ಆ್ಯಪ್ನಗರ

ಚಿಕ್ಕಮಾದು ಆರೋಗ್ಯ ವಿಚಾರಿಸಿದ ದೇವೇಗೌಡ

ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಚ್‌.ಡಿ.ಕೋಟೆ ಜೆಡಿಎಸ್‌ ಶಾಸಕ ಎಸ್‌.ಚಿಕ್ಕಮಾದು ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶುಕ್ರವಾರ ಸಂಜೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Vijaya Karnataka 14 Oct 2017, 5:00 am
ಮೈಸೂರು: ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಚ್‌.ಡಿ.ಕೋಟೆ ಜೆಡಿಎಸ್‌ ಶಾಸಕ ಎಸ್‌.ಚಿಕ್ಕಮಾದು ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶುಕ್ರವಾರ ಸಂಜೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
Vijaya Karnataka Web shortly after hearing the health of deve gowda
ಚಿಕ್ಕಮಾದು ಆರೋಗ್ಯ ವಿಚಾರಿಸಿದ ದೇವೇಗೌಡ


ಇದಕ್ಕೂ ಮುನ್ನ ಬೆಳಗ್ಗೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು ಚಿಕ್ಕಮಾದು ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.

ನಿಖಿಲ್‌ ಮೊದಲು ನಟ
ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಮೊದಲು ನಟ. ಆತನ ಸಿನಿಮಾ ವರ್ಚಸ್ಸು ಪಕ್ಷಕ್ಕೆ ಅನುಕೂಲ ಆಗುವುದಿದ್ದರೆ ಏಕೆ ಬಳಕೆ ಆಗಬಾರದು ? ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುವುದಾದರೆ, ಆತನೂ ಆನಂದವಾಗಿ ಮಾಡಲಿ. ತಂದೆಗೋಸ್ಕರ ಓಡಾಡಲಿ,’’ ಎಂದು ಹೇಳಿದರು.

ಅನುಗ್ರಹವಿದ್ದರೆ ಕುಮಾರಸ್ವಾಮಿ ಸಿಎಂ

ದೇವರು-ಜ್ಯೋತಿಷ್ಯವನ್ನು ನಂಬುತ್ತೇನೆ. ದೇವರ ಆಶೀರ್ವಾದ ಪಡೆದೇ ರಾಜಕೀಯ ಆರಂಭಿಸಿದೆ. ದೇವರು, ಜನರ ಅನುಗ್ರಹ ಇದ್ದರೆ ಮಾತ್ರ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದರು.
ಕುಮಾರಸ್ವಾಮಿ ಅವರೇ ಮುಂದಿನ ಸಿಎಂ ಎಂಬ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ಸಿಎಂ ಆಗೋದು, ಬಿಡೋದು ದೈವಿಚ್ಚೆ. ನಾನೊಬ್ಬ ತಂದೆಯಾಗಿ ಮಗನ ಆರೋಗ್ಯ ಕಾಪಾಡಮ್ಮ ಎಂದು ಪ್ರಾರ್ಥಿಸಿದ್ದೇನೆ,’’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ಗೆ ಮರಳಿ ಬರುತ್ತಾರಂತೆ ಎಂಬ ವದಂತಿಗೆ ಗರಂ ಆದ ದೇವೇಗೌಡರು, ‘‘ ಆ ರೀತಿ ಎಲ್ಲ ಲಘುವಾಗಿ ಮಾತನಾಡಬಾರದು. ಅವರು ಜವಾಬ್ದಾರಿಯುತ ಸ್ಥಾನ ದಲ್ಲಿದ್ದಾರೆ, 2018ರ ಚುನಾವಣೆಯನ್ನು ಕಾಂಗ್ರೆಸ್‌ ಅವರ ನೇತೃತ್ವದಲ್ಲೇ ಎದುರಿಸಬಹುದು,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ