ಮೈಸೂರು: ಸ್ಥಳೀಯ ಶಾಸಕ ಎಚ್.ಪಿ. ಮಂಜುನಾಥ್ ಅವರು ಟ್ರಸ್ಟಿಯಾಗಿರುವ ಸಾಯಿಬಾಬಾ ಮಂದಿರದಲ್ಲಿ ಸಾಯಿಬಾಬಾ ರೂಪದ ಮಾನವ ಆಕೃತಿಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾದ ಘಟನೆ ಹುಣಸೂರಿನಲ್ಲಿ ನಡೆದಿದೆ.
ಇದು ಸಾಯಿಬಾಬಾನ ರೂಪವೇ ಎಂದು ಭಾವಿಸಿದ ಕೆಲವು ಭಕ್ತರು ಮಂಗಳವಾರ ಮಂದಿರಕ್ಕೆ ಭೇಟಿ ನೀಡಿದ್ದರು. ಆದರೆ, ಯಾರೊಬ್ಬರಿಗೂ ಈ ಆಕೃತಿ ಕಂಡು ಬಂದಿಲ್ಲ. ಆದರೆ ಮಂದಿರದ ಉಸ್ತುವಾರಿ ಹೊತ್ತಿರುವ ಸುಧನ್ವ, ‘ಸೋಮವಾರ ಬೆಳಗ್ಗೆ ಎಂದಿನಂತೆ ಸಿಸಿಟಿವಿ ನೋಡಿದೆ. ಬಿಂಬ ಕಾಣಿಸಿಕೊಂಡಿತು,’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಶಾಸಕ ಮಂಜುನಾಥ್ ಪ್ರತಿಕ್ರಿಯಿಸಿ, ‘ಇದು ನಂಬಿಕೆಯ ವಿಚಾರ. ಸಾಯಿಬಾಬಾ ಎಂದುಕೊಂಡರೆ ಅದು ವಿಸ್ಮಯ. ತಾಂತ್ರಿಕವಾಗಿ ನೋಡುವುದಾದರೆ ಅದೊಂದು ಬೆಳಕು. ಒಂದಂತೂ ಸ್ಪಷ್ಟ. ಅಲ್ಲಿ ಯಾವುದೇ ಗ್ರಾಫಿಕ್ಸ್ ಇಲ್ಲ,’ ಎಂದರು.
ಜಿ. ಪಂ.ಸದಸ್ಯೆ ಪುಷ್ಪಾ ಅಮರನಾಥ್ ಪ್ರತಿಕ್ರಿಯಿಸಿ, ‘ಸಾಯಿಬಾಬಾರ ಆಕೃತಿ ಗೋಚರಿಸಿರುವುದನ್ನು ಕಂಡು ಕ್ಷಣಕಾಲ ನನ್ನ ಮೈ ಜುಮ್ ಎಂದಿತು. ನಾನು ವಿಜ್ಞಾನ ವಿಷಯ ಓದಿದ್ದರೂ ಆ ದೃಶ್ಯ ನೋಡಿದ ಮೇಲೆ ಇದೊಂದು ವಿಸ್ಮಯ ಎನಿಸಿತು. ಸಾಯಿಬಾಬಾರ ಭಕ್ತರು ಇದು ಸಾಯಿ ಬಾಬಾರ ಆಕೃತಿ ಎಂದು ನಂಬಿದ್ದಾರೆ. ನಾಸ್ತಿಕರು ಇದೊಂದು ಬೆಳಕಿನ ಕಿರಣ ಅಷ್ಟೇ ಎಂದು ಹೇಳುತ್ತಿದ್ದಾರೆ. ಎಲ್ಲವೂ ಅವರವರ ಭಾವಕ್ಕೆ ಸೇರಿದ ಸಂಗತಿ,’ ಎಂದು ಹೇಳಿದರು.
ಇದು ಸಾಯಿಬಾಬಾನ ರೂಪವೇ ಎಂದು ಭಾವಿಸಿದ ಕೆಲವು ಭಕ್ತರು ಮಂಗಳವಾರ ಮಂದಿರಕ್ಕೆ ಭೇಟಿ ನೀಡಿದ್ದರು. ಆದರೆ, ಯಾರೊಬ್ಬರಿಗೂ ಈ ಆಕೃತಿ ಕಂಡು ಬಂದಿಲ್ಲ. ಆದರೆ ಮಂದಿರದ ಉಸ್ತುವಾರಿ ಹೊತ್ತಿರುವ ಸುಧನ್ವ, ‘ಸೋಮವಾರ ಬೆಳಗ್ಗೆ ಎಂದಿನಂತೆ ಸಿಸಿಟಿವಿ ನೋಡಿದೆ. ಬಿಂಬ ಕಾಣಿಸಿಕೊಂಡಿತು,’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಜಿ. ಪಂ.ಸದಸ್ಯೆ ಪುಷ್ಪಾ ಅಮರನಾಥ್ ಪ್ರತಿಕ್ರಿಯಿಸಿ, ‘ಸಾಯಿಬಾಬಾರ ಆಕೃತಿ ಗೋಚರಿಸಿರುವುದನ್ನು ಕಂಡು ಕ್ಷಣಕಾಲ ನನ್ನ ಮೈ ಜುಮ್ ಎಂದಿತು. ನಾನು ವಿಜ್ಞಾನ ವಿಷಯ ಓದಿದ್ದರೂ ಆ ದೃಶ್ಯ ನೋಡಿದ ಮೇಲೆ ಇದೊಂದು ವಿಸ್ಮಯ ಎನಿಸಿತು. ಸಾಯಿಬಾಬಾರ ಭಕ್ತರು ಇದು ಸಾಯಿ ಬಾಬಾರ ಆಕೃತಿ ಎಂದು ನಂಬಿದ್ದಾರೆ. ನಾಸ್ತಿಕರು ಇದೊಂದು ಬೆಳಕಿನ ಕಿರಣ ಅಷ್ಟೇ ಎಂದು ಹೇಳುತ್ತಿದ್ದಾರೆ. ಎಲ್ಲವೂ ಅವರವರ ಭಾವಕ್ಕೆ ಸೇರಿದ ಸಂಗತಿ,’ ಎಂದು ಹೇಳಿದರು.