ಎಚ್. ವಿಶ್ವನಾಥ್ ಸ್ಥಿತಿ ನಿಮಗೂ ಆಗಬಹುದು: ಜಿಟಿಡಿಗೆ ಸಾ.ರಾ. ಮಹೇಶ್ ಎಚ್ಚರಿಕೆ
ನನ್ನ ವಿರುದ್ಧ ಮಾತನಾಡಿದವರ ಸ್ಥಿತಿ ಏನಾಗಿದೆ ಎನ್ನುವುದು ಜನತೆಗೆ ಗೊತ್ತಿದೆ. ಅದೇ ರೀತಿ ಎಚ್. ವಿಶ್ವನಾಥ್ ಅವರಿಗೆ ಆದ ಸ್ಥಿತಿ ಜಿ.ಟಿ. ದೇವೇಗೌಡರಿಗೂ ಬರಬಹುದು ಎಂದು ಶಾಸಕ ಸಾ.ರಾ. ಮಹೇಶ್ ಎಚ್ಚರಿಸಿದ್ದಾರೆ.
Vijaya Karnataka Web 24 Aug 2021, 10:10 pm
ಹೈಲೈಟ್ಸ್:
- ನನ್ನ ವಿರುದ್ಧ ಮಾತನಾಡಿದವರ ಸ್ಥಿತಿ ಏನಾಗಿದೆ ಎಂಬುದು ಜನತೆಗೆ ಗೊತ್ತು
- ಎಚ್. ವಿಶ್ವನಾಥ್ ಅವರಿಗೆ ಆದ ಸ್ಥಿತಿ ಜಿ.ಟಿ. ದೇವೇಗೌಡರಿಗೂ ಬರಬಹುದು
- ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ
ಮೈಸೂರು: ನನ್ನ ವಿರುದ್ಧ ಮಾತನಾಡಿದವರ ಸ್ಥಿತಿ ಏನಾಗಿದೆ ಎನ್ನುವುದು ಜನತೆಗೆ ಗೊತ್ತಿದೆ. ಅದೇ ರೀತಿ ಎಚ್. ವಿಶ್ವನಾಥ್ ಅವರಿಗೆ ಆದ ಸ್ಥಿತಿ ಜಿ.ಟಿ. ದೇವೇಗೌಡರಿಗೂ ಬರಬಹುದು ಎಂದು ಶಾಸಕ ಸಾ.ರಾ. ಮಹೇಶ್ ಎಚ್ಚರಿಸಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಪ್ರಕಟಿಸಿದ್ದರು. ಸ್ಥಳೀಯ ನಾಯಕರ ವರ್ತನೆಯಿಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿ, ಪರೋಕ್ಷವಾಗಿ ಸಾ.ರಾ.ಮಹೇಶ್ ಅವರನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಾ.ರಾ. ಮಹೇಶ್ ಬುಧವಾರ ಪ್ರತಿಕ್ರಿಯೆ ನೀಡಿದರು.
ಪಕ್ಷ ತೊರೆದ ಹದಿನೇಳು ಜನರಲ್ಲಿ ಒಬ್ಬರು ಮಾತ್ರ ದಡ ಸೇರಿಲ್ಲ. ಆ ಸ್ಥಿತಿ ನಿಮಗೂ ಆಗಬಹುದು. ವೈಯಕ್ತಿಕ ವರ್ಚಸ್ಸಿದೆ ಎಂದು ಮೆರೆದವರ ಸ್ಥಿತಿ ಏನಾಗಿದೆ? ಜೆಡಿಎಸ್ನಿಂದ ಈ ರೀತಿ ಹೋದವರು ಎಷ್ಟೋ ಜನ ಧೂಳೀಪಟವಾಗಿದ್ದಾರೆ, ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ನನ್ನಿಂದ ನೋವಾಗಿದ್ದಲ್ಲಿ ಜಿ.ಟಿ.ದೇವೇಗೌಡರ ಕ್ಷಮೆ ಕೇಳುತ್ತೇನೆ ಅಂತ ಮೊದಲೇ ಹೇಳಿದ್ದೆ. ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುವುದಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಜಿ.ಟಿ.ದೇವೇಗೌಡರ ರಾಜೀನಾಮೆಯಿಂದ ಹಿನ್ನಡೆಯಾಗುತ್ತದೆ ಎನ್ನುವುದು ಗೊತ್ತಿದೆ. ಅದಕ್ಕಾಗಿ ಪಕ್ಷದಲ್ಲಿ ಉಳಿಸಿಕೊಳ್ಳಲು ರಾಜ್ಯ ನಾಯಕರು ಪ್ರಯತ್ನಿಸಿದ್ದಾರೆ, ಎಂದರು.
ಎಚ್.ಡಿ.ಕುಮಾರಸ್ವಾಮಿ ಇದ್ದಲ್ಲಿ ಮಾತ್ರ ಸಾ.ರಾ. ಮಹೇಶ್ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರು ಸತ್ಯವನ್ನೇ ಹೇಳಿದ್ದಾರೆ. ನಾನೊಬ್ಬ ಜೀರೊ. ಸಾಮಾನ್ಯ ಕಾರ್ಯಕರ್ತ. ಕುಮಾರಸ್ವಾಮಿ, ಪಕ್ಷ ಇಲ್ಲದಿದ್ದಲ್ಲಿ ಜೀರೋ ಆಗ್ತಿದ್ದೆ,’’ಎಂದರು.
ಪಕ್ಷ ತೊರೆದ ಹದಿನೇಳು ಜನರಲ್ಲಿ ಒಬ್ಬರು ಮಾತ್ರ ದಡ ಸೇರಿಲ್ಲ. ಆ ಸ್ಥಿತಿ ನಿಮಗೂ ಆಗಬಹುದು. ವೈಯಕ್ತಿಕ ವರ್ಚಸ್ಸಿದೆ ಎಂದು ಮೆರೆದವರ ಸ್ಥಿತಿ ಏನಾಗಿದೆ? ಜೆಡಿಎಸ್ನಿಂದ ಈ ರೀತಿ ಹೋದವರು ಎಷ್ಟೋ ಜನ ಧೂಳೀಪಟವಾಗಿದ್ದಾರೆ, ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ನನ್ನಿಂದ ನೋವಾಗಿದ್ದಲ್ಲಿ ಜಿ.ಟಿ.ದೇವೇಗೌಡರ ಕ್ಷಮೆ ಕೇಳುತ್ತೇನೆ ಅಂತ ಮೊದಲೇ ಹೇಳಿದ್ದೆ. ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುವುದಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಜಿ.ಟಿ.ದೇವೇಗೌಡರ ರಾಜೀನಾಮೆಯಿಂದ ಹಿನ್ನಡೆಯಾಗುತ್ತದೆ ಎನ್ನುವುದು ಗೊತ್ತಿದೆ. ಅದಕ್ಕಾಗಿ ಪಕ್ಷದಲ್ಲಿ ಉಳಿಸಿಕೊಳ್ಳಲು ರಾಜ್ಯ ನಾಯಕರು ಪ್ರಯತ್ನಿಸಿದ್ದಾರೆ, ಎಂದರು.
ಎಚ್.ಡಿ.ಕುಮಾರಸ್ವಾಮಿ ಇದ್ದಲ್ಲಿ ಮಾತ್ರ ಸಾ.ರಾ. ಮಹೇಶ್ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರು ಸತ್ಯವನ್ನೇ ಹೇಳಿದ್ದಾರೆ. ನಾನೊಬ್ಬ ಜೀರೊ. ಸಾಮಾನ್ಯ ಕಾರ್ಯಕರ್ತ. ಕುಮಾರಸ್ವಾಮಿ, ಪಕ್ಷ ಇಲ್ಲದಿದ್ದಲ್ಲಿ ಜೀರೋ ಆಗ್ತಿದ್ದೆ,’’ಎಂದರು.