ಮೈಸೂರು : ಕಾರಾಗೃಹಕ್ಕೆ ಬರುವ ಅಪರಾಧಿಗಳ ಮನಃ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುವ ಸಿಬ್ಬಂದಿಗೆ ಇಲಾಖೆ ತರಬೇತಿ ನೀಡುವುದು ಅಗತ್ಯ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ಕಾರಾಗೃಹಗಳ ಮಹಾ ನಿರೀಕ್ಷಕ ಎನ್.ಎಸ್.ಮೇಘರಿಕ್ ತಿಳಿಸಿದರು.
ಕಾರಾಗೃಹ ಇಲಾಖೆ ವತಿಯಿಂದ ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ಕವಾಯಿತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 45ನೇ ತಂಡದ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಪರಿವೀಕ್ಷಿಸಿದ ನಂತರ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
''ಸಾಮಾನ್ಯವಾಗಿ ಸಿಬ್ಬಂದಿ ಕಾರ್ಯ ವೈಖರಿ ವಿಚಾರಕ್ಕಾಗಿಯೆ ಕಾರಾಗೃಹ ಇಲಾಖೆ ಟೀಕೆಗೆ ಒಳಗಾಗುತ್ತದೆ. ಹಾಗಾಗಿ ಸಿಬ್ಬಂದಿಗೆ ಇಲಾಖೆ ತರಬೇತಿ ನೀಡುವುದು ಮುಖ್ಯವಾಗಿದೆ. ಅಲ್ಲದೆ, ಹೊರಗೆ ಹುಲಿಯಾಗಿ ಮೆರೆದು ಇಲಿಗಳಾಗಿ ಕಾರಾಗೃಹ ಸೇರುವ ಅಪರಾಧಿಗಳೆಲ್ಲರೂ ಒಂದೇ ರೀತಿ ಮನೋಭಾವ ಹೊಂದಿರುವುದಿಲ್ಲ. ಇವರಲ್ಲಿ ಕಚ್ಚುವ ಇಲಿಗಳೂ ಇರುತ್ತವೆ. ಹಾಗಾಗಿ ಸಿಬ್ಬಂದಿ ಅವರೊಂದಿಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಇದಲ್ಲದೆ ಕಾರಾಗೃಹ ವಾಸ ಅಪರಾಧಿಯ ಮನಃಪರಿವರ್ತನೆಯ ಕೇಂದ್ರವಾಗಬೇಕಿದೆ. ಇಲ್ಲವಾದಲ್ಲಿ ಆತ ಸೆರೆವಾಸದ ನಂತರವೂ ತನ್ನ ಹಿಂದಿನ ಮನೋಭಾವವನ್ನೆ ಮುಂದುವರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸದ್ಯ 88 ಮಹಿಳಾ ವೀಕ್ಷಕಿಯರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದವರು ತಮ್ಮ ಕಾರಾಗೃಹ ವ್ಯಾಪ್ತಿಯಲ್ಲಿ ಮಾದರಿಯಾಗಿ ಕೆಲಸ ಮಾಡಲಿದ್ದಾರೆ. ಅಲ್ಲದೆ, ಇತರ ಸಿಬ್ಬಂದಿ ತರಬೇತಿಯ ವಿಷಯವನ್ನು ಹಂಚಿಕೊಳ್ಳುತ್ತಾರೆ. ತನ್ಮೂಲಕ ಇಲಾಖೆ ಕೆಲಸಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತವೆ,'' ಎಂದರು.
ಕಾರಾಗೃಹ ನಿರ್ಮಾಣಕ್ಕೆ ಅನುಮೋದನೆ: ''ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಇದೀಗ 1070 ವಾರ್ಡನ್ಗಳು, 32 ಜೈಲರ್ ನೇಮಕವಾಗಿದ್ದಾರೆ. ಸದ್ಯದಲ್ಲಿಯೆ ಅವರಿಗೆ ನೇಮಕ ಆದೇಶ ದೊರೆಯಲಿದೆ. ಹಾಗಾಗಿ ಸಿಬ್ಬಂದಿ ಕೊರತೆ ನೀಗಲಿದೆ. ಇದಲ್ಲದೆ ಸದ್ಯ ರಾಜ್ಯದಲ್ಲಿ 14,400 ಅಪರಾಧಿಗಳಿದ್ದಾರೆ. ಆದರೆ 13,000 ಮಂದಿಗೆ ಮಾತ್ರ ಕಾರಾಗೃಹದ ವ್ಯವಸ್ಥೆ ಇದೆ. ಈ ವಿಷಯವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಅಂತೆಯೆ ಈಗಾಗಲೆ ಮಂಗಳೂರು, ಬೆಂಗಳೂರಿನಲ್ಲಿ ಕಾರಾಗೃಹ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುಮೋದನೆ ದೊರೆತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ ಸದ್ಯದಲ್ಲಿಯೆ ಸಮಸ್ಯೆ ದೂರವಾಗಲಿದೆ,'' ಎಂದರು.
ಆರೋಪಿ ನಲಪಾಡ್ಗೆ ಕಾರಾಗೃಹದಲ್ಲಿ ಐಷಾರಾಮಿ ಸೇವೆ ದೊರೆಯುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ''ಈ ಆರೋಪ ನಿರಾಧಾರವಾದುದು. ಸದ್ಯ ರಾಜ್ಯದಲ್ಲಿ ಆ ರೀತಿಯ ಕೆಟ್ಟ ಸನ್ನಿವೇಶವಿಲ್ಲ. ಸಿಬ್ಬಂದಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ,'' ಎಂದು ಸ್ಪಷ್ಟಪಡಿಸಿದರು.
ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿ, ''ನೀವೆಲ್ಲ ನಿಮ್ಮ ಕುಟುಂಬ ಸದಸ್ಯರಿಂದ 9 ತಿಂಗಳು ದೂರವಿದ್ದು ತರಬೇತಿ ಪಡೆದಿದ್ದೀರಿ. ಇದರಿಂದ ಭವಿಷ್ಯದಲ್ಲಿ ನೀವು ಮತ್ತಷ್ಟು ಶಿಸ್ತಿನಿಂದ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ತರಬೇತಿಯಲ್ಲಿ ಒತ್ತಡದ ನಡುವೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಅರಿತಿದ್ದೀರಿ. ವೃತ್ತಿ ಜೀವನ ಹಸನಾಗಿರಲಿ,'' ಎಂದು ಹರಸಿದರು.
ರುದ್ರವ್ವಗೆ ಸರ್ವೋತ್ತಮ ಪ್ರಶಸ್ತಿ: ತರಬೇತಿ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ನಾನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಎಲ್ಲಾ ವಿಭಾಗದಲ್ಲಿಯೂ ಉತ್ತಮ ಸಾಧನೆ ಮಾಡಿದ ಉಡುಪಿ ಜಿಲ್ಲಾ ಕಾರಾಗೃಹದ ರುದ್ರವ್ವ ಗೊಳಪ್ಪ ಕುರಬರ ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡರು. ಶಕೀನಾಬೇಗಂ ನದಾಫ್ ಎಡಿಜಿಪಿ ಮತ್ತು ಐಜಿಪಿ ಕಪ್ ಪಡೆದುಕೊಂಡರು. ಒಳಾಂಗಣ ವಿಭಾಗದಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದ ದೀಪಾ ಶಿಂಗಾಡೆಪ್ಪ ಇಡಗಲ್ಲ, ಹೊರಾಂಗಣ ವಿಭಾಗದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಲಿಲೋಫರ ಗುತ್ತೇದಾರ, ಸನ್ನಡತೆ ವಿಭಾಗದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹ ಎಂ.ಎನ್.ಮಮತಾ ಪ್ರಶಸ್ತಿ ಪಡೆದುಕೊಂಡರು. ಫೈರಿಂಗ್ ವಿಭಾಗದಲ್ಲಿ ಭಾಗ್ಯಶ್ರೀ(ಪ್ರಥಮ, ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ), ಎಂ.ಆರ್.ಬಿಂದು ದ್ವಿತೀಯ (ಮಡಿಕೇರಿ ಜಿಲ್ಲಾ ಕಾರಾಗೃಹ) ಸ್ಥಾನ ಪಡೆದರು.
ಕಾರಾಗೃಹ ವಿಭಾಗದ ಪೊಲೀಸ್ ಉಪಮಹಾನಿರೀಕ್ಷಕ ಎಚ್.ಎಸ್. ರೇವಣ್ಣ , ಹೆಚ್ಚುವರಿ ಕಾರಾಗೃಹಗಳ ಮಹಾನಿರೀಕ್ಷಕ ಜಿ. ವೀರಭದ್ರಸ್ವಾಮಿ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಪೊಲೀಸ್ ಆಯುಕ್ತ ಎ. ಸುಬ್ರಹ್ಮಣ್ಯೇಶ್ವರರಾವ್ ಸೇರಿದಂತೆ ಇನ್ನಿತರರು ಇದ್ದರು.
ಕಾರಾಗೃಹ ಇಲಾಖೆ ವತಿಯಿಂದ ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ಕವಾಯಿತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 45ನೇ ತಂಡದ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಪರಿವೀಕ್ಷಿಸಿದ ನಂತರ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
''ಸಾಮಾನ್ಯವಾಗಿ ಸಿಬ್ಬಂದಿ ಕಾರ್ಯ ವೈಖರಿ ವಿಚಾರಕ್ಕಾಗಿಯೆ ಕಾರಾಗೃಹ ಇಲಾಖೆ ಟೀಕೆಗೆ ಒಳಗಾಗುತ್ತದೆ. ಹಾಗಾಗಿ ಸಿಬ್ಬಂದಿಗೆ ಇಲಾಖೆ ತರಬೇತಿ ನೀಡುವುದು ಮುಖ್ಯವಾಗಿದೆ. ಅಲ್ಲದೆ, ಹೊರಗೆ ಹುಲಿಯಾಗಿ ಮೆರೆದು ಇಲಿಗಳಾಗಿ ಕಾರಾಗೃಹ ಸೇರುವ ಅಪರಾಧಿಗಳೆಲ್ಲರೂ ಒಂದೇ ರೀತಿ ಮನೋಭಾವ ಹೊಂದಿರುವುದಿಲ್ಲ. ಇವರಲ್ಲಿ ಕಚ್ಚುವ ಇಲಿಗಳೂ ಇರುತ್ತವೆ. ಹಾಗಾಗಿ ಸಿಬ್ಬಂದಿ ಅವರೊಂದಿಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಇದಲ್ಲದೆ ಕಾರಾಗೃಹ ವಾಸ ಅಪರಾಧಿಯ ಮನಃಪರಿವರ್ತನೆಯ ಕೇಂದ್ರವಾಗಬೇಕಿದೆ. ಇಲ್ಲವಾದಲ್ಲಿ ಆತ ಸೆರೆವಾಸದ ನಂತರವೂ ತನ್ನ ಹಿಂದಿನ ಮನೋಭಾವವನ್ನೆ ಮುಂದುವರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸದ್ಯ 88 ಮಹಿಳಾ ವೀಕ್ಷಕಿಯರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದವರು ತಮ್ಮ ಕಾರಾಗೃಹ ವ್ಯಾಪ್ತಿಯಲ್ಲಿ ಮಾದರಿಯಾಗಿ ಕೆಲಸ ಮಾಡಲಿದ್ದಾರೆ. ಅಲ್ಲದೆ, ಇತರ ಸಿಬ್ಬಂದಿ ತರಬೇತಿಯ ವಿಷಯವನ್ನು ಹಂಚಿಕೊಳ್ಳುತ್ತಾರೆ. ತನ್ಮೂಲಕ ಇಲಾಖೆ ಕೆಲಸಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತವೆ,'' ಎಂದರು.
ಕಾರಾಗೃಹ ನಿರ್ಮಾಣಕ್ಕೆ ಅನುಮೋದನೆ: ''ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಇದೀಗ 1070 ವಾರ್ಡನ್ಗಳು, 32 ಜೈಲರ್ ನೇಮಕವಾಗಿದ್ದಾರೆ. ಸದ್ಯದಲ್ಲಿಯೆ ಅವರಿಗೆ ನೇಮಕ ಆದೇಶ ದೊರೆಯಲಿದೆ. ಹಾಗಾಗಿ ಸಿಬ್ಬಂದಿ ಕೊರತೆ ನೀಗಲಿದೆ. ಇದಲ್ಲದೆ ಸದ್ಯ ರಾಜ್ಯದಲ್ಲಿ 14,400 ಅಪರಾಧಿಗಳಿದ್ದಾರೆ. ಆದರೆ 13,000 ಮಂದಿಗೆ ಮಾತ್ರ ಕಾರಾಗೃಹದ ವ್ಯವಸ್ಥೆ ಇದೆ. ಈ ವಿಷಯವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಅಂತೆಯೆ ಈಗಾಗಲೆ ಮಂಗಳೂರು, ಬೆಂಗಳೂರಿನಲ್ಲಿ ಕಾರಾಗೃಹ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುಮೋದನೆ ದೊರೆತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ ಸದ್ಯದಲ್ಲಿಯೆ ಸಮಸ್ಯೆ ದೂರವಾಗಲಿದೆ,'' ಎಂದರು.
ಆರೋಪಿ ನಲಪಾಡ್ಗೆ ಕಾರಾಗೃಹದಲ್ಲಿ ಐಷಾರಾಮಿ ಸೇವೆ ದೊರೆಯುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ''ಈ ಆರೋಪ ನಿರಾಧಾರವಾದುದು. ಸದ್ಯ ರಾಜ್ಯದಲ್ಲಿ ಆ ರೀತಿಯ ಕೆಟ್ಟ ಸನ್ನಿವೇಶವಿಲ್ಲ. ಸಿಬ್ಬಂದಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ,'' ಎಂದು ಸ್ಪಷ್ಟಪಡಿಸಿದರು.
ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿ, ''ನೀವೆಲ್ಲ ನಿಮ್ಮ ಕುಟುಂಬ ಸದಸ್ಯರಿಂದ 9 ತಿಂಗಳು ದೂರವಿದ್ದು ತರಬೇತಿ ಪಡೆದಿದ್ದೀರಿ. ಇದರಿಂದ ಭವಿಷ್ಯದಲ್ಲಿ ನೀವು ಮತ್ತಷ್ಟು ಶಿಸ್ತಿನಿಂದ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ತರಬೇತಿಯಲ್ಲಿ ಒತ್ತಡದ ನಡುವೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಅರಿತಿದ್ದೀರಿ. ವೃತ್ತಿ ಜೀವನ ಹಸನಾಗಿರಲಿ,'' ಎಂದು ಹರಸಿದರು.
ರುದ್ರವ್ವಗೆ ಸರ್ವೋತ್ತಮ ಪ್ರಶಸ್ತಿ: ತರಬೇತಿ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ನಾನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಎಲ್ಲಾ ವಿಭಾಗದಲ್ಲಿಯೂ ಉತ್ತಮ ಸಾಧನೆ ಮಾಡಿದ ಉಡುಪಿ ಜಿಲ್ಲಾ ಕಾರಾಗೃಹದ ರುದ್ರವ್ವ ಗೊಳಪ್ಪ ಕುರಬರ ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡರು. ಶಕೀನಾಬೇಗಂ ನದಾಫ್ ಎಡಿಜಿಪಿ ಮತ್ತು ಐಜಿಪಿ ಕಪ್ ಪಡೆದುಕೊಂಡರು. ಒಳಾಂಗಣ ವಿಭಾಗದಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದ ದೀಪಾ ಶಿಂಗಾಡೆಪ್ಪ ಇಡಗಲ್ಲ, ಹೊರಾಂಗಣ ವಿಭಾಗದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಲಿಲೋಫರ ಗುತ್ತೇದಾರ, ಸನ್ನಡತೆ ವಿಭಾಗದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹ ಎಂ.ಎನ್.ಮಮತಾ ಪ್ರಶಸ್ತಿ ಪಡೆದುಕೊಂಡರು. ಫೈರಿಂಗ್ ವಿಭಾಗದಲ್ಲಿ ಭಾಗ್ಯಶ್ರೀ(ಪ್ರಥಮ, ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ), ಎಂ.ಆರ್.ಬಿಂದು ದ್ವಿತೀಯ (ಮಡಿಕೇರಿ ಜಿಲ್ಲಾ ಕಾರಾಗೃಹ) ಸ್ಥಾನ ಪಡೆದರು.
ಕಾರಾಗೃಹ ವಿಭಾಗದ ಪೊಲೀಸ್ ಉಪಮಹಾನಿರೀಕ್ಷಕ ಎಚ್.ಎಸ್. ರೇವಣ್ಣ , ಹೆಚ್ಚುವರಿ ಕಾರಾಗೃಹಗಳ ಮಹಾನಿರೀಕ್ಷಕ ಜಿ. ವೀರಭದ್ರಸ್ವಾಮಿ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಪೊಲೀಸ್ ಆಯುಕ್ತ ಎ. ಸುಬ್ರಹ್ಮಣ್ಯೇಶ್ವರರಾವ್ ಸೇರಿದಂತೆ ಇನ್ನಿತರರು ಇದ್ದರು.