ಆ್ಯಪ್ನಗರ

ಆಸ್ತಿ ವ್ಯಾಜ್ಯ: ಮಾಜಿ ಶಾಸಕರಿಂದ ದೂರು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಅವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Vijaya Karnataka 21 Oct 2019, 5:00 am
ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಅವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Vijaya Karnataka Web property litigation complaint from former mla
ಆಸ್ತಿ ವ್ಯಾಜ್ಯ: ಮಾಜಿ ಶಾಸಕರಿಂದ ದೂರು


ದೂರಿನ ಹಿನ್ನೆಲೆಯಲ್ಲಿಪೊಲೀಸರು ಸುಮಾ ವಿಜಯ ಸೇರಿದಂತೆ ಐವರ ವಿರುದ್ಧ ಐಪಿಸಿ ಕಲಂ 380, 447, 457 ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಮಂಜುನಾಥ್‌ ಅವರು ತಮ್ಮ ಸ್ನೇಹಿತರಾದ ಎಂ.ಪಿ.ರವೀಂದ್ರ ಅವರಿಗೋಸ್ಕರ ವಿವಿ ಮೊಹಲ್ಲಾದಲ್ಲಿಪ್ಲಾಟ್‌ ಖರೀದಿಸಲು ಮುಂದಾಗಿದ್ದು, ಅದರಂತೆ ಅಪಾರ್ಟ್‌ಮೆಂಟ್‌ವೊಂದರಲ್ಲಿಪೆಂಟ್‌ ಹೌಸ್‌ ಖರೀದಿಸಲು ನೆರವಾಗಿದ್ದರು. ರವೀಂದ್ರ ಅವರು 10 ಲಕ್ಷ ರೂ. ಹಣವನ್ನು ಪೆಂಟ್‌ ಹೌಸ್‌ ಖರೀದಿಗೆ ನೀಡಿದ್ದು, ಉಳಿದ 26 ಲಕ್ಷ ರೂ. ಹಣವನ್ನು ಮಂಜುನಾಥ್‌ ನೀಡಿದ್ದರು. ಬಳಿಕ 25 ಲಕ್ಷ ರೂ. ವೆಚ್ಚದಲ್ಲಿನವೀಕರಣ ಕೂಡ ಮಾಡಿಸಿದ್ದರು. ನಂತರದ ದಿನಗಳಲ್ಲಿರವೀಂದ್ರ ಅವರು ಪೆಂಟ್‌ಹೌಸ್‌ ನೀವೇ ಬಳಸಿ ಎಂದು 20 ಲಕ್ಷ ರೂ. ಪಡೆದು, ಮುಂದಿನ ದಿನಗಳಲ್ಲಿಪೆಂಟ್‌ ಹೌಸ್‌ ಅನ್ನು ನಿಮ್ಮ ಹೆಸರಿಗೆ ಬರೆದುಕೊಡುವುದಾಗಿ ಹೇಳಿದ್ದರು. ಈ ಮಧ್ಯೆ ರವೀಂದ್ರ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಕೀ ನನ್ನ ಬಳಿಯೇ ಇತ್ತು. ಅದನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ಕೂಡ ನೇಮಕ ಮಾಡಿದ್ದೆ. ಕಳೆದ ಅ.13ರಂದು ರವೀಂದ್ರ ಅವರ ಸೋದರಿ ಸುಮಾ ವಿಜಯ ಅವರು ವಿವಿ ಪುರಂ ಪೊಲೀಸ್‌ ಠಾಣೆಗೆ ಬಂದು ನಮ್ಮ ತಮ್ಮ ರವೀಂದ್ರಗೆ ಸೇರಿದ ಪೆಂಟ್‌ಹೌಸ್‌ನ ಬೀಗ ತೆಗೆಸಿಕೊಡುವಂತೆ ಕೇಳಿದ್ದು, ನಾನು ಈ ವಿಚಾರವನ್ನು ನನ್ನ ಆಪ್ತ ಕಾರ್ಯದರ್ಶಿ ಮೂಲಕ ತಿಳಿದುಕೊಂಡು ನಡೆದಿರುವ ವಿಷಯವನ್ನು ಹೇಳಿದ್ದು, ಮನೆ ನನ್ನ ಹೆಸರಿಗೆ ಆಗಿರುವ ಬಗ್ಗೆ ಇರುವ ದಾಖಲಾತಿಗಳೊಂದಿಗೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ಸುಮಾ ವಿಜಯ ಅವರು ಅಂದು ರಾತ್ರಿ ನೇರವಾಗಿ ಅಪಾರ್ಟ್‌ಮೆಂಟ್‌ನ ಪೆಂಟ್‌ಹೌಸ್‌ಗೆ ಐದು ಮಂದಿಯೊಂದಿಗೆ ತೆರಳಿ ಮನೆಯ ಬೀಗ ಹೊಡೆದು ಮನೆಯಲ್ಲಿದ್ದ 17.5 ಲಕ್ಷ ರೂ. ನಗದು ಮತ್ತು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.

ಈ ಸಂಬಂಧ ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ