ಆ್ಯಪ್ನಗರ

ಮೈಸೂರು: ಕೃಷ್ಣರಾಜನಗರ ಸೊಸೆಗೆ ಒಲಿದ ಉನ್ನತ ಹುದ್ದೆ..! ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದ ಅಧಿಕಾರಿ

ಕೃಷ್ಣರಾಜನಗರ ತಾಲೂಕಿನ ಸೊಸೆಗೆ ಉನ್ನತ ಹುದ್ದೆ ಒಲಿದು ಬಂದಿದ್ದು, ಹಿರಿಯ ಕೆಎಎಸ್‌ ಅಧಿಕಾರಿ ಬಿಆರ್‌ ಪೂರ್ಣಿಮಾ ಅವರಿಗೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ನೀಡಲಾಗಿದೆ. ತಾಲೂಕಿನ ಹೆಣ್ಣುಮಗಳೊಬ್ಬರು ಉನ್ನತ ಹುದ್ದೆಗೆ ಏರಿರುವುದು ತಾಲೂಕು ಹೆಮ್ಮೆಪಡುವ ವಿಚಾರವಾಗಿದೆ.

Vijaya Karnataka Web 22 Jan 2021, 9:46 am
ಕೃಷ್ಣರಾಜನಗರ (ಮೈಸೂರು): ಮೈಸೂರು, ಮಂಡ್ಯ ಜಿಲ್ಲೆ ಸೇರಿ ಈ ಭಾಗದಲ್ಲಿ ಕೆಲಸ ಮಾಡಿದ್ದ ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ಸರಕಾರ ಐಎಎಸ್‌ ಅಧಿಕಾರಿಗಳಾಗಿ ಬಡ್ತಿ ನೀಡಿ ನೇಮಕ ಮಾಡಲಾಗಿದ್ದು, ಬಡ್ತಿ ಪಡೆದವರಲ್ಲಿ ತಾಲೂಕಿನ ಹೆಣ್ಣು ಮಗಳೊಬ್ಬರು ಇರುವುದು ಕೃಷ್ಣರಾಜನಗರ ತಾಲೂಕಿನ ಜನತೆ ಹೆಮ್ಮೆಪಡುವ ವಿಚಾರ.
Vijaya Karnataka Web BR Poornima
ಬಿಆರ್‌ ಪೂರ್ಣಿಮಾ, ಐಎಎಸ್‌ ಆಗಿ ಬಡ್ತಿ ಪಡೆದ ಅಧಿಕಾರಿ (ಸಂಗ್ರಹ ಚಿತ್ರ)


ಮೂಲತಃ ಮಂಡ್ಯ ಜಿಲ್ಲೆಯ ಬೆಸಗರಹಳ್ಳಿ ಗ್ರಾಮದ ಡಾ.ಬೆಸಗರಹಳ್ಳಿ ರಾಮಣ್ಣನವರ ಪುತ್ರಿ ಬಿ.ಆರ್‌.ಪೂರ್ಣಿಮಾ ಐಎಎಸ್‌ಗೆ ಬಡ್ತಿ ಪಡೆದವರಾಗಿದ್ದು, ಇವರು ಕೃಷ್ಣರಾಜನಗರ ತಾಲೂಕು ಚಂದಗಾಲು ಗ್ರಾಮದ ಶಿವಣ್ಣನವರ ಪುತ್ರ ಹಾಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಸಿ.ಎಸ್‌.ಸುದರ್ಶನ್‌ ಅವರ ಪತ್ನಿ.

ಈ ಮೂಲಕ ತಾಲೂಕಿನ ಸೊಸೆಯಾಗಿ ಈಗ ಉನ್ನತ ಹುದ್ದೆಗೇರಿದ್ದಾರೆ. ಮೈಸೂರು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಪಡೆದು ಮೊದಲಿಗೆ ಉಪನ್ಯಾಸಕರಾಗಿ ಮತ್ತು ಅಬಕಾರಿ ಇಲಾಖೆಯಲ್ಲಿ ಅಬಕಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿ 2004ರ ಸಾಲಿನಲ್ಲಿ ಕರ್ನಾಟಕ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2006ರಲ್ಲಿಸಹಾಯಕ ಆಯುಕ್ತರಾಗಿ, ಕಂದಾಯ ಇಲಾಖೆ, ಪಾಂಡವಪುರ ಉಪವಿಭಾಗಾಧಿಕಾರಿಯಾಗಿ, ಕರ್ತವ್ಯ ನಿರ್ವಹಿಸಿ ಮಂಡ್ಯ ಜಿಲ್ಲೆಯ ಭೂ ಸ್ವಾಧೀನಾಧಿಕಾರಿಯಾಗಿ ಮಂಡ್ಯ ಮತ್ತು ರಾಮನಗರ ಜಿಲ್ಲೆಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 36,991 ಹೊಸ ವೋಟರ್ಸ್..! ಹೊಸ ಆಶಯದೊಂದಿಗೆ ಹಕ್ಕು ಚಲಾಯಿಸಲು ಕಾತರಅಪರ ಜಿಲ್ಲಾಧಿಕಾರಿಗಳಾಗಿ ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಪ್ರಸಕ್ತ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಇಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಸರಕಾರ ಇವರಿಗೆ ಐಎಎಸ್‌ ಅಧಿಕಾರಿಗಳಾಗಿ ಬಡ್ತಿ ನೀಡಿ ನೇಮಕ ಮಾಡಲಾಗಿದ್ದು ತಾಲೂಕಿನ ಸೊಸೆಯೊಬ್ಬರು ಸರಕಾರದ ಉನ್ನತ ಹುದ್ದೆ ಅಲಂಕರಿಸಿರುವುದು ತಾಲೂಕು ಹೆಮ್ಮೆಪಡುವ ವಿಚಾರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ