ಆ್ಯಪ್ನಗರ

ರೈಲು ತಡೆಗೆ ಮುಂದಾದ ರೈತರ ಬಂಧನ

ಪ್ರವಾಹ ಪೀಡಿತರ ಪರಿಹಾರಕ್ಕೆ ಕೇಂದ್ರ ಸ್ಪಂದಿಸಲಿಲ್ಲ ಎಂದು ಆಕ್ಷೇಪಿಸಿ ರೈಲು ತಡೆ ಪ್ರತಿಭಟನೆಗೆ ಮುಂದಾದ ರೈತ ಸಂಘದ ಸದಸ್ಯರನ್ನು ಪೊಲೀಸರು ಬಂಧಿಸಿದರು.

Vijaya Karnataka 28 Sep 2019, 5:00 am
ಮೈಸೂರು: ಪ್ರವಾಹ ಪೀಡಿತರ ಪರಿಹಾರಕ್ಕೆ ಕೇಂದ್ರ ಸ್ಪಂದಿಸಲಿಲ್ಲ ಎಂದು ಆಕ್ಷೇಪಿಸಿ ರೈಲು ತಡೆ ಪ್ರತಿಭಟನೆಗೆ ಮುಂದಾದ ರೈತ ಸಂಘದ ಸದಸ್ಯರನ್ನು ಪೊಲೀಸರು ಬಂಧಿಸಿದರು.
Vijaya Karnataka Web MYSPHOTOS-41070733


ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿರೈತರು ನಗರದ ರೈಲ್ವೆ ನಿಲ್ದಾಣದಲ್ಲಿರೈಲು ತಡೆಗೆ ಮುಂದಾದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ರಾಜ್ಯದ ಲಕ್ಷಾಂತರ ಮಂದಿ ಪ್ರವಾಹದಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ, ಇವರ ಸಂಕಷ್ಟಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸುವಲ್ಲಿಸರಕಾರಗಳು ವಿಫಲವಾಗಿವೆ. ಕೇಂದ್ರ ಸರಕಾರ ಇಲ್ಲಿವರೆಗೆ ಯಾವುದೇ ಪರಿಹಾರ ಘೋಷಣೆ ಮಾಡಲಿಲ್ಲ. ನೀಡುತ್ತಿರುವ ಪರಿಹಾರ ಕೂಡ ಅವೈಜ್ಞಾನಿಕವಾಗಿದೆ. ಎನ್‌ಡಿಆರ್‌ಎಫ್‌ ಮಾನದಂಡ ಕಳೆದ ಹಲವು ವರ್ಷಗಳಿಂದ ಬದಲಾವಣೆಯಾಗಲಿಲ್ಲ. ಇದರ ಪ್ರಕಾರ ಮಳೆ ಆಶ್ರಿತ ಬೆಳೆ ನಾಶಕ್ಕೆ ಎಕರೆಗೆ ಕೇವಲ 2,500 ರೂ. ಪರಿಹಾರ ಮಾತ್ರ ನೀಡಬಹುದಾಗಿದೆ. ನೀರಾವರಿ ಪ್ರದೇಶದ ಪರಿಹಾರ ಎಕರೆಗೆ ಕೇವಲ 5,500 ರೂ. ಮಾತ್ರ ಸಿಗಲಿದೆ. ಇದು ರೈತರಿಗೆ ಭಿಕ್ಷೆಯ ರೂಪದಲ್ಲಿನೀಡುವ ಪರಿಹಾರವಾಗಿದೆ. ಸಂಸದರ ಈ ನಿಯಮಕ್ಕೆ ತಿದ್ದುಪಡಿ ತರಲು ಒತ್ತಡ ಹಾಕಬೇಕು ಎಂದು ಒತ್ತಾಯಿಸಲಾಯಿತು.

ರೈತರು ಮಳೆಯಿಂದಾಗಿ ಬೆಳೆಗಳನ್ನು ಕಳೆದುಕೊಂಡ ಹಿನ್ನೆಲೆಯಲ್ಲಿಅವರ ಎಲ್ಲಾರೀತಿಯ ಸಾಲವನ್ನು ಮನ್ನಾ ಮಾಡಿ ಅವರಿಗೆ ಬಡ್ಡಿ ರಹಿತ ದೀರ್ಘಾವಧಿಯ ಸಾಲ ನೀಡಬೇಕು. ಬೆಳೆ ವಿಮಾ ನೀತಿಯನ್ನೂ ಬದಲಾವಣೆ ಮಾಡಿ ಎಲ್ಲಾರೀತಿಯ ಬೆಳೆಗೂ ವಿಮಾ ಸೌಲಭ್ಯ ದೊರೆಯುವಂತೆ ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭ ರೈತರಿಗೆ ದೊರೆಯುವಂತೆ ಮಾಡಬೇಕು. ಕಬ್ಬು ಬೆಳೆಗಾರರ ಬಾಕಿ ಕೂಡಲೇ ತೀರಿಸಬೇಕು ಎಂದು ಈ ಸಂದರ್ಭ ಒತ್ತಾಯಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ