ಪಿರಿಯಾಪಟ್ಟಣ : ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೊಡಗಿನಲ್ಲಿ ಉಂಟಾಗಿರುವ ತೊಂದರೆಗಳಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ''ಮಂಡ್ಯ ಜಿಲ್ಲೆ ಮತ್ತು ಕೊಡಗಿನ ಜನರಿಗೆ ಅವಿನಾಭಾವ ಸಂಬಂಧವಿದೆ. ಕೊಡಗಿನಲ್ಲಿ ಹುಟ್ಟಿದ ಜೀವನ ನದಿ ಕಾವೇರಿಯ ಸಮೃದ್ಧಿ ಪಡೆದ ಮಂಡ್ಯ ಜಿಲ್ಲೆಯ ಜನರು ಇಂದು ಕೊಡಗಿನ ಜನರು ಸಂಕಷ್ಟದಲ್ಲಿ ನೆರವು ನೀಡಲು ಜಿಲ್ಲಾಡಳಿತೊಂದಿಗೆ ಸಮಾಲೋಚಿಸಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸಲು ನಾವು ಹೊರಟಿದ್ದೇವೆ. ಸರಕಾರ ಬಿಡುಗಡೆಗೊಳಿಸಿರುವ 10 ಕೋಟಿ ಹಣವನ್ನು ತಕ್ಷ ಣ ಬಳಕೆ ಮಾಡಿ ಕಾರ್ಯಪ್ರವೃತ್ತವಾಗಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದರು.
ಕೆರೆ ಒತ್ತುವರಿ ತೆರವು: ''ಇತ್ತೀಚೆಗೆ ಹೊಸಕೆರೆ ಪ್ರಾಧಿಕಾರ ರಚನೆಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕೆರೆಗಳು ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಯಾವುದೇ ಕೆರೆಗಳು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಕೆಲಸ ಮಾಡಲಾಗುವುದು'' ಎಂದು ಹೇಳಿದರು.
ಕೆರೆ ಸಂರಕ್ಷ ಣೆ: ''ಪ್ರತಿ ಉಪವಿಭಾಗ ನೇತೃತ್ವದಲ್ಲಿ ಕೆರೆಗಳು ತುಂಬಿರುವ, ಅದಕ್ಕೆ ಅಪಾಯವಿರುವ ಬಗ್ಗೆ ಸಭೆ ನಡೆಸಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿದ್ದು, ಕೆರೆಯಿಂದ ರೈತರಿಗೆ ತೊಂದರೆಯಾಗದಂತೆ ಇಲಾಖೆ ಕೆಲಸ ನಿರ್ವಹಿಸುತ್ತದೆ. ಕೆರೆಯಿಂದ ಕೃಷಿಗೆ ಅಗತ್ಯವಾದ ನೀರು ನೀಡುವ ಕೆಲಸವವನ್ನು ಮಾಡಲಾಗುವುದು. ರೈತರಿಗೆ ಕೆರೆಯಿಂದ ಯಾವುದೆ ಅನಾಹುತಗಳು ಸಂಭವಿಸದಂತೆ ಸೂಕ್ತ ಕ್ರಮವಹಿಸಲಾಗುವುದು'' ಎಂದು ತಿಳಿಸಿದರು.
ತಡೆಗೋಡಗೆ ಕ್ರಮ: ಕೆರೆಗಳಿಗೆ ವಾಹನಗಳು ಬಿದ್ದು ಸಾವು, ನೋವು ಸಂಭವಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆರೆಯ ಬಳಿ ಹಾದುಹೋಗುವ ಜಿ.ಪಂ. ಅಥವಾ ಯಾವುದೇ ಇಲಾಖೆಗೆ ಸೇರಿದ ರಸ್ತೆಗಳಿದ್ದರೂ ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅಲ್ಲಿ ಸುರಕ್ಷ ತೆಯ ದೃಷ್ಟಿಯಿಂದ ಕೆರೆಗಳಿಗೆ ತಡೆಗೋಡೆಗಳನ್ನು ನಿರ್ಮಿಸಿ ಕೆರೆ ಸಂರಕ್ಷ ಣೆಯ ಜತೆಗೆ ಜನರಿಗೆ ಯಾವುದೆ ತೊಂದರೆಯಾಗದಂತೆ ಆಧುನಿಕ ರೀತಿಯ ತಡೆಗೋಡೆಗಳನ್ನು ನಿರ್ಮಿಸಲಾಗುವುದು'' ಎಂದರು.
ಕೆರೆಯಲ್ಲಿ ಅನ್ಯಚಟುವಟಿಕೆ: ''ಕೆರೆಗಳಲ್ಲಿ ಮೀನುಪಾಲನೆ ಹರಾಜು ಪಡೆದವರು ಹಕ್ಕಿಪಕ್ಷಿಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಮತ್ತು ಕೆರೆಯಲ್ಲಿ ಜೊಂಡುಗಳಿಗೆ ವಿಷ ಸಿಂಪಡಣೆÜಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ''ಮುಂದಿಗೆ ದಿನಗಳಲ್ಲಿ ಕೆರೆಯ ಸುತ್ತಮುತ್ತಲು ಇರುವ ಜೀವ ಸಂಕುಲಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕ್ರಮವಹಿಸಲು ಕೆರೆ ಪ್ರಾಧಿಕಾರ ಕ್ರಮವಹಿಸುತ್ತದೆ ಅನ್ಯಚಟುವಟಿಕೆಗಳಿಗೆ ಇಲ್ಲಿ ಅವಕಾಶವಿಲ್ಲ'' ಎಂದರು.
ಹೆಚ್ಚಿನ ಅನುದಾನ: ''ತಾಲೂಕಿನಲ್ಲಿ ಹೆಚ್ಚಿನ ಕೆರೆಗಳಿದ್ದು ಪಿರಿಯಾಪಟ್ಟಣ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶಾಸಕ ಕೆ.ಮಹದೇವ್ ಈಗಾಗಲೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಇಲಾಖೆ ವತಿಯಿಂದ ಅನುದಾನಗಳನ್ನು ಬಿಡುಗಡೆ ಗೊಳಿಸಲಾಗುವುದು'' ಎಂದು ತಿಳಿಸಿದರು.
''ಕೆರೆಗಳಿಗೆ ಬರಬೇಕಾದ ನೀರು ಆನೆಕಂದಕವಿರಬಹುದು, ರಾಜಕಾಲುವೆಗಳನ್ನು ಮುಚ್ಚಿರುವುದು ಇರಬಹುದು. ಇಂತಹವುಗಳನ್ನು ತೆರವುಗೊಳಿಸಲಾಗುವುದು. ಕೆರೆಯ ನೀರಿನ ಮೂಲಗಳನ್ನು ಸಂಕ್ಷ ಣೆ ಮಾಡಲಾಗುವುದು'' ಎಂದು ತಿಳಿಸಿದರು.
ಮಂಡ್ಯ ಜಿ.ಪಂ.ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಅಶೋಕ್, ಶಿವಪ್ರಕಾಶ್, ಮಂಜಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ''ಮಂಡ್ಯ ಜಿಲ್ಲೆ ಮತ್ತು ಕೊಡಗಿನ ಜನರಿಗೆ ಅವಿನಾಭಾವ ಸಂಬಂಧವಿದೆ. ಕೊಡಗಿನಲ್ಲಿ ಹುಟ್ಟಿದ ಜೀವನ ನದಿ ಕಾವೇರಿಯ ಸಮೃದ್ಧಿ ಪಡೆದ ಮಂಡ್ಯ ಜಿಲ್ಲೆಯ ಜನರು ಇಂದು ಕೊಡಗಿನ ಜನರು ಸಂಕಷ್ಟದಲ್ಲಿ ನೆರವು ನೀಡಲು ಜಿಲ್ಲಾಡಳಿತೊಂದಿಗೆ ಸಮಾಲೋಚಿಸಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸಲು ನಾವು ಹೊರಟಿದ್ದೇವೆ. ಸರಕಾರ ಬಿಡುಗಡೆಗೊಳಿಸಿರುವ 10 ಕೋಟಿ ಹಣವನ್ನು ತಕ್ಷ ಣ ಬಳಕೆ ಮಾಡಿ ಕಾರ್ಯಪ್ರವೃತ್ತವಾಗಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದರು.
ಕೆರೆ ಒತ್ತುವರಿ ತೆರವು: ''ಇತ್ತೀಚೆಗೆ ಹೊಸಕೆರೆ ಪ್ರಾಧಿಕಾರ ರಚನೆಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕೆರೆಗಳು ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಯಾವುದೇ ಕೆರೆಗಳು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಕೆಲಸ ಮಾಡಲಾಗುವುದು'' ಎಂದು ಹೇಳಿದರು.
ಕೆರೆ ಸಂರಕ್ಷ ಣೆ: ''ಪ್ರತಿ ಉಪವಿಭಾಗ ನೇತೃತ್ವದಲ್ಲಿ ಕೆರೆಗಳು ತುಂಬಿರುವ, ಅದಕ್ಕೆ ಅಪಾಯವಿರುವ ಬಗ್ಗೆ ಸಭೆ ನಡೆಸಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿದ್ದು, ಕೆರೆಯಿಂದ ರೈತರಿಗೆ ತೊಂದರೆಯಾಗದಂತೆ ಇಲಾಖೆ ಕೆಲಸ ನಿರ್ವಹಿಸುತ್ತದೆ. ಕೆರೆಯಿಂದ ಕೃಷಿಗೆ ಅಗತ್ಯವಾದ ನೀರು ನೀಡುವ ಕೆಲಸವವನ್ನು ಮಾಡಲಾಗುವುದು. ರೈತರಿಗೆ ಕೆರೆಯಿಂದ ಯಾವುದೆ ಅನಾಹುತಗಳು ಸಂಭವಿಸದಂತೆ ಸೂಕ್ತ ಕ್ರಮವಹಿಸಲಾಗುವುದು'' ಎಂದು ತಿಳಿಸಿದರು.
ತಡೆಗೋಡಗೆ ಕ್ರಮ: ಕೆರೆಗಳಿಗೆ ವಾಹನಗಳು ಬಿದ್ದು ಸಾವು, ನೋವು ಸಂಭವಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆರೆಯ ಬಳಿ ಹಾದುಹೋಗುವ ಜಿ.ಪಂ. ಅಥವಾ ಯಾವುದೇ ಇಲಾಖೆಗೆ ಸೇರಿದ ರಸ್ತೆಗಳಿದ್ದರೂ ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅಲ್ಲಿ ಸುರಕ್ಷ ತೆಯ ದೃಷ್ಟಿಯಿಂದ ಕೆರೆಗಳಿಗೆ ತಡೆಗೋಡೆಗಳನ್ನು ನಿರ್ಮಿಸಿ ಕೆರೆ ಸಂರಕ್ಷ ಣೆಯ ಜತೆಗೆ ಜನರಿಗೆ ಯಾವುದೆ ತೊಂದರೆಯಾಗದಂತೆ ಆಧುನಿಕ ರೀತಿಯ ತಡೆಗೋಡೆಗಳನ್ನು ನಿರ್ಮಿಸಲಾಗುವುದು'' ಎಂದರು.
ಕೆರೆಯಲ್ಲಿ ಅನ್ಯಚಟುವಟಿಕೆ: ''ಕೆರೆಗಳಲ್ಲಿ ಮೀನುಪಾಲನೆ ಹರಾಜು ಪಡೆದವರು ಹಕ್ಕಿಪಕ್ಷಿಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಮತ್ತು ಕೆರೆಯಲ್ಲಿ ಜೊಂಡುಗಳಿಗೆ ವಿಷ ಸಿಂಪಡಣೆÜಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ''ಮುಂದಿಗೆ ದಿನಗಳಲ್ಲಿ ಕೆರೆಯ ಸುತ್ತಮುತ್ತಲು ಇರುವ ಜೀವ ಸಂಕುಲಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕ್ರಮವಹಿಸಲು ಕೆರೆ ಪ್ರಾಧಿಕಾರ ಕ್ರಮವಹಿಸುತ್ತದೆ ಅನ್ಯಚಟುವಟಿಕೆಗಳಿಗೆ ಇಲ್ಲಿ ಅವಕಾಶವಿಲ್ಲ'' ಎಂದರು.
ಹೆಚ್ಚಿನ ಅನುದಾನ: ''ತಾಲೂಕಿನಲ್ಲಿ ಹೆಚ್ಚಿನ ಕೆರೆಗಳಿದ್ದು ಪಿರಿಯಾಪಟ್ಟಣ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶಾಸಕ ಕೆ.ಮಹದೇವ್ ಈಗಾಗಲೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಇಲಾಖೆ ವತಿಯಿಂದ ಅನುದಾನಗಳನ್ನು ಬಿಡುಗಡೆ ಗೊಳಿಸಲಾಗುವುದು'' ಎಂದು ತಿಳಿಸಿದರು.
''ಕೆರೆಗಳಿಗೆ ಬರಬೇಕಾದ ನೀರು ಆನೆಕಂದಕವಿರಬಹುದು, ರಾಜಕಾಲುವೆಗಳನ್ನು ಮುಚ್ಚಿರುವುದು ಇರಬಹುದು. ಇಂತಹವುಗಳನ್ನು ತೆರವುಗೊಳಿಸಲಾಗುವುದು. ಕೆರೆಯ ನೀರಿನ ಮೂಲಗಳನ್ನು ಸಂಕ್ಷ ಣೆ ಮಾಡಲಾಗುವುದು'' ಎಂದು ತಿಳಿಸಿದರು.
ಮಂಡ್ಯ ಜಿ.ಪಂ.ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಅಶೋಕ್, ಶಿವಪ್ರಕಾಶ್, ಮಂಜಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.