ಆ್ಯಪ್ನಗರ

ಮಹಾ ರಥೋತ್ಸವಕ್ಕೆ ಅವಕಾಶ ಕೊಡಿ, ನಂಜನಗೂಡಿನಲ್ಲಿ ಪ್ರತಿಭಟನೆ

ಕಳೆದ ವರ್ಷವೂ ಜಾತ್ರೆ ನಡೆದಿಲ್ಲ . ಇದು ಎಷ್ಟೋ ಜನರ ಭಾವನೆಗೆ ಧಕ್ಕೆಯಾಗಿದೆ. ಈ ವರ್ಷ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ . ಈಗ ಆದೇಶ ಹೊರಡಿಸಿರೋದು ನೋವುಂಟು ಮಾಡಿದೆ ಅಂತ ಬೇಸರ ವ್ಯಕ್ತಪಡಿಸಿದರು.

Vijaya Karnataka Web 17 Mar 2021, 3:19 pm
ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಪಂಚ ಮಹಾರಥೋತ್ಸವ ರದ್ದು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ನಂಜನಗೂಡು ನಿವಾಸಿಗಳು ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web ನಂಜನಗೂಡು ಪ್ರತಿಭಟನೆ
ನಂಜನಗೂಡು ಪ್ರತಿಭಟನೆ


ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು, ‘ಧಾರ್ಮಿಕ ಕಾರ್ಯಗಳು ನಡೆಯದಿದ್ದಲ್ಲಿ ತಾಲೂಕಿಗೆ ಕೆಡುಕಾಗುವ ಆತಂಕವಿದೆ. ಜಿಲ್ಲಾಡಳಿತಕ್ಕೂ ಇದು ಕೆಡುಕಾಗಲಿದೆ. ಹೀಗಾಗಿ ನಂಜನಗೂಡಿನ ಜನತೆಗೆ ಸೀಮಿತಗೊಳಿಸಿ ರಥೋತ್ಸವವನ್ನ ಆಚರಿಸಲು ಅನುಮತಿ ನೀಡಿ’ ಎಂದು ಒತ್ತಾಯಿಸಿದರು. ಅಲ್ಲದೇ ಭಕ್ತಾಧಿಗಳು ವಿವಿಧ ಘೋಷಣೆ ಕೂಗಿದರು.

ಕಳೆದ ವರ್ಷವೂ ಜಾತ್ರೆ ನಡೆದಿಲ್ಲ . ಇದು ಎಷ್ಟೋ ಜನರ ಭಾವನೆಗೆ ಧಕ್ಕೆಯಾಗಿದೆ. ಈ ವರ್ಷ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ . ಈಗ ಆದೇಶ ಹೊರಡಿಸಿರೋದು ನೋವುಂಟು ಮಾಡಿದೆ ಅಂತ ಬೇಸರ ವ್ಯಕ್ತಪಡಿಸಿದರು. ಕೊರೊನಾ ಬಗ್ಗೆ ನಮಗೂ ಅರಿವಿದೆ. ಸಕಲ ಮುನ್ನೆಚ್ಚರಿಕಾ ಕ್ರಮ ವಹಿಸಿ ಜಾತ್ರೆ ನಡೆಸುತ್ತೇವೆ. ತಾಲೂಕಿನವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಇದಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂದು ಭಕ್ತರು ಆಗ್ರಹಿಸಿದರು.

ಇತ್ತೀಚೆಗೆ ಕೊರೊನಾ ಸೋಂಕು ಉಲ್ಬಣ ಆಗುತ್ತಿರುವುದರಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದೊಡ್ಡ ಜಾತ್ರೆಯನ್ನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ. ಕೇವಲ ಸಾಂಪ್ರದಾಯಿಕ ಹಾಗೂ ಸರಳ ರಥೋತ್ಸವ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಮಾ. 19 ರಿಂಧ ಮಾ 30ರವರೆಗೆ ನಡೆಯಬೇಕಿದ್ದ ವಿಜೃಂಭಣೆಯ ಧಾರ್ಮಿಕ ಕಾರ್ಯವನ್ನು ಮೊಟಕುಗೊಳಿಸಿ ಸಂಪ್ರದಾಯಬದ್ಧ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಾಲಯದ ಅರ್ಚಕರು, ಸಿಬ್ಬಂದಿ ಹಾಗೂ ಸ್ಥಳೀಯರ ಉಪಸ್ಥಿತಿಗೆ ಸೀಮಿತಗೊಳಿಸಿ ದೇವಾಲಯದ ಒಳಾವರಣದಲ್ಲಿ ನಡೆಸಲು ಮಾತ್ರ ಅನುಮತಿ ನೀಡಿದ್ರು . ಹೊರರಾಜ್ಯ, ಹೊರ ಜಿಲ್ಲೆ, ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ