ಆ್ಯಪ್ನಗರ

ವಿಜ್ಞಾನ ಕೌತುಕ ಅನಾವರಣ

ಸ್ಮಾರ್ಟ್‌ ಸಿಟಿಗೆ ಆಧುನಿಕ ತಂತ್ರಜ್ಞಾನ, ಟ್ರಾಫಿಕ್‌ ಸಮಸ್ಯೆ, ತ್ಯಾಜ್ಯ ವಿಲೇವಾರಿಗೆ ಪರಿಹಾರ, ಮಳೆನೀರು ಕೊಯ್ಲು ಮಾದರಿ... ಹೀಗೆ ನಾನಾ ವಿಜ್ಞಾನ ಮಾದರಿಗಳು ಗಮನ ಸೆಳೆದವು.

Vijaya Karnataka 12 Jan 2019, 5:00 am
ಮೈಸೂರು : ಸ್ಮಾರ್ಟ್‌ ಸಿಟಿಗೆ ಆಧುನಿಕ ತಂತ್ರಜ್ಞಾನ, ಟ್ರಾಫಿಕ್‌ ಸಮಸ್ಯೆ, ತ್ಯಾಜ್ಯ ವಿಲೇವಾರಿಗೆ ಪರಿಹಾರ, ಮಳೆನೀರು ಕೊಯ್ಲು ಮಾದರಿ... ಹೀಗೆ ನಾನಾ ವಿಜ್ಞಾನ ಮಾದರಿಗಳು ಗಮನ ಸೆಳೆದವು.
Vijaya Karnataka Web science wonder unveiled
ವಿಜ್ಞಾನ ಕೌತುಕ ಅನಾವರಣ


ಅಗಸ್ತ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷ ಣ ಇಲಾಖೆ ಮತ್ತು ಹನಿವೆಲ್‌ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ 'ಜಿಜ್ಞಾಸೆ' ರಾಜ್ಯ ಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ
ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿ ತಂತ್ರಜ್ಞಾನ ಪ್ರದರ್ಶನಗಳು ನಿಬ್ಬೆರಗಾಗಿಸಿದವು.

ಹಲವು ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಪರಮಾಣುಗಳ ರಚನೆ, ವಿದ್ಯುತ್ಕಾಂತೀಯ ಕ್ರೇನ್‌, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ಸ್ವಯಂಚಾಲಿತ ಹನಿ ನೀರಾವರಿ ಪದ್ಧತಿ ಸೇರಿದಂತೆ ನಾನಾ ಬಗೆಯ ಮಾದರಿಗಳನ್ನು ಪ್ರದರ್ಶಿಸಿದರು.

ಸಾರ್ವಜನಿಕ ಶಿಕ್ಷ ಣ ಇಲಾಖೆಯ ಜಂಟಿ ನಿರ್ದೇಶಕ ಮಾದೇಗೌಡ ಸ್ಪರ್ಧೆಗೆ ಚಾಲನೆ ನೀಡಿ,''ಮಕ್ಕಳಲ್ಲಿ ವೈಜ್ಞಾನಿಕ ಆಲೋಚನೆಗಳನ್ನು ಹುಟ್ಟುಹಾಕುವುದರ ಜತೆಗೆ ವಿಮರ್ಶಾ ಮನೋಭಾವ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಶ್ಲಾಘನೀಯ,'' ಎಂದರು.

ಅಗಸ್ತ್ಯ ಪ್ರತಿಷ್ಠಾನದ ನಿರ್ದೇಶಕ ಹರಿಹರನ್‌, ಬಳ್ಳಾರಿ ಸಂಶೋಧನಾ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸೋಮಶೇಖರ್‌, ವಿಜ್ಞಾನಿಗಳಾದ ಕೊಳ್ಳೇಗಾಲ ಶರ್ಮ, ನಾಗೇಂದ್ರ, ಅನ್ನಪೂರ್ಣೇಶ್ವರ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ