವಾರ ಹಾಜರಾದ ಪೂಜಾ ಹಾಗೂ ಪ್ರತಾಪ್‌, ತಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದರು. ಈ ಹಿಂದೆ ಸುರೇಶ್‌ಕುಮಾರ್‌ ನೀಡಿದ್ದ ಕಾಣೆಯಾಗಿದ್ದಾಳೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರೆದುರು ಹೇಳಿಕೆ ನೀಡಿದ ಪೂಜಾ, ತಾನು ಸ್ವಂತ ಇಚ್ಛೆಯಿಂದ ಪ್ರತಾಪ್‌ನನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ನಂತರ ಪೊಲೀಸರು ಪೂಜಾಳ ತಂದೆ ಸುರೇಶ್‌ಕುಮಾರ್‌ ಅವರನ್ನ್ನು ಠಾಣೆಗೆ ಕರೆಯಿಸಿ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡರು.

ಪಿರಿಯಾಪಟ್ಟಣದ ಟೌನ್‌ ನಿವಾಸಿ ಪ್ರತಾಪ್‌ ಮತ್ತು ಪೂಜಾ ಕಳೆದ 8 ವರ್ಷಗಳಿಂದ ಪ್ರೀತಿಸಿದ್ದು, ಕೆಲ ದಿನಗಳ ಹಿಂದೆ ಇಬ್ಬರು ಮದುವೆಯಾಗಲು ಮುಂದಾಗಿದ್ದರು. ಆದರೆ ಮೈಸೂರಿನಲ್ಲಿ ಸಿಕ್ಕಿಬಿದ್ದ ಜೋಡಿಯನ್ನು ಪೂಜಾಳ ಪೋಷಕರು ದೂರವಾಗುವಂತೆ ಮಾಡಿದ್ದರು. ನಂತರ ಗುಜರಾತ್‌ನ ಅಹಮದಾಬಾದ್‌ಗೆ ಪೂಜಾಳನ್ನು ಕರೆದೊಯ್ದಿದ್ದರು. ಆದರೆ, ಪೂಜಾ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿ, ನಂತರ ತಪ್ಪಿಸಿಕೊಂಡು ಬಂದು ಮೊಬೈಲ್‌ ಮೂಲಕ ಪ್ರತಾಪ್‌ನನ್ನು ಕರೆಯಿಸಿಕೊಂಡು ಅಲ್ಲಿಂದ ಮತ್ತೆ ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಕ್ಕೆ ಬಂದು ಜು.18ರಂದು ಮಾರೇಹಳ್ಳಿ ದೇವಾಲಯದಲ್ಲಿ ಮದುವೆಯಾಗಿದ್ದರು.

ಸುಪಾರಿ ಆರೋಪ :
ಮದುವೆಯಾದ ನಂತರ ಇಬ್ಬರು ಪ್ರೇಮಿಗಳು, ನಮಗೆ ಸುರೇಶ್‌ಕುಮಾರ್‌ ಜೈನ್‌ ಸುಪಾರಿ ನೀಡಿದ್ದಾರೆ. ಹಾಗಾಗಿ ನಮಗೆ ಜೀವ ಭಯವಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ