ಆ್ಯಪ್ನಗರ

ನಮಗಿಂತ ನಿಮ್ಮ ಸ್ಥಾನವೇ ದೊಡ್ಡದು: ಸಿದ್ದುಗೆ ಟಾಂಗ್ ಕೊಟ್ಟ ಸಚಿವ ಸಾರಾ ಮಹೇಶ್

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಿಂದಲೇ ನಾವೇಲ್ಲ ಸಚಿವರಾಗಿದ್ದೇವೆ. ಈ ಮೈತ್ರಿಯ ಸಮನ್ವಯ ಸಮಿತಿಗೆ ಸಿದ್ದರಾಮಯ್ಯನವರೇ ಅಧ್ಯಕ್ಷರು ಅಲ್ವಾ?

Vijaya Karnataka Web 17 Nov 2018, 1:13 pm
ಮೈಸೂರು: 'ದೊಡ್ಡ ಸ್ಥಾನದಲ್ಲಿರುವ ಸಿದ್ದರಾಮಯ್ಯನವರೇ ನಮ್ಮನ್ನೆಲ್ಲ ಸಚಿವರನ್ನಾಗಿ ಮಾಡಿದ್ದು. ಆದರೆ, ಆ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಚಿವ ಸಾರಾ ಮಹೇಶ್ ಟಾಂಗ್ ನೀಡಿದ್ದಾರೆ.
Vijaya Karnataka Web sidda


ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಿಂದಲೇ ನಾವೇಲ್ಲ ಸಚಿವರಾಗಿದ್ದೇವೆ. ಈ ಮೈತ್ರಿಯ ಸಮನ್ವಯ ಸಮಿತಿಗೆ ಸಿದ್ದರಾಮಯ್ಯನವರೇ ಅಧ್ಯಕ್ಷರು ಅಲ್ವಾ?.. ನಮಗಿಂತ ದೊಡ್ಡ ಹುದ್ದೆ ಅವರಿಗೆ ಇದೆ. ಈ ಬಗ್ಗೆ ಚರ್ಚೆ ಬೇಡ ಎಂದರು.

ಮೇಯರ್ ಸ್ಥಾನ ಜೆಡಿಎಸ್‌ಗೆ ಬೇಕು ಎಂದು ಕೇಳಿದ್ದೇವು. ಆದರೆ, ಮುಂದಿನ ದಿನಗಳ ಹೊಂದಾಣಿಕೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ನೀಡಲಾಗಿದೆ. ಮುಂದಿನ ವರ್ಷ ಜೆಡಿಎಸ್ ಅಭ್ಯರ್ಥಿ ಅದರ ಮುಂದಿನ ವರ್ಷ ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಆಗ್ತಾರೆ. ಆದರೆ, ಕೊನೆಯ ಎರಡು ವರ್ಷ ಜೆಡಿಎಸ್ ಅಭ್ಯರ್ಥಿಯೇ ಮೇಯರ್ ಆಗಿರುತ್ತಾರೆ. ಇದು ಹೈ-ಕಮಾಂಡ್ ನಿರ್ಧಾರ ಎಂದು ಸಾರಾ ಮಹೇಶ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ