ಆ್ಯಪ್ನಗರ

ನನ್ನ ಮತ್ತು ಶಾಮನೂರು ವಾಕ್ಸಮರ ಮುಗಿದ ಅಧ್ಯಾಯ: ಎಂ ಬಿ ಪಾಟೀಲ್

ಮೈಸೂರಿನಲ್ಲಿ ಮಾತನಾಡುತ್ತಿದ್ದ ಅವರು, ಶಾಮನೂರು ಶಿವಶಂಕರಪ್ಪ ನನ್ನ ತಂದೆ ಸಮಾನ. ತಿಳಿದು ತಿಳಿಯದೇ ಅವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ನಮ್ಮ ವಾಕ್ ಸಮರವೀಗ ಮುಗಿದ ಅಧ್ಯಾಯ ಎಂದರು.

Vijaya Karnataka Web 14 Jan 2019, 4:47 pm
ಮೈಸೂರು: ನನ್ನ ಮತ್ತು ಶಾಮನೂರು ಶಿವಶಂಕರಪ್ಪ ನಡುವಿನ ವಾಕ್ಸಮರ ಮುಗಿದ ಅಧ್ಯಾಯ, ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
Vijaya Karnataka Web M B Patil


ಮೈಸೂರಿನಲ್ಲಿ ಮಾತನಾಡುತ್ತಿದ್ದ ಅವರು, ಶಾಮನೂರು ಶಿವಶಂಕರಪ್ಪ ನನ್ನ ತಂದೆ ಸಮಾನ. ತಿಳಿದು ತಿಳಿಯದೇ ಅವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ನಮ್ಮ ವಾಕ್ ಸಮರವೀಗ ಮುಗಿದ ಅಧ್ಯಾಯ ಎಂದರು.

ಲಿಂಗಾಯಿತ ಧರ್ಮ ಅನ್ನುವುದು ನಮ್ಮ‌ಆಸ್ಮಿತೆ. ಜೈನರು, ಬೌದ್ಧರು, ಮುಸ್ಲಿಮರು, ಕ್ರಿಶ್ಚಿಯನ್ನರಿಗೆ ವಿಶೇಷ ವ್ಯಕ್ತಿ ಇರುವಂತೆ ನಮಗೂ ಬಸವಣ್ಣ ವಿಶೇಷ ವ್ಯಕ್ತಿ.
ಚುನಾವಣೆಗೆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರ ಬಂದಿದಕ್ಕೆ ಬೇರೆ ರೀತಿ ಊಹಿಸಲಾಗಿತ್ತು. ನಾನು ಈಗ ಗೃಹ ಸಚಿವನಾಗಿದ್ದೇನೆ. ವೈಯಕ್ತಿಕವಾಗಿ ಧರ್ಮದಲ್ಲಿ ಇರುತ್ತೇನೆ. ಆದರೆ ಕಾನೂನು ಹೋರಾಟ ಮುಂದುವರಿಯುತ್ತದೆ, ಎಂದು ಅವರು ಹೇಳಿದ್ದಾರೆ.

ಪಾಟೀಲ್‌ ಮಂಗ' ಹೇಳಿಕೆಗೆ ಎಂ.ಬಿ.ಪಾಟೀಲ್‌ - ಶಾಮನೂರು ಶಿವಶಂಕರಪ್ಪ ನಡುವೆ ವಾಗ್ಯುದ್ಧ

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಎಂ ಬಿ ಪಾಟೀಲ್ ನಡುವೆ ಕಳೆದೆರಡು ದಿನಗಳಿಂದ ಭಾರಿ ಕೆಸರೆರೆಚಾಟ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ