ಮೈಸೂರು: ಕೈಗಾರಿಕಾ ಹಿನ್ನೆಡೆ ಮತ್ತು ಆಟೋಮೊಬೈಲ್ ಉದ್ಯಮ ಸಂಕಷ್ಟದಲ್ಲಿದ್ದು, ತಯಾರಿಕ ವಲಯದ ರಕ್ಷಣೆಗೆ ಕ್ರಮ ವಹಿಸಿ ಎಂದು ವಿತ್ತ ಸಚಿವರಿಗೆ ಮನವಿ ಮಾಡಿರುವ ಮೈಸೂರು ಕೈಗಾರಿಕಾ ಸಂಘವು ಟಿಡಿಎಸ್ ವಿಳಂಬ ಪಾವತಿಗೆ ವಿಧಿಧಿಸುವ ಬಡ್ಡಿ ದಂಡವನ್ನು ಮನ್ನಾ ಮಾಡಬೇಕು, ಜಿಎಸ್ಟಿ ಬಡ್ಡಿ ಕಡಿತಗೊಳಿಸಬೇಕೆಂದು ಒತ್ತಾಯಿಸಿದೆ.
ನಗರದ ಸರಕಾರಿ ಅಥಿತಿಧಿ ಗೃಹದಲ್ಲಿ ಕೇಂದ್ರ ವಿತ್ತ ಸಚಿವೆ ನಿವåರ್ಲ ಸೀತರಾಮ್ ಅವರನ್ನು ಭೇಟಿಯಾದ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಒ.ಡಿ.ಸತ್ಯೇಂದ್ರ ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮನವಿ ಸಲ್ಲಿಸಿ ಸಲ್ಲಿಸಿದರು.
ಉತ್ಪಾದನಾ ವಲಯ ವಿಷೇಷವಾಗಿ ಆಟೊಮೋಬೈಲ್ ವಾಹನ ತಯರಿಕಾ ಕುಂಠಿತಗೊಂಡಿದ್ದು, ಕೈಗಾರಿಕ ವಲಯ 10 ವರ್ಷಗಳ ಅಂತರದಲ್ಲಿ ಮತ್ತೊಂದು ಕೈಗಾರಿಕಾ ಹಿನ್ನೆಡೆಯ ಸವಾಲನ್ನು ಎದುರಿಸಬೇಕಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸಾಲ ಮರುಪಾವತಿಸಲಾಗದ ಹಂತ ತಲುಪುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ 10 ಲಕ್ಷ ಉದ್ಯೋಗ ಕಡಿತಗೊಳಿಸಬೇಕಾಗಹುದು. ಈ ಹಿನ್ನೆಲೆಯಲ್ಲಿ ಸರಕಾರ ತಯಾರಿಕಾ ವಲಯದ ರಕ್ಷಣೆಗೆ ಕ್ರಮ ವಹಿಸಬೇಕು. ಇದಕ್ಕೆ ಪೊರಕವಾಗಿ ಆದಾಯ ತೆರಿಗೆಯ ಟಿಡಿಎಸ್ ವಿಳಂಬ ಪಾವತಿಗೆ ವಿಧಿಧಿಸುವ ಬಡ್ಡಿ ದಂಡವನ್ನು ಮಾಡಬೇಕು, ಜಿಎಸ್ಟಿ ಬಡ್ಡಿ ಕಡಿಮೆಗೊಳಿಸುವುದು, ಜಿಎಸ್ಟಿ ವಿಳಂಬ ಪಾವತಿಗೆ, ಜಿಎಸ್ಟಿ ನೋಂದಾಣಿ ರದ್ದು ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಣ್ಣ ಉದ್ಯಮಿಗಳಿಗೆ ಸುಲಭ ಬಡ್ಡಿ ದರದಲ್ಲಿ ಭದ್ರತೆ ರಹಿತ ಸಾಲ ಸುಲಲಿತವಾಗಿ ದೊರೆಯುವಂತಾಗಬೇಕು. ಭಾರತೀಯ ರಿಜ‚ರ್ವ ಬ್ಯಾಂಕ್ ಮತ್ತು ರಾಷ್ಟ್ರಿಕೃತ ಬ್ಯಾಂಕ್ ಪ್ರಯತ್ನಗಳ ನಡುವೆಯೂ ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪರಸ್ತರುಗಳಿಗೆ ಶೇ.7-10 ಮಾತ್ರ ಬ್ಯಾಂಕುಗಳಿಂದ ಸಾಲ ದೊರೆತು ಉಳಿದ ಶೇ.90-93 ಉದ್ಯಮಿಗಳು ಖಾಸಗಿ ಲೇವದೇವಿದಾರರಿಂದ ದುಬಾರಿ ಬಡ್ಡಿ(ಮೀಟರ್ ಬಡ್ಡಿ) ಸಾಲದಿಂದ ವ್ಯಾಪಾರ ನಡೆಸುತ್ತಿರುವುದು ವಿಷಾಧನೀಯ ಎಂದು ತಿಳಿಸಿದರು.
ವಿತ್ತ ಸಚಿವೆ ನಿವåರ್ಲ ಸೀತರಾಮ್ ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.
ನಗರದ ಸರಕಾರಿ ಅಥಿತಿಧಿ ಗೃಹದಲ್ಲಿ ಕೇಂದ್ರ ವಿತ್ತ ಸಚಿವೆ ನಿವåರ್ಲ ಸೀತರಾಮ್ ಅವರನ್ನು ಭೇಟಿಯಾದ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಒ.ಡಿ.ಸತ್ಯೇಂದ್ರ ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮನವಿ ಸಲ್ಲಿಸಿ ಸಲ್ಲಿಸಿದರು.
ಉತ್ಪಾದನಾ ವಲಯ ವಿಷೇಷವಾಗಿ ಆಟೊಮೋಬೈಲ್ ವಾಹನ ತಯರಿಕಾ ಕುಂಠಿತಗೊಂಡಿದ್ದು, ಕೈಗಾರಿಕ ವಲಯ 10 ವರ್ಷಗಳ ಅಂತರದಲ್ಲಿ ಮತ್ತೊಂದು ಕೈಗಾರಿಕಾ ಹಿನ್ನೆಡೆಯ ಸವಾಲನ್ನು ಎದುರಿಸಬೇಕಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸಾಲ ಮರುಪಾವತಿಸಲಾಗದ ಹಂತ ತಲುಪುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ 10 ಲಕ್ಷ ಉದ್ಯೋಗ ಕಡಿತಗೊಳಿಸಬೇಕಾಗಹುದು. ಈ ಹಿನ್ನೆಲೆಯಲ್ಲಿ ಸರಕಾರ ತಯಾರಿಕಾ ವಲಯದ ರಕ್ಷಣೆಗೆ ಕ್ರಮ ವಹಿಸಬೇಕು. ಇದಕ್ಕೆ ಪೊರಕವಾಗಿ ಆದಾಯ ತೆರಿಗೆಯ ಟಿಡಿಎಸ್ ವಿಳಂಬ ಪಾವತಿಗೆ ವಿಧಿಧಿಸುವ ಬಡ್ಡಿ ದಂಡವನ್ನು ಮಾಡಬೇಕು, ಜಿಎಸ್ಟಿ ಬಡ್ಡಿ ಕಡಿಮೆಗೊಳಿಸುವುದು, ಜಿಎಸ್ಟಿ ವಿಳಂಬ ಪಾವತಿಗೆ, ಜಿಎಸ್ಟಿ ನೋಂದಾಣಿ ರದ್ದು ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಣ್ಣ ಉದ್ಯಮಿಗಳಿಗೆ ಸುಲಭ ಬಡ್ಡಿ ದರದಲ್ಲಿ ಭದ್ರತೆ ರಹಿತ ಸಾಲ ಸುಲಲಿತವಾಗಿ ದೊರೆಯುವಂತಾಗಬೇಕು. ಭಾರತೀಯ ರಿಜ‚ರ್ವ ಬ್ಯಾಂಕ್ ಮತ್ತು ರಾಷ್ಟ್ರಿಕೃತ ಬ್ಯಾಂಕ್ ಪ್ರಯತ್ನಗಳ ನಡುವೆಯೂ ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪರಸ್ತರುಗಳಿಗೆ ಶೇ.7-10 ಮಾತ್ರ ಬ್ಯಾಂಕುಗಳಿಂದ ಸಾಲ ದೊರೆತು ಉಳಿದ ಶೇ.90-93 ಉದ್ಯಮಿಗಳು ಖಾಸಗಿ ಲೇವದೇವಿದಾರರಿಂದ ದುಬಾರಿ ಬಡ್ಡಿ(ಮೀಟರ್ ಬಡ್ಡಿ) ಸಾಲದಿಂದ ವ್ಯಾಪಾರ ನಡೆಸುತ್ತಿರುವುದು ವಿಷಾಧನೀಯ ಎಂದು ತಿಳಿಸಿದರು.
ವಿತ್ತ ಸಚಿವೆ ನಿವåರ್ಲ ಸೀತರಾಮ್ ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.