ಆ್ಯಪ್ನಗರ

ವಿಜ್ಞಾನಿ ಸೋಮಶೇಖರ್‌ ಪಾರ್ಥಿವ ಶರೀರ ನಿವಾಸಕ್ಕೆ

ಚುಂಚನಕಟ್ಟೆ ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿದ್ದ ಸಿಎಫ್‌ಟಿಆರ್‌ಐ ವಿಜ್ಞಾನಿ ಸೋಮಶೇಖರ್‌ ಅವರ ಪಾರ್ಥಿವ ಶರೀರವನ್ನು ಜಯಲಕ್ಷ್ಮೀಪುರಂನಲ್ಲಿರುವ ನಿವಾಸಕ್ಕೆ ತರಲಾಗಿದೆ.

Vijaya Karnataka Web 4 Jun 2018, 3:07 pm
ಮೈಸೂರು: ಚುಂಚನಕಟ್ಟೆ ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿದ್ದ ಸಿಎಫ್‌ಟಿಆರ್‌ಐ ವಿಜ್ಞಾನಿ ಸೋಮಶೇಖರ್‌ ಅವರ ಪಾರ್ಥಿವ ಶರೀರವನ್ನು ಜಯಲಕ್ಷ್ಮೀಪುರಂನಲ್ಲಿರುವ ನಿವಾಸಕ್ಕೆ ತರಲಾಗಿದೆ.
Vijaya Karnataka Web somashekar


ಮೂಲತಃ ನೆಲಮಂಗಲದ ಚಿಕ್ಕಮಾರನಹಳ್ಳಿ ಗ್ರಾಮದವರಾಗಿರುವ .ಮೃತ ಸೋಮಶೇಖರ್ ಅವರ ಮೃತದೇಹವನ್ನು ಸಿಎಫ್ ಟಿಆರ್ ಐ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನಲ್ಲಿರುವ ನಿವಾಸಕ್ಕೆ ತರಲಾಗಿದೆ.

ಸೋಮಶೇಖರ್‌ ಅವರಿಗೆ ಪತ್ನಿ ಪ್ರತಿಮಾ ತ್ರಿಪಾಠಿ, ಐದು ವರ್ಷ ಮಗಳು ಇಶಾನಿ, ತಂದೆ ಸಿದ್ದರಾಮಯ್ಯ, ತಾಯಿ ಜಯಮ್ಮಇದ್ದಾರೆ.

ಸೋಮಶೇಖರ್‌ ಪಿಎಚ್‌ಡಿ ಮಾಡುವಾಗ ಲಖನೌ ಮೂಲದ ಪ್ರತಿಮಾ ತ್ರಿಪಾಠಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷದಿಂದ ಸಿಎಎಫ್‌ಟಿಆರ್‌ಐನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕುಟುಂಬದೊಂದಿಗೆ ಚುಂಚನಕಟ್ಟೆ ಕಾವೇರಿ ಜಲಪಾತ ನೋಡಲು ಬಂದು ಜಲಪಾತದಲ್ಲಿ ಆಟವಾಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ