ಆ್ಯಪ್ನಗರ

ಮಗುವಿಗೆ ಬರೆ: ಅಂಗನವಾಡಿ ಸಹಾಯಕಿ ವಜಾ

ಮೂತ್ರ ವಿಸರ್ಜನೆ ಮಾಡಿದ ಮಗುವಿಗೆ ಬರೆ ಹಾಕಿದ ಶ್ರೀರಾಂಪುರ 2ನೇ ಹಂತದ ದೇವಯ್ಯನಹುಂಡಿ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಲೀಲಾ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

Vijaya Karnataka 9 Sep 2018, 5:00 am
ಮೈಸೂರು: ಮೂತ್ರ ವಿಸರ್ಜನೆ ಮಾಡಿದ ಮಗುವಿಗೆ ಬರೆ ಹಾಕಿದ ಶ್ರೀರಾಂಪುರ 2ನೇ ಹಂತದ ದೇವಯ್ಯನಹುಂಡಿ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಲೀಲಾ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.
Vijaya Karnataka Web punish to the child anganawadi assistant dismissed
ಮಗುವಿಗೆ ಬರೆ: ಅಂಗನವಾಡಿ ಸಹಾಯಕಿ ವಜಾ


ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಮೂರುವರೆ ವರ್ಷದ ಮಗು ಕೃಷ್ಣ ನ ಕಾಲಿಗೆ ಲೀಲಾ ಅವರು ಬರೆ ಎಳೆದಿದ್ದರು. ಇದರಿಂದ ಮಗುವಿನ ಕಾಲಿನಲ್ಲಿ ಬೊಬ್ಬೆ ಬಂದಿದೆ. ಈ ಹಿನ್ನೆಲೆಯಲ್ಲಿ ಲೀಲಾ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಅವರನ್ನು ಗೌರವಧನ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ