ಆ್ಯಪ್ನಗರ

ಮೈಸೂರಿನಲ್ಲಿ ಹೆಬ್ಬಾವು ರಕ್ಷಣೆ

ನಗರದ ರಾಜೀವ್‌ ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಸಂರಕ್ಷಣೆ ಮಾಡಲಾಗಿದೆ.

Vijaya Karnataka 27 May 2019, 5:00 am
ಮೈಸೂರು: ನಗರದ ರಾಜೀವ್‌ ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಸಂರಕ್ಷಣೆ ಮಾಡಲಾಗಿದೆ.
Vijaya Karnataka Web pythan protect at mysuru
ಮೈಸೂರಿನಲ್ಲಿ ಹೆಬ್ಬಾವು ರಕ್ಷಣೆ


ಶನಿವಾರ ರಾತ್ರಿ ಮಳೆ ಸುರಿಯುತ್ತಿರುವ ಸಂದರ್ಭ ರಾಜೀವ ನಗರ ಬಳಿಯ ಆರ್‌ಟಿಒ ಕಚೇರಿಗೆ ಸೇರಿದ ಟೆಸ್ಟ್‌ ಟ್ರ್ಯಾಕ್‌ನಲ್ಲಿ ದೊಡ್ಡ ಗಾತ್ರದ ಹಾವೊಂದು ಉರುಳಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಉರಗ ತಜ್ಞ ಸ್ನೇಕ್‌ ಶ್ಯಾಂ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಸ್ನೇಕ್‌ ಶ್ಯಾಂ ಅವರು ಟೆಸ್ಟ್‌ ಟ್ರ್ಯಾಕ್‌ ಮೇಲೆ ಅಡ್ಡಾಡುತ್ತಿದ್ದ 8 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ನಂತರ ಡಿಸಿಎಫ್‌ ಪ್ರಶಾಂತ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರ ಸಲಹೆ ಮೇರೆಗೆ ಸೋಮವಾರ ಬೆಳಗ್ಗೆ ಅರಣ್ಯಕ್ಕೆ ಬಿಡಲಾಗುವುದು ಎಂದು ಪತ್ರಿಕೆಗೆ ಉರಗ ತಜ್ಞ ಸ್ನೇಕ್‌ ಶ್ಯಾಂ ತಿಳಿಸಿದ್ದಾರೆ.

ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಈವರೆಗೆ ತಾನು 13 ಹೆಬ್ಬಾವುಗಳನ್ನು ಸಂರಕ್ಷಣೆ ಮಾಡಿದ್ದೇನೆ. ಮೈಸೂರಿನ ಸುತ್ತ ಕಾವೇರಿ ಹಾಗೂ ಕಬಿನಿ ನದಿಗಳಿರುವುದರಿಂದ ಆಗಾಗ ಹೆಬ್ಬಾವು ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಹೆಚ್ಚಿನ ಅಪಾಯವಿಲ್ಲ. ಈ ಹಾವುಗಳು ಕಂಡೊಡನೆ ಪಾಲಿಕೆ ಅಥವಾ ಉರಗ ತಜ್ಞರಿಗೆ ಮಾಹಿತಿ ನೀಡಿ ಎಂದು ಸ್ನೇಕ್‌ ಶ್ಯಾಂ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ