ಆ್ಯಪ್ನಗರ

ಫೆಬ್ರವರಿ 8,9 ರಂದು ರಾಜನಹಳ್ಳಿ ಜಾತ್ರೆ

ರಾಜ್ಯದಲ್ಲಿ70 ಲಕ್ಷಕ್ಕೂ ಹೆಚ್ಚು ನಾಯಕ ಸಮುದಾಯವರಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿಶೇ.5ರಷ್ಟು ಮೀಸಲು ಪಡೆಯಲು ಒಗ್ಗೂಡಬೇಕಿದೆ ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

Vijaya Karnataka 5 Dec 2019, 5:00 am
ಎಚ್‌.ಡಿ.ಕೋಟೆ: ರಾಜ್ಯದಲ್ಲಿ 70 ಲಕ್ಷಕ್ಕೂ ಹೆಚ್ಚು ನಾಯಕ ಸಮುದಾಯವರಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿಶೇ.5ರಷ್ಟು ಮೀಸಲು ಪಡೆಯಲು ಒಗ್ಗೂಡಬೇಕಿದೆ ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
Vijaya Karnataka Web rajanahalli fair on 89th february
ಫೆಬ್ರವರಿ 8,9 ರಂದು ರಾಜನಹಳ್ಳಿ ಜಾತ್ರೆ


ಪಟ್ಟಣದ ಹುಣಸೂರು-ಬೇಗೂರು ರಸ್ತೆಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದಲ್ಲಿಎಚ್‌.ಡಿ. ಕೋಟೆ ಮತ್ತು ಸರಗೂರು ನಾಯಕ ಸಂಘದ ವತಿಯಿಂದ ರಾಜನಹಳ್ಳಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

''ರಾಜ್ಯದಲ್ಲಿರುವ ಅನೇಕ ಸಮು ದಾಯಗಳು ಒಗ್ಗೂಡಿವೆ. ಆ ಸಮುದಾಯಗಳು ಸಾಮಾಜಿಕ, ಆರ್ಥಿಕ, ರಾಜ ಕೀಯವಾಗಿ ಮುಂದೆ ಬರುತ್ತಿವೆ. ಆ ಸಮುದಾಯಗಳಂತೆ ರಾಜ್ಯದಲ್ಲಿರುವ 70 ಲಕ್ಷ ನಾಯಕ ಸಮುದಾಯ ಒಗ್ಗೂಡ ಬೇಕು. ರಾಜ್ಯ ಸರಕಾರದ ಗಮನ ಸೆಳೆಯ ಬೇಕು. ವಿಶ್ವಕ್ಕೆ ರಾಮಾಯಣ ಕೊಟ್ಟ ಮಹರ್ಷಿ ವಾಲ್ಮೀಕಿ ನಮ್ಮ ಸಮುದಾಯದ ಮೂಲ ಪುರುಷ. ಅವರು ಹಾಕಿಕೊಟ್ಟ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು,'' ಎಂದರು.

''ನಮ್ಮ ಸಮುದಾಯದಲ್ಲಿಎಲ್ಲಾರಾಜಕೀಯ ಪಕ್ಷಗಳಲ್ಲಿಗುರುತಿಸಿ ಕೊಂಡಿದ್ದಾರೆ. ಆದರೆ, ರಾಜಕೀಯವನ್ನು ಚುನಾವಣೆಗೆ ಮಾತ್ರ ಬಳಸಿ, ಸಮಾಜದ ಸಂಘಟನೆಗೆ ಬೇಡ. ನೀವು ಯಾವ ಪಕ್ಷದಲ್ಲಿದ್ದರೂ ಚಿಂತೆ ಇಲ್ಲ. ರಾಜಕೀಯವನ್ನು ಸಮುದಾಯದೊಳಗೆ ಮಾಡ ಬೇಡಿ,'' ಎಂದು ಕಿವಿಮಾತು ಹೇಳಿದರು.

''ಮುಂದಿನ ಫೆಬ್ರವರಿ 8 ಮತ್ತು 9ರಂದು ರಾಜನಹಳ್ಳಿಯನ್ನು ಜಾತ್ರಾ ಮಹೋತ್ಸವ ನಡೆಯಲಿದೆ. ಸಮಾಜದ ಎಲ್ಲರೂ ಭಾಗವಹಿಸಬೇಕು. ಜಾತ್ರಾ ಮಹೋತ್ಸವಕ್ಕೆ ಎಲ್ಲರನ್ನೂ ಆಹ್ವಾನಿಸಲು ರಾಜ್ಯದ 150 ತಾಲೂಕುಗಳಿಗೆ ಭೇಟಿ ಮಾಡಲಾಗುತ್ತಿದೆ,'' ಎಂದರು.

ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿ, ''ಎಲ್ಲಾಸಮುದಾಯಗಳಲ್ಲಿಇರುವಂತೆ ನಮ್ಮ ಸಮುದಾಯಕ್ಕೂ ಒಂದು ಮಠ ಇರಬೇಕು ಎನ್ನುವ ಉದ್ದೇಶದಿಂದ ಸಮಾಜದ ಹಿರಿಯರು, ಮಠ ಪ್ರಾರಂಭ ಮಾಡಿದ್ದಾರೆ. ಈ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶ ದಿಂದಲೇ ಮಠ ಪ್ರಾರಂಭ ಮಾಡಿದ್ದು. ಹಾಗಾಗಿ ಮಠದ ಏಳಿಗೆಗೆ ಸಮುದಾ ಯದ ಬಂದುಗಳು ಹೆಚ್ಚು ದೇಣಿಗೆ ಕೊಡ ಬೇಕು. ಜಾತ್ರಾ ಮಹೋತ್ಸವದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು,'' ಎಂದರು. ಪೋಸ್ಟರ್‌ ಬಿಡುಗಡೆ: ಈ ಸಂದಭದಲ್ಲಿಜಾತ್ರಾ ಮಹೋತ್ಸವಕ್ಕೆ ಸಂಬಂದಿಸಿದಂತೆ ಸ್ವಾಮೀಜಿ ಸೇರಿದಂತೆ ಇತರ ಗಣ್ಯರು ಜಾತ್ರೆಯ ಪೋಸ್ಟ್‌ರ್‌ ಬಿಡುಗಡೆ ಮಾಡಿದರು.

ಪುರಸಭೆ ಸದಸ್ಯ ನಾಗರಾಜು, ಮುಖಂಡರಾದ ಎಂ.ಸಿ. ದೊಡ್ಡನಾಯಕ, ನಾಗನಾಯಕ, ಬಸವರಾಜು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ