ಆ್ಯಪ್ನಗರ

ಮಕ್ಕಳು, ಮೊಮ್ಮಕ್ಕಳ ಭವಿಷ್ಯ ರೂಪಿಸುವವ ರಾಜಕಾರಣಿಯಲ್ಲ: ದೇವೇಗೌಡರಿಗೆ ಪ್ರತಾಪ್‌ ಸಿಂಹ ಟಾಂಗ್‌

ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಹೊಸ ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಾರ್ವಜನಿಕರ ಭವಿಷ್ಯದ ಬಗ್ಗೆ ಯೋಚಿಸುವವ ಉತ್ತಮ ರಾಜಕಾರಣಿ ಎಂದು ಹೇಳಿದರು.

Vijaya Karnataka 6 Mar 2019, 3:26 pm
ಮೈಸೂರು: ಮಕ್ಕಳು, ಮೊಮ್ಮಕ್ಕಳ ಭವಿಷ್ಯಕ್ಕೆ ಬೆಲೆ ಕೊಡುವವ ರಾಜಕಾರಣಿ ಅಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬಕ್ಕೆ ಪರೋಕ್ಷ ವಾಗಿ ಟಾಂಗ್‌ ನೀಡಿದರು.
Vijaya Karnataka Web Pratap Simha


ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಹೊಸ ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಾರ್ವಜನಿಕರ ಭವಿಷ್ಯದ ಬಗ್ಗೆ ಯೋಚಿಸುವವ ಉತ್ತಮ ರಾಜಕಾರಣಿ ಎಂದು ಹೇಳಿದರು.

''ನಾನು ಕೆಲಸ ಮಾಡಿಸುತ್ತೇನೆ ಎಂದು ಮಾಮೂಲಿ ರಾಜಕಾರಣಿಗಳಂತೆ 70 ವರ್ಷ ಕಳೆದಿಲ್ಲ. ನಾನು ಮೈಸೂರಿಗೆ ರಾಜಕಾರಣ ಮಾಡಲು ಅಲ್ಲ, ಜನರ ಸೇವೆ ಮಾಡಲು ಬಂದಿದ್ದೇನೆ. ಕೆಲಸ ಮಾಡಿಸಿ ತೋರಿಸಿದ್ದೇನೆ. ರಾಜಕಾರಣಿಗಳಂತೆ ಕಮೀಷನ್‌ ವ್ಯವಹಾರ, ರಿಯಲ್‌ ಎಸ್ಟೇಟ್‌, ಜಾತಿ ರಾಜಕಾರಣ, ಕುಟುಂಬದ ಭವಿಷ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ. ಬದಲಿಗೆ ಜನರ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತೇನೆ,'' ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಪರೋಕ್ಷವಾಗಿ ಟೀಕಿಸಿದರು.

''ಪಕ್ಷದ ಭವಿಷ್ಯವನ್ನು ಗಮನಿಸಿ ಮುಖಂಡರು ಬಿಜೆಪಿಗೆ ಬರುತ್ತಾರೆ. ಉಮೇಶ್‌ ಜಾಧವ್‌ ಬಿಜೆಪಿ ಬರುವುದು ಆಪರೇಷನ್‌ ಕಮಲ ಅಲ್ಲ. ಆಪರೇಷನ್‌ ನಡೆಯುವುದು ಕೆ.ಆರ್‌.ಆಸ್ಪತ್ರೆಯಲ್ಲಿ,'' ಎಂದು ವ್ಯಂಗ್ಯವಾಡಿದರು.

''ಲೋಕಸಭೆ ಚುನಾವಣೆಯಲ್ಲಿ ನಾನು ನನ್ನ ಎದುರಾಳಿ ಯಾರು ಎಂಬುದನ್ನು ನೋಡುವುದಿಲ್ಲ. ನಾಲ್ಕೂವರೆ ವರ್ಷ ಮಾಡಿದ ಅಭಿವೃದ್ಧಿ ಕೆಲಸವನ್ನು ಜನರು ನೋಡಿದ್ದಾರೆ. ನಾನು ಅವರನ್ನು ನಂಬಿದ್ದೇನೆ. ಅವರು ನನ್ನ ಕೈಹಿಡಿಯಲಿದ್ದಾರೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ