ಆ್ಯಪ್ನಗರ

ಬೆಲೆ ಏರಿಕೆ: ಮೋದಿಗೆ ಎಳ್ಳು, ನೀರು

ಆರ್‌ಟಿಒನಲ್ಲಿ ಪ್ರತಿಯೊಂದರ ಶುಲ್ಕ ದುಬಾರಿ ಮಾಡಿರುವುದನ್ನು ಖಂಡಿಸಿ ಮೈಸೂರು ರಕ್ಷ ಣಾ ವೇದಿಕೆ ಯುವ ಘಟಕದ ಪದಾಧಿಕಾರಿಗಳು ನಗರದ ಚಿಕ್ಕಗಡಿಯಾರ ಬಳಿ ಮೋದಿಗೆ ಎಳ್ಳು, ನೀರು ಬಿಡುವ ಅಣುಕು ಪ್ರದರ್ಶನ ನಡೆಸಿದರು.

Vijaya Karnataka 9 Oct 2018, 5:00 am
ಮೈಸೂರು : ಆರ್‌ಟಿಒನಲ್ಲಿ ಪ್ರತಿಯೊಂದರ ಶುಲ್ಕ ದುಬಾರಿ ಮಾಡಿರುವುದನ್ನು ಖಂಡಿಸಿ ಮೈಸೂರು ರಕ್ಷ ಣಾ ವೇದಿಕೆ ಯುವ ಘಟಕದ ಪದಾಧಿಕಾರಿಗಳು ನಗರದ ಚಿಕ್ಕಗಡಿಯಾರ ಬಳಿ ಮೋದಿಗೆ ಎಳ್ಳು, ನೀರು ಬಿಡುವ ಅಣುಕು ಪ್ರದರ್ಶನ ನಡೆಸಿದರು.
Vijaya Karnataka Web price rise modi sesame water
ಬೆಲೆ ಏರಿಕೆ: ಮೋದಿಗೆ ಎಳ್ಳು, ನೀರು


ವಾಹನ ವಿಮೆಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅಲ್ಲದೆ, ಕೊಡಗಿನ ಸಂಕಷ್ಟಕ್ಕೆ ನೆರವು ನೀಡಲು ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪಿಂಕ್‌ ರೆವಲ್ಯೂಷನ್‌ ತಡೆಯದಿರುವುದು, ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಹಣ ಬಿಡುಗಡೆ ಮಾಡದೇ ಮೋದಿ ಸುಳ್ಳು ಹೇಳುತ್ತಿದ್ದಾರೆ. ಕಪ್ಪು ಹಣ ತರುವ ಮಾತಿರಲಿ, ದೇಶದೊಳಗೆ ಐಟಿ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧ ನಡೆ ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮಹಾಲಯ ಅಮಾವಾಸ್ಯೆಯಂದು ಮೋದಿಯವರ ಮೇಲಿನ ಅಂಧ ವಿಶ್ವಾಸ ಹಾಗೂ ಅಭಿಯಾನಕ್ಕೆ ಎಳ್ಳು ನೀರು ಬಿಡುವ ಮೂಲಕ ಅಣುಕು ಪ್ರದರ್ಶನ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಅಧ್ಯಕ್ಷ ಗುರುರಾಜ್‌, ರಾಕೇಶ್‌ ಭಟ್‌ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ