ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಶನಿವಾರ ನಾಮಪತ್ರ ಸಲ್ಲಿಸುವ ವೇಳೆ ವಕೀಲರೊಬ್ಬರು ಎಡಗಾಲಿಟ್ಟು ಒಳಪ್ರವೇಶಿಸಿದಾಗ, ಶಾಸಕ ಎಚ್.ಡಿ.ರೇವಣ್ಣ ಅವರನ್ನು ಹೊರಗೆ ಕರೆದು ನಂತರ ಬಲಗಾಲು ಮೊದಲು ಇರಿಸಿ ಒಳಗೆ ಕಳುಹಿಸಿದ ಪ್ರಸಂಗ ನಡೆಯಿತು.
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ರೇವಣ್ಣ ಹಾಜರಿದ್ದರು. ಆಗ ವಕೀಲರೊಬ್ಬರು ಎಡಗಾಲಿಟ್ಟು ಒಳ ಪ್ರವೇಶಿಸಿದ್ದರು. ರೇವಣ್ಣ ಅವರನ್ನು ಹೊರಗೆ ಕರೆದು ನಂತರ ಬಲಗಾಲು ಮೊದಲು ಇರಿಸಿ ಒಳಗೆ ಕಳುಹಿಸಿದರು. ನಂತರ ತಮ್ಮ ಬೆಂಬಲಿಗರೊಬ್ಬರನ್ನು ರೇವಣ್ಣ ಇದೇ ರೀತಿ ಕಳುಹಿಸಿದರು.
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ರೇವಣ್ಣ ಹಾಜರಿದ್ದರು. ಆಗ ವಕೀಲರೊಬ್ಬರು ಎಡಗಾಲಿಟ್ಟು ಒಳ ಪ್ರವೇಶಿಸಿದ್ದರು. ರೇವಣ್ಣ ಅವರನ್ನು ಹೊರಗೆ ಕರೆದು ನಂತರ ಬಲಗಾಲು ಮೊದಲು ಇರಿಸಿ ಒಳಗೆ ಕಳುಹಿಸಿದರು. ನಂತರ ತಮ್ಮ ಬೆಂಬಲಿಗರೊಬ್ಬರನ್ನು ರೇವಣ್ಣ ಇದೇ ರೀತಿ ಕಳುಹಿಸಿದರು.