ಆಮಿಷಕ್ಕೆ ಬಲಿಯಾಗಿಲ್ಲ ಎಂದು ಪ್ರಮಾಣ ಮಾಡಿ: ವಿಶ್ವನಾಥ್ಗೆ ಸಾ.ರಾ. ಮಹೇಶ್ ಸವಾಲು
ಬಿಜೆಪಿಯ ಆಮಿಷಕ್ಕೆ ಒಳಗಾಗಿಲ್ಲವೆಂದು ಪ್ರಮಾಣ ಮಾಡಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರಿಗೆ ಶಾಸಕ ಸಾ.ರಾ.ಮಹೇಶ್ ಮತ್ತೆ ಸವಾಲು ಹಾಕಿದರು.
Vijaya Karnataka Web 21 Aug 2019, 5:35 pm
ಮೈಸೂರು: ಹುಣಸೂರಿನ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಬಿಜೆಪಿಯ ಆಮಿಷಕ್ಕೆ ಒಳಗಾಗಿಲ್ಲ ಎಂದು ಕೆ.ಆರ್.ನಗರ ತಾಲೂಕಿನ ಕಪಡಿ ಕ್ಷೇತ್ರ ಅಥವಾ ಯಾವುದಾದರೂ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಶಾಸಕ ಸಾ.ರಾ.ಮಹೇಶ್ ಬುಧವಾರ ಮತ್ತೆ ಸವಾಲು ಹಾಕಿದರು.
ವಿಶ್ವನಾಥ್ ತಮಗೆ ಆಣೆ, ಪ್ರಮಾಣದಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ಆದರೆ, ಅನೇಕ ವರ್ಷಗಳ ಹಿಂದೆ ಮಾಜಿ ಸಚಿವ ನಂಜಪ್ಪ ಅವರನ್ನು ಕೆ.ಆರ್.ನಗರ ತಾಲೂಕಿನ ಕಪಡಿ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದರು. ಆಗ ಆಣೆ, ಪ್ರಮಾಣದಲ್ಲಿದ್ದ ನಂಬಿಕೆ ಈಗ ಏಕಿಲ್ಲ? ಎಂದು ಮಹೇಶ್ ಅವರು ಬು‘ವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಅವರನ್ನು ಕುಟುಕಿದರು.
ವಿಶ್ವನಾಥ್ ತಾವು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲವೆಂದು ಪ್ರಮಾಣ ಮಾಡಿದರೆ ರಾಜಕಾರಣದಿಂದಲೇ ನಿವೃತ್ತನಾಗುವುದಾಗಿ ಮಹೇಶ್ ಸವಾಲು ಹಾಕಿದರು.
ಅವಧಿಗೂ ಮುನ್ನವೇ ವಿಧಾನಸಭೆಗೆ ಮಧ್ಯಂತರ ಚುನಾವಣೆ
ರಾಜ್ಯ ರಾಜಕಾರಣದ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಅವಧಿಗೂ ಮುನ್ನವೇ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯೆತೆ ಇದೆ ಎಂದು ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭವಿಷ್ಯ ನುಡಿದರು.
ವಿಶ್ವನಾಥ್ ತಮಗೆ ಆಣೆ, ಪ್ರಮಾಣದಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ಆದರೆ, ಅನೇಕ ವರ್ಷಗಳ ಹಿಂದೆ ಮಾಜಿ ಸಚಿವ ನಂಜಪ್ಪ ಅವರನ್ನು ಕೆ.ಆರ್.ನಗರ ತಾಲೂಕಿನ ಕಪಡಿ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದರು. ಆಗ ಆಣೆ, ಪ್ರಮಾಣದಲ್ಲಿದ್ದ ನಂಬಿಕೆ ಈಗ ಏಕಿಲ್ಲ? ಎಂದು ಮಹೇಶ್ ಅವರು ಬು‘ವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಅವರನ್ನು ಕುಟುಕಿದರು.
ವಿಶ್ವನಾಥ್ ತಾವು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲವೆಂದು ಪ್ರಮಾಣ ಮಾಡಿದರೆ ರಾಜಕಾರಣದಿಂದಲೇ ನಿವೃತ್ತನಾಗುವುದಾಗಿ ಮಹೇಶ್ ಸವಾಲು ಹಾಕಿದರು.
ಅವಧಿಗೂ ಮುನ್ನವೇ ವಿಧಾನಸಭೆಗೆ ಮಧ್ಯಂತರ ಚುನಾವಣೆ
ರಾಜ್ಯ ರಾಜಕಾರಣದ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಅವಧಿಗೂ ಮುನ್ನವೇ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯೆತೆ ಇದೆ ಎಂದು ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭವಿಷ್ಯ ನುಡಿದರು.