ಆ್ಯಪ್ನಗರ

ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ - ಸಿಇಒ, ಡಿಸಿ ವಿರುದ್ಧ ಇತಿಹಾಸಕಾರರ ಆಕ್ರೋಶ

ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಗ್ರಾಮೀಣ ಭಾಗದ ಜನರು ದಸರಾಗೆ ಬರದಂತೆ ಆದೇಶ ಹೊರಡಿಸಿರುವ ಜಿಪಂ ಸಿಇಓ ಭಾರತಿ ಡಿ.ಯವರನ್ನು ವರ್ಗಾವಣೆ ಮಾಡಬೇಕು ಎಂದು ಇತಿಹಾಸಕಾರರು ಆಗ್ರಹಿಸಿದ್ದಾರೆ.

Vijaya Karnataka Web 15 Oct 2020, 1:25 pm
ಮೈಸೂರು : ಸಾರ್ವಜನಿಕರು ಹೆಚ್ಚು ಸೇರಬಹುದಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರಾಕರಣೆ ಹಾಗೂ ದಸರಾಗೆ ಗ್ರಾಮೀಣ ಜನರಿಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಭಕ್ತರು ಹಾಗೂ ಇತಿಹಾಸಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web Chamundi Hill


ಸುದ್ದಿಗಾರರೊಂದಿಗೆ ಮಾತನಾಡಿದ ಇತಿಹಾಸಕಾರ ಪ್ರೊ. ನಂಜರಾಜೇ ಅರಸ್ ಹಾಗೂ ಡಾ. ಮಹದೇವ್ ಭರಣಿ, "ಜಿಲ್ಲಾಡಳಿತ ನಿಲುವು ತಟ್ಟೆಯಲ್ಲಿ ಊಟ ಇಟ್ಟು ತಿನ್ನಬೇಡ ಎಂಬಂತಾಗಿದೆ. ಸರಳ ದಸರಾ ಎಂದು ಮೈಸೂರು ತುಂಬಾ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ. ಅರಮನೆ ಆವರಣದೊಳಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಅ.17 ರಂದು ದೇವಾಲಯದ ಪಕ್ಕದಲ್ಲಿ ಚಿಕ್ಕ ಶಾಮಿಯಾನ ಹಾಕಿ ಉದ್ಘಾಟನೆ ಮಾಡುತ್ತಾರೆ. ಆದರೆ ಎರಡು ಹಂತದಲ್ಲಿ 14 ದಿನಗಳ ಕಾಲ ಭಕ್ತರಿಗೆ ಯಾಕೆ ನಿರ್ಬಂಧ?," ಎಂದು ಪ್ರಶ್ನಿಸಿದರು.

ಬುಧವಾರ ಮಧ್ಯರಾತ್ರಿಯಿಂದ ಭಾನುವಾರದವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ..!
"ಅಲ್ಲದೇ ಗ್ರಾಮೀಣ ಜನರು ದಸರಾ ಏಕೆ ನೋಡಬಾರದು? ಹಾಗಾದರೇ ಯಾರಿಗಾಗಿ ಇಷ್ಟೊಂದು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಸರಕಾರ ಕೂಡಲೇ ಈ ಇಬ್ಬರು ಮಹಿಳಾ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು," ಎಂದು, ಚಾಮುಂಡಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಗ್ರಾಮೀಣ ಭಾಗದ ಜನರು ದಸರಾಗೆ ಬರುವುದು ಬೇಡ ಎಂದು ಆದೇಶ ಹೊರಡಿಸಿರುವ ಜಿಪಂ ಸಿಇಓ ಭಾರತಿ ಡಿ. ವಿರುದ್ಧ ಇತಿಹಾಸಕಾರರು ಆಕ್ರೋಶ ಹೊರಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ