ಆ್ಯಪ್ನಗರ

ವಿವಾಹಕ್ಕೆ ಸಿದ್ಧತೆ: ಅಪ್ರಾಪ್ತೆ ರಕ್ಷಣೆ

ಅಪ್ರಾಪ್ತೆಗೆ ವಿವಾಹ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿವಾಹ ತಡೆದು, ಆಕೆಯನ್ನು ರಕ್ಷ ಣೆ ಮಾಡಿದ್ದಾರೆ.

Vijaya Karnataka 31 May 2019, 5:00 am
ತಿ.ನರಸೀಪುರ : ಅಪ್ರಾಪ್ತೆಗೆ ವಿವಾಹ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿವಾಹ ತಡೆದು, ಆಕೆಯನ್ನು ರಕ್ಷ ಣೆ ಮಾಡಿದ್ದಾರೆ.
Vijaya Karnataka Web news/mysuru/protection
ವಿವಾಹಕ್ಕೆ ಸಿದ್ಧತೆ: ಅಪ್ರಾಪ್ತೆ ರಕ್ಷಣೆ


ತಾಲೂಕಿನ ಮರಡೀಪುರ ಗ್ರಾಮದ ಬಳಿ ಪುರಾತನ ಪ್ರಸಿದ್ಧ ಶ್ರೀ ಮರುಡೇಶ್ವರ ದೇವಾಲಯದಲ್ಲಿ ಗುರುವಾರ ಅಪ್ರಾಪ್ತೆಗೆ ವಿವಾಹ ನೆರವೇರಿಸುವ ಬಗ್ಗೆ ಮಾಹಿತಿ ಆಧರಿಸಿ ಸಿಡಿಪಿಒ ಬಿ.ಎನ್‌.ಬಸವರಾಜು ನೇತೃತ್ವದಲ್ಲಿ ದಾಳಿ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಮೂಗೂರು ಗ್ರಾಮದ ಸಂತೋಷ್‌ ಜತೆ ವಿವಾಹಕ್ಕೆ ಸಿದ್ಧಗೊಳಿಸಲಾಗಿದ್ದ ಬಾಲಕಿಯನ್ನು ರಕ್ಷಣೆ ಮಾಡಿದರು. ನಂತರ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.

ಅಪ್ರಾಪ್ತ ಮಕ್ಕಳ ವಿವಾಹ ಕಾನೂನು ಬಾಹಿರವಾಗಿದೆ. ಇಂತಹ ವಿವಾಹ ನಡೆಸುವ ಪೋಷಕರು ಹಾಗೂ ಯುವಕನ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದೇ ವೇಳೆ ಎಚ್ಚರಿಕೆ ನೀಡಿದರು.

ಕಾರ್ಯಾಚರಣೆಯಲ್ಲಿ ತಲಕಾಡು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪಿ.ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶಾ, ನಂದಿನಿ ಹಾಗೂ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ