ಆ್ಯಪ್ನಗರ

ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತಿಭಟನೆ

ರಂಗಕರ್ಮಿ ಜನಾರ್ದನ್‌(ಜನ್ನಿ) ಅವರ ಬಗ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬುಧವಾರ ಬಹುರೂಪಿ ಅಂಗಳದಲ್ಲಿಯೇ ಪ್ರತಿಭಟನೆ ನಡೆಯಿತು.

Vijaya Karnataka 20 Feb 2020, 5:00 am
ಜನ್ನಿ ವಿರುದ್ಧದ ಆರೋಪಕ್ಕೆ ಪ್ರತಿಭಟನಕಾರರ ಆಕ್ರೋಶ
Vijaya Karnataka Web Addand karyappa


ಮೈಸೂರು:
ರಂಗಕರ್ಮಿ ಜನಾರ್ದನ್‌(ಜನ್ನಿ) ಅವರ ಬಗ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬುಧವಾರ ಬಹುರೂಪಿ ಅಂಗಳದಲ್ಲಿಯೇ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ ಕೆ. ಎಸ್‌. ಶಿವರಾಂ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು, ನೆಲೆ ಹಿನ್ನೆಲೆ ಸಂಘಟನೆಯ ಗೋಪಾಲಕೃಷ್ಣ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಜನ ಬಹುರೂಪಿ ಪುಸ್ತಕ ಮಳಿಗೆ ಎದುರು 20 ನಿಮಿಷ ಕಾಲ ಪ್ರತಿಭಟಿಸಿದರು.

ಅಡ್ಡಂಡ ಕಾರ್ಯಪ್ಪ ಅವರು ರಂಗಾಯಣ ಮಾಜಿ ನಿರ್ದೇಶಕ ಜನ್ನಿ ಅವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ರಂಗಾಯಣದಲ್ಲಿದ್ದಾಗ ಕುಟುಂಬದವರಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂಬ ಆರೋಪ ಸರಿಯಲ್ಲ. ಒಂದು ಕಾಲದಲ್ಲಿಟಿಪ್ಪು ಬಗ್ಗೆ ಕಾರ್ಯಪ್ಪ ಅವರು ಒಳ್ಳೆಯ ನಿಲುವು ಹೊಂದಿದ್ದರು. ಆದರೆ ಈಗ ಅಧಿಕಾರಕ್ಕಾಗಿ ಟಿಪ್ಪು ವಿರುದ್ಧ ಮಾತಾಡುತ್ತಿದ್ದಾರೆ. ಅಧಿಕಾರ ನೀಡಿರುವ ಜನರನ್ನು ಓಲೈಸಲು ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಇದು ಸಾಂಕೇತಿಕ ಪ್ರತಿಭಟನೆ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

''ರಂಗಸಮಾಜದ ಮೂಲಕವಾಗಿ ಆಯ್ಕೆಯಾಗುವ ಬದಲು ಅಕ್ರಮವಾಗಿ ರಂಗಾಯಣ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಕೂಡಲೇ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು,'' ಎಂದು ಒತ್ತಾಯಿಸಿದರು.

ಟಿ. ಗುರುರಾಜ್‌, ಕೆ. ದೀಪಕ್‌, ಲಕ್ಷ್ಮೀನಾರಾಯಣ್‌, ಗೋಪಾಲಕೃಷ್ಣ, ಜಗನ್ನಾಥ್‌, ಕುಮಾರ್‌, ದೇವರಾಜು, ಪುಟ್ನಂಜಯ್ಯ ಮತ್ತಿತರರು ಹಾಜರಿದ್ದರು.

ನಾ ಸತ್ಯವನ್ನೇ ಹೇಳಿದ್ದೇನೆ

ಎಲ್ಲಿಯೂ ನಾನು ಹೊರಗೊಂದು, ಒಳಗೊಂದು ಮಾತಾಡಿಲ್ಲ. ನಾನೊಬ್ಬ ಕೊಡವ. ನಿಜ ಹೇಳುವುದು, ಇದ್ದದ್ದನ್ನು ಇದ್ದ ಹಾಗೆ ಹೇಳುವುದು ಕೊಡವನ ಲಕ್ಷಣ. ಅದನ್ನು ನಾನು ಮಾಡಿದ್ದೇನೆ. ನನ್ನ ಅಜೆಂಡ ರಂಗಭೂಮಿ. ಸರಕಾರ ನನ್ನ ಸಾಮರ್ಥ್ಯ ಅರಿತು ಈ ಸ್ಥಾನಕ್ಕೆ ಆಯ್ಕೆ ಮಾಡಿದೆ. ನನ್ನ ತಪ್ಪು ಇದ್ದರೆ ಟೀಕಿಸಲಿ. ವೈಯಕ್ತಿಕವಾಗಿ ಟೀಕಿಸುವುದಿದ್ದರೆ ರಂಗಾಯಣದ ಹೊರಗೆ ಮಾತಾಡಲಿ ಎಂದು ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯಿಸಿದ್ದಾರೆ .

ನಾನು ರಂಗಾಯಣ ಕಟ್ಟಲು ಬಂದಿದ್ದೇನೆ, ಬಿಜೆಪಿ ಬಾವುಟ ಹಿಡಿದು, ಸಂಘದ ಸಂದೇಶ ಸಾರುವುದಿಲ್ಲ. ನನಗೆ ಬೇರೆ ಅಜೆಂಡಾ ಇಲ್ಲ ಎಂದು ಪ್ರತಿಭಟನಕಾರರಿಗೆ ಉತ್ತರಿಸಿದರು.

------------

ವಜಾಗೊಳಿಸಿ
ಏಕಮುಖಿ ಸಂಸ್ಕೃತಿಯ ವ್ಯಕ್ತಿ ರಂಗಾಯಣ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರಾಜಕೀಯ ಲಾಭದಿಂದ ಬಂದಿರುವ ಇವರನ್ನು ವಜಾಗೊಳಿಸಬೇಕು.
-ಕೆ.ಆರ್‌.ಗೋಪಾಲ್‌ಕೃಷ್ಣ, ರಂಗಕರ್ಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ