ಆ್ಯಪ್ನಗರ

ಮಹಿಷ ದಸರಾ ವಿರೋಧಿಸುವವರು ಕಂತ್ರಿಗಳು: ಮಹೇಶ್ ಚಂದ್ರ ಗುರು ಆಕ್ರೋಶ..

ಮಹಿಷ ಮಂಡಲ, ಮಹಿಷೂರು ಮುಂದೆ ಮೈಸೂರು ಆಗಿದೆ. ಇದಕ್ಕೆ ಮೂಲ ಕಾರಣ ಮಹಿಷಾಸುರ. ಆದರೆ ಆತನನ್ನು ರಾಕ್ಷಸನಂತೆ ಬಿಂಬಿಸಿ ಭಯ ಹುಟ್ಟಿಸಲಾಗುತ್ತಿದೆ. ಇದನ್ನು ಹೋಗಲಾಡಿಸಲು ಮಹಿಷ ದಸರಾ ಆಚರಣೆ ಮಾಡುತ್ತೇವೆ.

Vijaya Karnataka Web 22 Sep 2020, 9:35 pm

ಹೈಲೈಟ್ಸ್‌:

  • ಸರ್ಕಾರದಿಂದಲೇ ಮಹಿಷ ದಸರೆ ಆಚರಿಸಿ
  • ಮೈಸೂರಿನ ಪ್ರಗತಿಪರ ಚಿಂತಕರ ಒತ್ತಾಯ
  • ಸಂವಿಧಾನ ವಿರೋಧಿಗಳು ಮಹಿಷ ದಸರಾ ವಿರೋಧಿಸುತ್ತಾರೆ ಎಂದ ಪ್ರಗತಿಪರ ನಾಯಕರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ನಡುವೆಯೇ ಈ ಬಾರಿ ಅಕ್ಟೋಬರ್ 15ರಂದು ಮಹಿಷ ದಸರಾ ಆಚರಣೆ ಮಾಡಲು ಪ್ರಗತಿಪರ ಚಿಂತಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಜಂಟಿ ಸುದ್ಧಿಗೋಷ್ಠಿ ನಡೆಸಿದ ಪ್ರಗತಿಪರ ಚಿಂತಕ ಪ್ರೊ. ಭಗವಾನ್, ಪ್ರೊ. ಮಹೇಶ್ ಚಂದ್ರ ಗುರು ಹಾಗೂ ಮಾಜಿ ಮೇಯರ್ ಪುರುಷೋತ್ತಮ್, ಮಹಿಷ ದಸರಾ ಆಚರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಮೈಸೂರು ದಸರೆಯ ಆಚರಣೆ ಮುಖ್ಯವಲ್ಲ. ಇಲ್ಲಿ ಆಚರಣೆ ಮಾಡಬೇಕಾಗಿರುವುದು ಮಹಿಷ ದಸರೆ. ಮಹಿಷ ದಸರಾ ಕಾರ್ಯಕ್ರಮ ವಿರೋಧಿಸುವವರು ಕಂತ್ರಿಗಳು ಎಂದ ಮಹೇಶ್ ಚಂದ್ರ ಗುರು, ಮಹಿಷ ದಸರಾ ಆಚರಣೆ ವಿರೋಧಿಸುವವರು ಸಂವಿಧಾನ ವಿರೋಧಿಗಳು, ಮೂಲ ನಿವಾಸಿಗಳ ವಿರೋಧಿಗಳು, ಪ್ರಜಾಪ್ರಭುತ್ವ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

ನಾವು ಎಲ್ಲರೂ ಮರೆತಿರುವ ಚರಿತ್ರೆಯನ್ನು ನೆನಪಿಸಿಕೊಳ್ಳಲು ಈ ಮಹಿಷ ದಸರಾ ಮಾಡುತ್ತಿದ್ದೇವೆ. ನಾವು ದೇಶದ ಮೂಲ ನಿವಾಸಿಗಳು. ಇಂದು ನಮ್ಮನ್ನು ಆಳುತ್ತಿರುವವರು ಮೂಲ ನಿವಾಸಿಗಳ ವಿರೋಧಿಗಳು. ಸರ್ಕಾರ ಮಹಿಷ ದಸರಾ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೈ ಮುಗಿದು ಬೇಡುವುದಿಲ್ಲ, ಆದರೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಮಹೇಶ್ ಚಂದ್ರ ಗುರು ಹೇಳಿದರು.

ದೇವಿಯ ಸ್ವರೂಪ ಅರ್ಥ ಮಾಡಿಕೊಂಡರೆ ಮಹಿಷ ದಸರಾದ ಅಗತ್ಯವಾದರೂ ಏನಿದೆ?

ದಲಿತ ವೆಲ್ ಫೇರ್ ಟ್ರಸ್ಟ್‌ನ ಶಾಂತರಾಜು ಮಾತನಾಡಿ, ಕಳೆದ ವರ್ಷ ಮಹಿಷ ದಸರಾ ಅಚರಣೆಗೆ ಗೂಂಡಾಗಿರಿ ಪ್ರದರ್ಶಿಸುವ ಮೂಲಕ ಅಡ್ಡಿ ಪಡಿಸಲಾಯಿತು. ಕಳೆದ ವರ್ಷ ಸಂಸದ ಪ್ರತಾಪ್ ಸಿಂಹ ಅವರ ನಿರ್ದೇಶನದ ಮೇರೆಗೆ ಮಹಿಷ ದಸರಾ ಆಚರಣೆಗೆ ಹಾಕಿದ್ದ ಪೆಂಡಾಲ್ ತೆರವು ಮಾಡಿಸಿದರು.

ಅ.5ರಂದು ಚಾಮುಂಡಿಬೆಟ್ಟದಲ್ಲಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ದಸಂಸ ಪ್ರತಿಭಟನಾ ಸಭೆ

ಮಹಿಷ ಮಂಡಲ, ಮಹಿಷೂರು ಮುಂದೆ ಮೈಸೂರು ಆಗಿದೆ. ಇದಕ್ಕೆ ಮೂಲ ಕಾರಣ ಮಹಿಷಾಸುರ. ಆದರೆ ಆತನನ್ನು ರಾಕ್ಷಸನಂತೆ ಬಿಂಬಿಸಿ ಭಯ ಹುಟ್ಟಿಸಲಾಗುತ್ತಿದೆ. ಇದನ್ನು ಹೋಗಲಾಡಿಸಲು ಮಹಿಷ ದಸರಾ ಆಚರಣೆ ಮಾಡುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರಗತಿಪರ ಮುಖಂಡರು ಆಗ್ರಹಿಸಿದ್ದಾರೆ.

'ಮಹಿಷ ದಸರಾ ಆಚರಣೆಗೆ ಅಡ್ಡಿ': ಸಂಸದ ಪ್ರತಾಪ್‌ ಸಿಂಹ ಗಡಿಪಾರಿಗೆ ಆಗ್ರಹ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ