ಆ್ಯಪ್ನಗರ

ಮೈಸೂರಿನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ವರ್ಗಾವಣೆ ದಂಧೆ: ಸಾರಾ ಮಹೇಶ್‌ ಆರೋಪ

ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಶಾಸಕ ಸಾರಾ ಮಹೇಶ್ ಗಂಭೀರ‌ ಆರೋಪ ಮಾಡಿದ್ದಾರೆ.

Vijaya Karnataka Web 6 Jun 2020, 2:30 pm
ಮೈಸೂರು: ಜಿಲ್ಲೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದ್ದಾರೆ.
Vijaya Karnataka Web sa ra mahesh
ಸಾ.ರಾ.ಮಹೇಶ್


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ''ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಆ್ಯಕ್ಟಿಂಗ್‌, ಇನ್ನೊಬ್ಬರು ಅಧಿಕೃತ ಸಚಿವರು. ಜಿಲ್ಲೆಯಲ್ಲಿಅಧಿಕೃತ ಸಚಿವರ ಗಮನಕ್ಕೆ ಬಾರದೆ ವರ್ಗಾವಣೆ ದಂಧೆ ನಡೆಯು ತ್ತಿದೆ. ಕೇವಲ 9 ತಿಂಗಳ ಹಿಂದೆ ಜಿಲ್ಲಾಅಬಕಾರಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಯನ್ನು ವರ್ಗಾಯಿಸಲಾಗಿದೆ. ಇದರಲ್ಲಿಎರಡು ಕೋಟಿ ರೂ.ಗಳ ವ್ಯವಹಾರ ನಡೆದಿದೆ. ಅದೇ ರೀತಿ ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರ ವರ್ಗಾವಣೆಯಲ್ಲಿ50 ಲಕ್ಷ ರೂ. ಕೈ ಬದಲಾಗಿದೆ. ಈ ವ್ಯವಹಾರಗಳನ್ನು ಮಾಡುತ್ತಿರು ವವರು ಯಾರು?,'' ಎಂದು ಪ್ರಶ್ನಿಸಿದರು.

''ಹುಣಸೂರಿನಲ್ಲಿಜನರು 90 ಸಾವಿರ ಮತಗಳ ಅಂತರ ದಿಂದ ಗೆಲ್ಲಿಸಿದ್ದರು. ಬಳಿಕ ಅದರ ಅರ್ಧದಷ್ಟು ಮತಗಳ ಅಂತರದಿಂದ ಸೋಲಿಸಿದ್ದಾರೆ. ಜಿಲ್ಲೆಯ ರೈಸ್‌ ಮಿಲ್‌ಗಳಿಂದ ಅಕ್ಕಿಗಳನ್ನು ಸಂಗ್ರಹಿ ಸಲಾಗಿದೆ. ಈ ಅಕ್ಕಿ ಎಲ್ಲಿಗೆ ಹೋಗಿದೆ ಎನ್ನುವುದು ತಿಳಿಯಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಒಂದು ವೇಳೆ ಮಾಹಿತಿ ನೀಡದಿದ್ದಲ್ಲಿ ನನ್ನ ಬಳಿ ಇರುವ ದಾಖಲೆ ಬಹಿರಂಗ ಪಡಿಸುತ್ತೇನೆ '' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ