ಕೃಷ್ಣರಾಜನಗರ: ಸೇನೆಯಿಂದ ನಿವೃತ್ತರಾದ ಯೋಧರೊಬ್ಬರನ್ನು ಗ್ರಾಮದಲ್ಲಿ ಸನ್ಮಾನಿಸಲು ಮೆರವಣಿಗೆಯಲ್ಲಿ ಕರೆದೊಯುತ್ತಿದ್ದಾಗ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಅವರು ಮೆರವಣಿಗೆ ತಡೆದು ಅವಮಾನಿಸಿದ್ದಾರೆ ಎಂದು ಆರೋಪಿಸಿ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮಸ್ಥರು ಪಟ್ಟಣ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
''ಬೆಳಗಾವಿಯ ಮರಾಠ ಇನ್ಪ್ಯಾಂಟ್ರಿಯಲ್ಲಿ ಸೇವೆ ಸಲ್ಲಿಸಿ 15 ದಿನಗಳ ಹಿಂದೆ ನಿವೃತ್ತರಾದ ತಾಲೂಕಿನ ಚಿಕ್ಕವಡ್ಡರಗುಡಿ ನಿವಾಸಿ ಸಿ.ಎಂ.ಶ್ರೀಧರ್ ಅವರನ್ನು ಗ್ರಾಮದಲ್ಲಿ ಸನ್ಮಾನಿಸಲು 50 ಕ್ಕೂ ಹೆಚ್ಚು ಮಂದಿ ತೆರೆದ ಜೀಪಿನಲ್ಲಿ ಪಟ್ಟಣದ ಮುಖಾಂತರ ಕರೆದುಕೊಂಡು ಹೋಗುತ್ತಿದ್ದಾಗ ಸರ್ಕಲ್ ಇನ್ಸ್ಪೆಕ್ಟರ್ ಅವರು ಮೆರವಣಿಗೆ ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ ಚಿಕ್ಕವಡ್ಡರಗುಡಿ ಗ್ರಾಮದ ಮುಖಂಡ ಧನಪಾಲ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಮೆರವಣಿಗೆ ಮಾಡುತ್ತಿದ್ದ ಯುವಕರು ಮತ್ತು ಯೋಧನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ನೂರಾರು ಯುವಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಸಿಪಿಐ ವಿರುದ್ಧ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಗ ಸ್ಥಳಕ್ಕೆ ಸಿಪಿಐ ಆಗಮಿಸಿದಾಗ ಪ್ರತಿಭಟನಾಕಾರರು ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಚಿಕ್ಕವಡ್ಡರಗುಡಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ''ನಾವು ಪುಂಡಾಟ ನಡೆಸಲು ಬಂದಿರಲಿಲ್ಲ . ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧನಿಗೆ ಗೌರವ ನೀಡಿ ಮೆರವಣಿಗೆ ಮಾಡುತ್ತಿದ್ದೆವು,'' ಎಂದರು.
ಈ ವೇಳೆ ಪೊಲೀಸ್ ಅಧಿಕಾರಿ ನಿವೃತ್ತ ಯೋಧನಿಗೆ ಹಾರ ಹಾಕಿ ಗೌರವಿಸಿದರು. ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
-------------------
ನನ್ನನ್ನು ಗೌರವಿಸಲು ಮೆರವಣಿಗೆಯಲ್ಲಿ ಬಂದ ಚಿಕ್ಕವಡ್ಡರಗುಡಿ ಗ್ರಾಮಸ್ಥರಿಗೆ ಪೊಲೀಸರು ಅಪಮಾನ ಮಾಡಿದ್ದಾರೆ. ದೇಶ ಸೇವೆ ಮಾಡಿದ ಯೋಧನನ್ನು ಗೌರವಿಸುವುದು ತಪ್ಪೇ?
ಪೊಲೀಸ್ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು.
-ಸಿ.ಎಂ.ಶ್ರೀಧರ್, ನಿವೃತ್ತ ಯೋಧ.
''ಬೆಳಗಾವಿಯ ಮರಾಠ ಇನ್ಪ್ಯಾಂಟ್ರಿಯಲ್ಲಿ ಸೇವೆ ಸಲ್ಲಿಸಿ 15 ದಿನಗಳ ಹಿಂದೆ ನಿವೃತ್ತರಾದ ತಾಲೂಕಿನ ಚಿಕ್ಕವಡ್ಡರಗುಡಿ ನಿವಾಸಿ ಸಿ.ಎಂ.ಶ್ರೀಧರ್ ಅವರನ್ನು ಗ್ರಾಮದಲ್ಲಿ ಸನ್ಮಾನಿಸಲು 50 ಕ್ಕೂ ಹೆಚ್ಚು ಮಂದಿ ತೆರೆದ ಜೀಪಿನಲ್ಲಿ ಪಟ್ಟಣದ ಮುಖಾಂತರ ಕರೆದುಕೊಂಡು ಹೋಗುತ್ತಿದ್ದಾಗ ಸರ್ಕಲ್ ಇನ್ಸ್ಪೆಕ್ಟರ್ ಅವರು ಮೆರವಣಿಗೆ ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ ಚಿಕ್ಕವಡ್ಡರಗುಡಿ ಗ್ರಾಮದ ಮುಖಂಡ ಧನಪಾಲ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಮೆರವಣಿಗೆ ಮಾಡುತ್ತಿದ್ದ ಯುವಕರು ಮತ್ತು ಯೋಧನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ನೂರಾರು ಯುವಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಸಿಪಿಐ ವಿರುದ್ಧ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಗ ಸ್ಥಳಕ್ಕೆ ಸಿಪಿಐ ಆಗಮಿಸಿದಾಗ ಪ್ರತಿಭಟನಾಕಾರರು ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಚಿಕ್ಕವಡ್ಡರಗುಡಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ''ನಾವು ಪುಂಡಾಟ ನಡೆಸಲು ಬಂದಿರಲಿಲ್ಲ . ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧನಿಗೆ ಗೌರವ ನೀಡಿ ಮೆರವಣಿಗೆ ಮಾಡುತ್ತಿದ್ದೆವು,'' ಎಂದರು.
ಈ ವೇಳೆ ಪೊಲೀಸ್ ಅಧಿಕಾರಿ ನಿವೃತ್ತ ಯೋಧನಿಗೆ ಹಾರ ಹಾಕಿ ಗೌರವಿಸಿದರು. ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
-------------------
ನನ್ನನ್ನು ಗೌರವಿಸಲು ಮೆರವಣಿಗೆಯಲ್ಲಿ ಬಂದ ಚಿಕ್ಕವಡ್ಡರಗುಡಿ ಗ್ರಾಮಸ್ಥರಿಗೆ ಪೊಲೀಸರು ಅಪಮಾನ ಮಾಡಿದ್ದಾರೆ. ದೇಶ ಸೇವೆ ಮಾಡಿದ ಯೋಧನನ್ನು ಗೌರವಿಸುವುದು ತಪ್ಪೇ?
ಪೊಲೀಸ್ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು.
-ಸಿ.ಎಂ.ಶ್ರೀಧರ್, ನಿವೃತ್ತ ಯೋಧ.