ಸಕಲೇಶಪುರ-ಸುಬ್ರಮಣ್ಯ ರೈಲು ಸಂಚಾರ ರದ್ದು
ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಯಿಂದ ರೈಲ್ವೆ ಸಂಚಾರಕ್ಕೆ ಅಡಚಣೆ ಯಾಗಿದ್ದು, ಸಕಲೇಶಪುರ-ಸುಬ್ರಮಣ್ಯ ಮೂಲಕ ಸಾಗುವ ರೈಲು ಮಾರ್ಗದಲ್ಲಿ ಸಂಚಾರ ನ್ನು ಆ. 25ರವರೆಗೆ ರದ್ದು ಮಾಡಲಾಗಿದೆ.
Vijaya Karnataka 17 Aug 2018, 12:34 am
ಮೂರು ದಿನದಲ್ಲಿ ಮಣ್ಣು ಕುಸಿತ, ಬಂಡೆ ಬಿದ್ದಿರುವ 42 ಪ್ರಕರಣ ವರದಿ
ಮೈಸೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಯಿಂದ ರೈಲ್ವೆ ಸಂಚಾರಕ್ಕೆ ಅಡಚಣೆ
ಯಾಗಿದ್ದು, ಸಕಲೇಶಪುರ-ಸುಬ್ರಮಣ್ಯ ಮೂಲಕ ಸಾಗುವ ರೈಲು ಮಾರ್ಗದಲ್ಲಿ ಸಂಚಾರ ನ್ನು ಆ. 25ರವರೆಗೆ ರದ್ದು ಮಾಡಲಾಗಿದೆ.
‘‘ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸುಬ್ರಮಣ್ಯ-ಯಡಕುಮರಿ ನಡುವಣ ರೈಲ್ವೆ ಮಾರ್ಗದಲ್ಲಿ ಮಣ್ಣು ಕುಸಿತ, ಕಲ್ಲುಬಂಡೆ ಹಳಿಯ ಮೇಲೆ ಬಿದ್ದಿವೆ. ಮೂರು ದಿನದಲ್ಲಿ ಮಣ್ಣು ಕುಸಿತ, ಬಂಡೆ ಬಿದ್ದಿರುವ 42 ಪ್ರಕರಣಗಳು ವರದಿಯಾಗಿವೆ. 32 ಸಾವಿರ ಘನ ಅಡಿಯಷ್ಟು ಮಣ್ಣು ಹಳಿಯ ಮೇಲೆ ಬಿದ್ದಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿದ ಬಳಿಕ ರೈಲು ಸಂಚಾರ ಆರಂಭಿಸಲು ಕ್ರಮ ವಹಿಸಲಾಗುವುದು,’’ ಎಂದು ಮೈಸೂರು ವಿಭಾಗೀಯ ರೈಲ್ವೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ಅರ್ಪಣಾ ಗಾರ್ಗ್ ತಿಳಿಸಿದರು.
ಪರಿಸ್ಥಿತಿ ಅವಲೋಕಿಸಿ ಚಿಂತನೆ: ‘‘ಈ ಬಾರಿ ಸಕಲೇಶಪುರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಮಳೆ ಬಿದ್ದಿದೆ. ಯಡಕುಮರಿಯಲ್ಲಿ ಕಳೆದ ಬಾರಿಯ 3583 ಎಂಎಂ ಮಳೆಗೆ ಹೋಲಿಸಿದರೆ ಈ ವರ್ಷ 9500 ಎಂಎಂ ಮಳೆ ಬಿದ್ದಿದೆ. ಸುಬ್ರಮಣ್ಯ-ಯಡಕುಮರಿ ನಡುವಣ ರೈಲ್ವೆ ಮಾರ್ಗದಲ್ಲಿ ಸುರಕ್ಷತೆ ಹಿನ್ನೆಲೆಯಲ್ಲಿ ಹಗಲಿನಲ್ಲಿ ಮಾತ್ರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆ. 25ರ ಬಳಿಕ ಪರಿಸ್ಥಿತಿ ಯನ್ನು ಅವಲೋಕಿಸಿ ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗು ವುದು,’’ ಎಂದರು. ‘‘ಚಾಮ ರಾಜನಗರ -ಮೈಸೂರು ನಡುವೆ ಸಂಚರಿ ಸುವ ರೈಲಿಗೆ ಹೆಚ್ಚಿನ ಭದ್ರತೆ ಒದಗಿಸಲು ಕ್ರಮ ವಹಿಸ ಲಾಗುವುದು,’’ ಎಂದು ಹೇಳಿದರು.
ಕುಶಾಲನಗರ ಸರ್ವೇ ಕಾರ್ಯ ಪೂರ್ಣ: ‘‘ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಹುಬ್ಬಳ್ಳಿ ನೈರುತ್ಯ ರೈಲ್ವೆ ಜಿಎಂ ಎ.ಕೆ.ಗುಪ್ತಾ ಅವರು, ಮೈಸೂರು-ಕುಶಾಲನಗರ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು ಈ ವರದಿಯನ್ನು ರೈಲ್ವೆ ಬೋರ್ಡ್ಗೆ ಕಳುಹಿಸಿಕೊಡಲಾಗಿದೆ,’’ ಎಂದರು. ಕೊಡಗಿನ ಮೂಲಕ ತಲಚೇರಿವರೆಗೆ ರೈಲ್ವೆ ಮಾರ್ಗದ ವಿಸ್ತರಣೆ ಸಂಬಂಧ ಉತ್ತರಿಸಿದ ಅವರು, ‘‘ಈ ಯೋಜನೆ ಕೊಂಕಣ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಈ ಯೋಜನೆಯನ್ನು ಕೈ ಬಿಟ್ಟಿಲ್ಲ. ನಾಗನಹಳ್ಳಿಯ ರೈಲ್ವೆ ಟರ್ಮಿನಲ್ ಯೋಜನೆ 2018ರಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆ ಡಿಪಿಆರ್ ತಯಾರಿ ಹಂತದಲ್ಲಿದೆ,’’ ಎಂದು ಹೇಳಿದರು.
ನೈರುತ್ಯ ರೈಲ್ವೆ ವಿಭಾಗದಲ್ಲಿ ಆ.15ರಿಂದ ಜಾರಿ ಬಂದ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಬದಲಾದ ವೇಳಾಪಟ್ಟಿಯಂತೆ
ಮೈಸೂರು-ಜೈಪುರ ಎಕ್ಸ್ಪ್ರೆಸ್ ಮೈಸೂರಿನಿಂದ ಬೆಳಗ್ಗೆ 10.30
ಚಾಮರಾಜನಗರ-ತಿರುಪತಿ ಎಕ್ಸ್ಪ್ರೆಸ್ ರಾತ್ರಿ 8.30
ತಿರುಪತಿ-ಚಾಮರಾಜನಗರ ಎಕ್ಸ್ಪ್ರೆಸ್ ಬೆ.7.20 ,
ಮೈಸೂರು-ತುತುಕುಡಿ ಎಕ್ಸ್ಪ್ರೆಸ್ ಸಂ.6.05
ಮೈಸೂರು-ಅಜ್ಮೀರ್ ಎಕ್ಸ್ಪ್ರೆಸ್ ಸಂ.6.35
ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರಾ.9
ಸೋಲಾಪುರ-ಹಾಸನ ಬೆ.7.45
ಹಾಸನ -ಸೋಲಾಪುರ ಸಂ.4
ಯಶವಂತಪುರ-ಮೈಸೂರು 12.15
ಚೆನ್ನೈ-ಮೈಸೂರು ಎಕ್ಸ್ಪ್ರೆಸ್ ಬೆ.5.35
ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ಬೆ.5.50
ಮೈಸೂರು-ಯಶವಂತಪುರ ಪ್ಯಾಸೆಂಜರ್ ಬೆ.7.45
ಮೈಸೂರು-ಅರಸೀಕೆರೆ ಬೆ.6.30
ಮೈಸೂರು-ಚಾಮರಾಜನಗರ ಮ.12.35
ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ರಾ.8.55
ಮೈಸೂರು-ದರ್ಬಾಂಗ ಎಕ್ಸ್ಪ್ರೆಸ್ ಬೆ.10.05
ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರಾ.11
ಚೆನ್ನೈ-ಮೈಸೂರು ಶತಾಬ್ದಿ ರಾ.11
ದರ್ಬಾಂಗ-ಮೈಸೂರು ಎಕ್ಸ್ಪ್ರೆಸ್ ರಾ.8.50ಕ್ಕೆ ನಿರ್ಗಮಿಸಲಿವೆ.
ಮೈಸೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಯಿಂದ ರೈಲ್ವೆ ಸಂಚಾರಕ್ಕೆ ಅಡಚಣೆ
ಯಾಗಿದ್ದು, ಸಕಲೇಶಪುರ-ಸುಬ್ರಮಣ್ಯ ಮೂಲಕ ಸಾಗುವ ರೈಲು ಮಾರ್ಗದಲ್ಲಿ ಸಂಚಾರ ನ್ನು ಆ. 25ರವರೆಗೆ ರದ್ದು ಮಾಡಲಾಗಿದೆ.
‘‘ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸುಬ್ರಮಣ್ಯ-ಯಡಕುಮರಿ ನಡುವಣ ರೈಲ್ವೆ ಮಾರ್ಗದಲ್ಲಿ ಮಣ್ಣು ಕುಸಿತ, ಕಲ್ಲುಬಂಡೆ ಹಳಿಯ ಮೇಲೆ ಬಿದ್ದಿವೆ. ಮೂರು ದಿನದಲ್ಲಿ ಮಣ್ಣು ಕುಸಿತ, ಬಂಡೆ ಬಿದ್ದಿರುವ 42 ಪ್ರಕರಣಗಳು ವರದಿಯಾಗಿವೆ. 32 ಸಾವಿರ ಘನ ಅಡಿಯಷ್ಟು ಮಣ್ಣು ಹಳಿಯ ಮೇಲೆ ಬಿದ್ದಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿದ ಬಳಿಕ ರೈಲು ಸಂಚಾರ ಆರಂಭಿಸಲು ಕ್ರಮ ವಹಿಸಲಾಗುವುದು,’’ ಎಂದು ಮೈಸೂರು ವಿಭಾಗೀಯ ರೈಲ್ವೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ಅರ್ಪಣಾ ಗಾರ್ಗ್ ತಿಳಿಸಿದರು.
ಪರಿಸ್ಥಿತಿ ಅವಲೋಕಿಸಿ ಚಿಂತನೆ: ‘‘ಈ ಬಾರಿ ಸಕಲೇಶಪುರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಮಳೆ ಬಿದ್ದಿದೆ. ಯಡಕುಮರಿಯಲ್ಲಿ ಕಳೆದ ಬಾರಿಯ 3583 ಎಂಎಂ ಮಳೆಗೆ ಹೋಲಿಸಿದರೆ ಈ ವರ್ಷ 9500 ಎಂಎಂ ಮಳೆ ಬಿದ್ದಿದೆ. ಸುಬ್ರಮಣ್ಯ-ಯಡಕುಮರಿ ನಡುವಣ ರೈಲ್ವೆ ಮಾರ್ಗದಲ್ಲಿ ಸುರಕ್ಷತೆ ಹಿನ್ನೆಲೆಯಲ್ಲಿ ಹಗಲಿನಲ್ಲಿ ಮಾತ್ರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆ. 25ರ ಬಳಿಕ ಪರಿಸ್ಥಿತಿ ಯನ್ನು ಅವಲೋಕಿಸಿ ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗು ವುದು,’’ ಎಂದರು. ‘‘ಚಾಮ ರಾಜನಗರ -ಮೈಸೂರು ನಡುವೆ ಸಂಚರಿ ಸುವ ರೈಲಿಗೆ ಹೆಚ್ಚಿನ ಭದ್ರತೆ ಒದಗಿಸಲು ಕ್ರಮ ವಹಿಸ ಲಾಗುವುದು,’’ ಎಂದು ಹೇಳಿದರು.
ಕುಶಾಲನಗರ ಸರ್ವೇ ಕಾರ್ಯ ಪೂರ್ಣ: ‘‘ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಹುಬ್ಬಳ್ಳಿ ನೈರುತ್ಯ ರೈಲ್ವೆ ಜಿಎಂ ಎ.ಕೆ.ಗುಪ್ತಾ ಅವರು, ಮೈಸೂರು-ಕುಶಾಲನಗರ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು ಈ ವರದಿಯನ್ನು ರೈಲ್ವೆ ಬೋರ್ಡ್ಗೆ ಕಳುಹಿಸಿಕೊಡಲಾಗಿದೆ,’’ ಎಂದರು. ಕೊಡಗಿನ ಮೂಲಕ ತಲಚೇರಿವರೆಗೆ ರೈಲ್ವೆ ಮಾರ್ಗದ ವಿಸ್ತರಣೆ ಸಂಬಂಧ ಉತ್ತರಿಸಿದ ಅವರು, ‘‘ಈ ಯೋಜನೆ ಕೊಂಕಣ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಈ ಯೋಜನೆಯನ್ನು ಕೈ ಬಿಟ್ಟಿಲ್ಲ. ನಾಗನಹಳ್ಳಿಯ ರೈಲ್ವೆ ಟರ್ಮಿನಲ್ ಯೋಜನೆ 2018ರಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆ ಡಿಪಿಆರ್ ತಯಾರಿ ಹಂತದಲ್ಲಿದೆ,’’ ಎಂದು ಹೇಳಿದರು.
ನೈರುತ್ಯ ರೈಲ್ವೆ ವಿಭಾಗದಲ್ಲಿ ಆ.15ರಿಂದ ಜಾರಿ ಬಂದ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಬದಲಾದ ವೇಳಾಪಟ್ಟಿಯಂತೆ
ಮೈಸೂರು-ಜೈಪುರ ಎಕ್ಸ್ಪ್ರೆಸ್ ಮೈಸೂರಿನಿಂದ ಬೆಳಗ್ಗೆ 10.30
ಚಾಮರಾಜನಗರ-ತಿರುಪತಿ ಎಕ್ಸ್ಪ್ರೆಸ್ ರಾತ್ರಿ 8.30
ತಿರುಪತಿ-ಚಾಮರಾಜನಗರ ಎಕ್ಸ್ಪ್ರೆಸ್ ಬೆ.7.20 ,
ಮೈಸೂರು-ತುತುಕುಡಿ ಎಕ್ಸ್ಪ್ರೆಸ್ ಸಂ.6.05
ಮೈಸೂರು-ಅಜ್ಮೀರ್ ಎಕ್ಸ್ಪ್ರೆಸ್ ಸಂ.6.35
ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರಾ.9
ಸೋಲಾಪುರ-ಹಾಸನ ಬೆ.7.45
ಹಾಸನ -ಸೋಲಾಪುರ ಸಂ.4
ಯಶವಂತಪುರ-ಮೈಸೂರು 12.15
ಚೆನ್ನೈ-ಮೈಸೂರು ಎಕ್ಸ್ಪ್ರೆಸ್ ಬೆ.5.35
ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ಬೆ.5.50
ಮೈಸೂರು-ಯಶವಂತಪುರ ಪ್ಯಾಸೆಂಜರ್ ಬೆ.7.45
ಮೈಸೂರು-ಅರಸೀಕೆರೆ ಬೆ.6.30
ಮೈಸೂರು-ಚಾಮರಾಜನಗರ ಮ.12.35
ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ರಾ.8.55
ಮೈಸೂರು-ದರ್ಬಾಂಗ ಎಕ್ಸ್ಪ್ರೆಸ್ ಬೆ.10.05
ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರಾ.11
ಚೆನ್ನೈ-ಮೈಸೂರು ಶತಾಬ್ದಿ ರಾ.11
ದರ್ಬಾಂಗ-ಮೈಸೂರು ಎಕ್ಸ್ಪ್ರೆಸ್ ರಾ.8.50ಕ್ಕೆ ನಿರ್ಗಮಿಸಲಿವೆ.