30 ದಿನಗಳಲ್ಲಿ ಕಬ್ಬು ಅರೆಯಲಿದೆ ಪಾಂಡವಪುರ ಸಕ್ಕರೆ ಕಾರ್ಖಾನೆ: ಶಾಸಕ ಮುರುಗೇಶ್ ನಿರಾಣಿ ಭರವಸೆ
ಕಾರ್ಖಾನೆ ತನ್ನ ಕಾರ್ಯ ನಿಲ್ಲಿಸಿ ಮೂರು ವರ್ಷವಾಗಿದೆ. ಎಲ್ಲಾ ಯಂತ್ರಗಳು ತುಕ್ಕು ಹಿಡಿದಿವೆ. ಇದನ್ನು ಸವಾಲಾಗಿ ತೆಗೆದುಕೊಂಡಿದ್ದು, ಕೇವಲ 30 ದಿನಗಳಲ್ಲಿ ಪುನಾರಂಭಿಸಿ ತೋರಿಸುತ್ತೇನೆ ಎಂದು ಶಾಸಕ ಮುರುಗೇಶ್ ನಿರಾಣಿ ಭರವಸೆ ನೀಡಿದ್ದಾರೆ. ಸಕ್ಕರೆ ಉತ್ಪಾದನೆಯ ಜೊತೆ ಜೊತೆಗೆ ವಿದ್ಯುತ್, ಈಥನಾಲ್, ರೆಕ್ಟಿಪೈಡ್, ಸಿಒ2, ಸಿಎನ್ಐ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಹಲವು ಉಪ ಉತ್ಪನ್ನಗಳ ತಯಾರಿಕೆಗೂ ಒತ್ತು ನೀಡಲಾಗುವುದು ಎಂದಿದ್ದಾರೆ.
Vijaya Karnataka Web 28 Jun 2020, 8:22 am
ಮೈಸೂರು: ಮುಂದಿನ ದಿನಗಳಲ್ಲಿ ಕಬ್ಬು ಬೆಳೆಗಾರರ ಎಲ್ಲಾ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲಾಗುವುದು ಎಂದು ಮಾಜಿ ಸಚಿವ, ಶಾಸಕ ಮುರುಗೇಶ ನಿರಾಣಿ ತಿಳಿಸಿದರು.
ಮೈಸೂರಿನ ಜಿಲ್ಲಾಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
''ಸರಕಾರ ರೈತರು ಬೆಳೆದ ಕಬ್ಬನ್ನು ಖರೀದಿಸಿ, ಕಾಲ ಕಾಲಕ್ಕೆ ಅವರಿಗೆ ಹಣ ಸಂದಾಯ ಮಾಡುವುದರ ಜೊತೆಗೆ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡುವ ಮೂಲಕ ರೈತರ ನೆರವಿಗೆ ನಿಲ್ಲಲಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ನಿರ್ವಹಣೆ ಜವಾಬ್ದಾರಿ ನಮಗೆ ದೊರೆತಿದೆ. ಈಗಾಗಲೇ ನಮ್ಮ ಸುಪರ್ದಿಯಲ್ಲಿ ಹಲವು ಕಾರ್ಖಾನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಈ ಕಾರ್ಖಾನೆಯನ್ನೂ ಯಶಸ್ವಿಯಾಗಿ ಮುನ್ನಡೆಸಲಾಗುವುದು,''ಎಂದರು.
''ನಾನು ಬಿಜೆಪಿ ಶಾಸಕ ಹೌದು, ಜೊತೆಗೆ ಉದ್ಯಮಿಯಾಗಿದ್ದುಕೊಂಡು ಪಕ್ಷಾತೀತ ಮತ್ತು ಜಾತ್ಯತೀತವಾಗಿದ್ದೇನೆ. ಇದರಿಂದಲೇ ನಾನು ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಯಿತು. ಕಾರ್ಖಾನೆ ಯಶಸ್ವಿಯಾಗಿ ಕಾರ್ಯಾರಂಭ ಮಾಡಲು ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರ ಕೇಳಿದ್ದೇನೆ. ಈ ಭಾಗದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ಅದನ್ನೂ ಮಾಡುತ್ತೇನೆ. ಆದರೆ ಕಾರ್ಖಾನೆಯಲ್ಲಿ ರಾಜಕೀಯ ಸುಳಿಯಲು ಬಿಡುವುದಿಲ್ಲ,''ಎಂದರು.
''ಕಾರ್ಖಾನೆ ತನ್ನ ಕಾರ್ಯ ನಿಲ್ಲಿಸಿ ಮೂರು ವರ್ಷವಾಗಿದ್ದು, ಎಲ್ಲಾ ಯಂತ್ರಗಳು ತುಕ್ಕು ಹಿಡಿದಿವೆ. ಈಗ ಅದು ನನ್ನ ಕೈ ಸೇರಿದೆ. ಇದನ್ನು ಸವಾಲಾಗಿ ತೆಗೆದುಕೊಂಡಿರುವ ನಾನು ಕೇವಲ 30 ದಿನಗಳಲ್ಲಿ ಪುನಾರಂಭಿಸಿ ತೋರಿಸುತ್ತೇನೆ. ಸಕ್ಕರೆ ಉತ್ಪಾದನೆಯ ಜೊತೆ ಜೊತೆಗೆ ವಿದ್ಯುತ್, ಈಥನಾಲ್, ರೆಕ್ಟಿಪೈಡ್, ಸಿಒ2, ಸಿಎನ್ಐ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಹಲವು ಉಪ ಉತ್ಪನ್ನಗಳ ತಯಾರಿಕೆಗೂ ಒತ್ತು ನೀಡಲಾಗುವುದು,'' ಎಂದರು.
''ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಹಾಗೂ ಈ ಭಾಗದ ರೈತರಿಗೆ ನೆರವಾಗುವುದು ನಮ್ಮ ಮೊದಲ ಆದ್ಯತೆಯಾಗಿದೆ. ಉತ್ತಮ ಬೆಲೆಗೆ ಕಬ್ಬನ್ನು ರೈತರಿಂದ ಖರೀದಿಸಿ, ಕಾಲ ಕಾಲಕ್ಕೆ ಹಣ ಪಾವತಿಸುವುದು, ಸಬ್ಸಿಡಿ ದರದಲ್ಲಿ ಉತ್ತಮ ಬಿತ್ತನೆ ಬೀಜ, ಕ್ರಿಮಿನಾಶಕ ನೀಡುವ ಮೂಲಕ ವೈಜ್ಞಾನಿಕ ರೀತಿಯಲ್ಲಿ ಕಬ್ಬು ಬೆಳೆಗೆ ಪ್ರೋತ್ಸಾಹಿಸಲಾಗುವುದು. ಇದರಿಂದ ರೈತರ ಜೀವನ ಮಟ್ಟವೂ ಸುಧಾರಿಸಲಿದೆ. ಹಾಗೆಯೇ ಸ್ಥಳೀಯ ಮಟ್ಟದ ಯುವಕ, ಯುವತಿಯರಿಗೆ ಉದ್ಯೋಗವಕಾಶಗಳನ್ನು ನೀಡುತ್ತೇವೆ,''ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಕಾರ್ಯದರ್ಶಿ ಲೋಕೇಶ್ ಬಾಬು, ಉಪಾಧ್ಯಕ್ಷ ಸುಬ್ರಹ್ಮಣ್ಯ ಇದ್ದರು.
ಮೈಸೂರಿನ ಜಿಲ್ಲಾಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
''ಸರಕಾರ ರೈತರು ಬೆಳೆದ ಕಬ್ಬನ್ನು ಖರೀದಿಸಿ, ಕಾಲ ಕಾಲಕ್ಕೆ ಅವರಿಗೆ ಹಣ ಸಂದಾಯ ಮಾಡುವುದರ ಜೊತೆಗೆ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡುವ ಮೂಲಕ ರೈತರ ನೆರವಿಗೆ ನಿಲ್ಲಲಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ನಿರ್ವಹಣೆ ಜವಾಬ್ದಾರಿ ನಮಗೆ ದೊರೆತಿದೆ. ಈಗಾಗಲೇ ನಮ್ಮ ಸುಪರ್ದಿಯಲ್ಲಿ ಹಲವು ಕಾರ್ಖಾನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಈ ಕಾರ್ಖಾನೆಯನ್ನೂ ಯಶಸ್ವಿಯಾಗಿ ಮುನ್ನಡೆಸಲಾಗುವುದು,''ಎಂದರು.
''ನಾನು ಬಿಜೆಪಿ ಶಾಸಕ ಹೌದು, ಜೊತೆಗೆ ಉದ್ಯಮಿಯಾಗಿದ್ದುಕೊಂಡು ಪಕ್ಷಾತೀತ ಮತ್ತು ಜಾತ್ಯತೀತವಾಗಿದ್ದೇನೆ. ಇದರಿಂದಲೇ ನಾನು ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಯಿತು. ಕಾರ್ಖಾನೆ ಯಶಸ್ವಿಯಾಗಿ ಕಾರ್ಯಾರಂಭ ಮಾಡಲು ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರ ಕೇಳಿದ್ದೇನೆ. ಈ ಭಾಗದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ಅದನ್ನೂ ಮಾಡುತ್ತೇನೆ. ಆದರೆ ಕಾರ್ಖಾನೆಯಲ್ಲಿ ರಾಜಕೀಯ ಸುಳಿಯಲು ಬಿಡುವುದಿಲ್ಲ,''ಎಂದರು.
''ಕಾರ್ಖಾನೆ ತನ್ನ ಕಾರ್ಯ ನಿಲ್ಲಿಸಿ ಮೂರು ವರ್ಷವಾಗಿದ್ದು, ಎಲ್ಲಾ ಯಂತ್ರಗಳು ತುಕ್ಕು ಹಿಡಿದಿವೆ. ಈಗ ಅದು ನನ್ನ ಕೈ ಸೇರಿದೆ. ಇದನ್ನು ಸವಾಲಾಗಿ ತೆಗೆದುಕೊಂಡಿರುವ ನಾನು ಕೇವಲ 30 ದಿನಗಳಲ್ಲಿ ಪುನಾರಂಭಿಸಿ ತೋರಿಸುತ್ತೇನೆ. ಸಕ್ಕರೆ ಉತ್ಪಾದನೆಯ ಜೊತೆ ಜೊತೆಗೆ ವಿದ್ಯುತ್, ಈಥನಾಲ್, ರೆಕ್ಟಿಪೈಡ್, ಸಿಒ2, ಸಿಎನ್ಐ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಹಲವು ಉಪ ಉತ್ಪನ್ನಗಳ ತಯಾರಿಕೆಗೂ ಒತ್ತು ನೀಡಲಾಗುವುದು,'' ಎಂದರು.
''ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಹಾಗೂ ಈ ಭಾಗದ ರೈತರಿಗೆ ನೆರವಾಗುವುದು ನಮ್ಮ ಮೊದಲ ಆದ್ಯತೆಯಾಗಿದೆ. ಉತ್ತಮ ಬೆಲೆಗೆ ಕಬ್ಬನ್ನು ರೈತರಿಂದ ಖರೀದಿಸಿ, ಕಾಲ ಕಾಲಕ್ಕೆ ಹಣ ಪಾವತಿಸುವುದು, ಸಬ್ಸಿಡಿ ದರದಲ್ಲಿ ಉತ್ತಮ ಬಿತ್ತನೆ ಬೀಜ, ಕ್ರಿಮಿನಾಶಕ ನೀಡುವ ಮೂಲಕ ವೈಜ್ಞಾನಿಕ ರೀತಿಯಲ್ಲಿ ಕಬ್ಬು ಬೆಳೆಗೆ ಪ್ರೋತ್ಸಾಹಿಸಲಾಗುವುದು. ಇದರಿಂದ ರೈತರ ಜೀವನ ಮಟ್ಟವೂ ಸುಧಾರಿಸಲಿದೆ. ಹಾಗೆಯೇ ಸ್ಥಳೀಯ ಮಟ್ಟದ ಯುವಕ, ಯುವತಿಯರಿಗೆ ಉದ್ಯೋಗವಕಾಶಗಳನ್ನು ನೀಡುತ್ತೇವೆ,''ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಕಾರ್ಯದರ್ಶಿ ಲೋಕೇಶ್ ಬಾಬು, ಉಪಾಧ್ಯಕ್ಷ ಸುಬ್ರಹ್ಮಣ್ಯ ಇದ್ದರು.