ಆ್ಯಪ್ನಗರ

ಹುಣಸೂರಲ್ಲಿ ತಾವೇ ಅಭ್ಯರ್ಥಿಗಳೆಂದ ಸಿದ್ದು, ಶ್ರೀರಾಮುಲು

​​ಹುಣಸೂರು ವಿಧಾನಸಭಾ ಉಪ ಚುನಾ ವಣೆಯ ಕಣದಲ್ಲಿವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪರೋಕ್ಷವಾಗಿ ತಾವೇ ಅಭ್ಯರ್ಥಿಗಳು ಎಂದು ಘೋಷಿಸಿಕೊಂಡಿದ್ದಾರೆ.

Vijaya Karnataka 26 Nov 2019, 5:00 am
ಮೈಸೂರು: ಹುಣಸೂರು ವಿಧಾನಸಭಾ ಉಪ ಚುನಾ ವಣೆಯ ಕಣದಲ್ಲಿವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪರೋಕ್ಷವಾಗಿ ತಾವೇ ಅಭ್ಯರ್ಥಿಗಳು ಎಂದು ಘೋಷಿಸಿಕೊಂಡಿದ್ದಾರೆ.
Vijaya Karnataka Web by election logo


ಈ ಮೂಲಕ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿಕಳೆದ ಅಸೆಂಬ್ಲಿಚುನಾವಣೆಯಲ್ಲಿಈ ಇಬ್ಬರು ನಾಯಕರ ಮಧ್ಯೆ ನಡೆದ ಜಿದ್ದಾಜಿದ್ದಿ ಹುಣಸೂರು ಕ್ಷೇತ್ರದಲ್ಲಿಈಗ ಪ್ರತಿಧ್ವನಿಸಿದೆ. ''ಈ ಕ್ಷೇತ್ರದಲ್ಲಿನಾನೇ ಅಭ್ಯರ್ಥಿ ಎಂದು ತಿಳಿದು ವೋಟು ಕೊಡಿ. ನಮ್ಮ ಪಕ್ಷದ ಅಭ್ಯರ್ಥಿ ಮಂಜುನಾಥ್‌ಗೆ ವೋಟು ಕೊಟ್ಟರೆ ನನಗೇ ವೋಟು ಕೊಟ್ಟಂತೆ'' ಎಂದು ಸಿದ್ದರಾಮಯ್ಯ ಕುರುಬ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿಮತ ಕೇಳಿದ್ದಾರೆ. ಇದೇ ವೇಳೆ ಶ್ರೀರಾಮುಲು ಅವರು ತಮ್ಮ ನಾಯಕ ಸಮಾಜದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳ್ಳಿಗಳಲ್ಲಿ''ವಿಶ್ವನಾಥ್‌ ನೆಪಮಾತ್ರದ ಅಭ್ಯರ್ಥಿ. ಶ್ರೀರಾಮುಲು ಇಲ್ಲಿನಿಜವಾದ ಅಭ್ಯರ್ಥಿ ಎಂದು ತಿಳಿದು ವೋಟು ಕೊಡಿ,'' ಎಂದು ಪ್ರಚಾರ ನಡೆಸಿದ್ದಾರೆ.

ಶ್ರೀರಾಮುಲು ಹುಣಸೂರು ವಿಧಾನ ಸಭಾ ಕ್ಷೇತ್ರದಲ್ಲಿಭಾನುವಾರ ಮಿಂಚಿನ ಪ್ರವಾಸ ಕೈಗೊಂಡು ಮತ ಯಾಚನೆ ಮಾಡಿದರು. ಸಿಎಂ ಯಡಿಯೂರಪ್ಪ ಹುಣಸೂರು ಕ್ಷೇತ್ರದ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಈ ಕ್ಷೇತ್ರ ಮಾದರಿ ಕ್ಷೇತ್ರವಾಗಬೇಕು ಎಂದಿದ್ದಾರೆ. ಹುಣಸೂರು ವಿಧಾನಸಭಾ ಉಪ ಚುನಾವಣೆಯ ಕಣ ದಿನೇದಿನೇ ರಂಗೇರುತ್ತಿದ್ದು ಪ್ರಚಾರದ ಭರಾಟೆ ಬಿರುಸುಗೊಂಡಿದೆ. ಇದೇ ವೇಳೆ ವಿವಿಧ ಜಾತಿ ಸಂಘಟನೆಗಳ ಮುಖಂಡರನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ತನ್ನತ್ತ ಸೆಳೆಯಲು ಕಸರತ್ತು ಆರಂಭಿಸಿದೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿಜಾತಿ ಸಂಘಟನೆಗಳ ಮುಖಂಡರು ರಾಜಕೀಯ ಪಕ್ಷವನ್ನು ಬೆಂಬಲಿಸುವ ವಿಚಾರದಲ್ಲಿವಿಭಿನ್ನ ನಿಲುವು ತಳೆದಿದ್ದಾರೆ. ಕೆಲವು ಮುಖಂಡರು ಬಿಜೆಪಿ, ಇನ್ನು ಕೆಲವು ಮುಖಂಡರು ಕಾಂಗ್ರೆಸ್‌ಗೆ ಬೆಂಬಲವನ್ನು ಘೋಷಿಸಿದ್ದಾರೆ.

ವಿವಿಧ ಜಾತಿಗಳ ಸಂಘಟನೆಯ ಹೆಚ್ಚಿನ ಮುಖಂಡರು ಬಿಜೆಪಿಯ ವಿಶ್ವನಾಥ್‌ ಅವರಿಗೆ ಬೆಂಬಲ ಸಾರಿದ್ದಾರೆ. ಈ ಮಧ್ಯೆ ಜಿಲ್ಲಾಪಂಚಾಯತ್‌ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದು ಇದು ಕ್ಷೇತ್ರದಲ್ಲಿಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಒಕ್ಕಲಿಗ ಸಮಾಜದ ರಾಜಣ್ಣ ಕಳೆದ 10 ವರ್ಷ ಗಳಿಂದ ಕಾಂಗ್ರೆಸ್‌ನಲ್ಲಿತಮ್ಮನ್ನು ಕಡೆಗಣಿಸ ಲಾಗಿತ್ತು. ಇದು ಬೇಸರ ತಂದಿತ್ತು. ಮತದಾರರ ಋುಣ ತೀರಿಸಲು ನನಗೆ ಅಧಿಕಾರ ಬೇಡವೇ? ಎಂದು ತಮ್ಮ ಬೆಂಬಲಿಗರ ಸಭೆಯಲ್ಲಿಭಾನುವಾರ ಅಳಲು ತೋಡಿ ಕೊಂಡಿದ್ದರು. ರಾಜಣ್ಣ ಹುಣಸೂರಿನಲ್ಲಿಸೋಮವಾರ ಸಿಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿತಮ್ಮ ಬೆಂಬಲಿ ಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ