ಖರೀದಿಗೆ ಬಂದ ಗ್ರಾಹಕರು ಬರಿಗೈಲಿ ವಾಪಸ್
ಮೈಸೂರು: ವರಮಹಾಲಕ್ಷ್ಮಿ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.15ರಿಂದ 24ರವರೆಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದರಿಂದ ಬುಧವಾರ ರೇಷ್ಮೆ ಸೀರೆ ಖರೀದಿಗೆ ಮುಗಿಬಿದ್ದ ಸಾರ್ವಜನಿಕರು ಬರಿಗೈನಲ್ಲಿ ಹಿಂತಿರುಗಿದರು.
ಆ.15ರಿಂದಲೇ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟವಾಗಲಿದೆ ಎಂದು ಪ್ರಚಾರವಾಗಿದ್ದ ಹಿನ್ನೆಲೆಯಲ್ಲಿ ಜನರು ಬುಧವಾರ ನಗರದ ಕೆಎಸ್ಐಸಿ ಮಾರಾಟ ಮಳಿಗೆಗೆ ತೆರಳಿದರು. ಆದರೆ ಅಲ್ಲಿ ಸ್ಥಳೀಯ ಚುನಾವಣೆ ಇರುವುದರಿಂದ ರಿಯಾಯಿತಿ ಮಾರಾಟವನ್ನು ಮುಂದೂಡಲಾಗಿದೆ ಎಂದು ಮಾರಾಟಗಾರರು ತಿಳಿಸಿದರು.
ಹಾಗಾಗಿ ಕಡಿಮೆ ಬೆಲೆಗೆ ಸೀರೆ ಖರೀದಿಸಲು ಬಂದ ಜನತೆ ನಿರಾಸೆಯಿಂದ ಹಿಂತಿರುಗಿದರು. ಮೊದಲಿನಿಂದಲೂ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ(4,500 ರೂ.)ರೇಷ್ಮೆ ಸೀರೆ ಮಾರಾಟ ಮಾಡುವುದಾಗಿ ಪ್ರಚಾರ ಮಾಡಿ ಅಂತಿಮ ಹಂತದಲ್ಲಿ ನೀತಿ ಸಂಹಿತೆ ಕಾರಣಕ್ಕೆ ರಿಯಾಯಿತಿ ಮಾರಾಟ ರದ್ದುಪಡಿಸಿರುವುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದೆ ಇರುವುದೆ ಈ ಗೊಂದಲಕ್ಕೆ ಕಾರಣವಾಗಿದೆ. ನಗರದಲ್ಲಿ ಕೆಎಸ್ಐಸಿಯ ಆರು ಮಾರಾಟ ಮಳಿಗೆಗಳಿದ್ದು ಸಿಲ್ಕ್ ಫ್ಯಾಕ್ಟರಿ ಔಟ್ಲೆಟ್ನ ಮುಂಭಾಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಮೈಸೂರು: ವರಮಹಾಲಕ್ಷ್ಮಿ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.15ರಿಂದ 24ರವರೆಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದರಿಂದ ಬುಧವಾರ ರೇಷ್ಮೆ ಸೀರೆ ಖರೀದಿಗೆ ಮುಗಿಬಿದ್ದ ಸಾರ್ವಜನಿಕರು ಬರಿಗೈನಲ್ಲಿ ಹಿಂತಿರುಗಿದರು.
ಆ.15ರಿಂದಲೇ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟವಾಗಲಿದೆ ಎಂದು ಪ್ರಚಾರವಾಗಿದ್ದ ಹಿನ್ನೆಲೆಯಲ್ಲಿ ಜನರು ಬುಧವಾರ ನಗರದ ಕೆಎಸ್ಐಸಿ ಮಾರಾಟ ಮಳಿಗೆಗೆ ತೆರಳಿದರು. ಆದರೆ ಅಲ್ಲಿ ಸ್ಥಳೀಯ ಚುನಾವಣೆ ಇರುವುದರಿಂದ ರಿಯಾಯಿತಿ ಮಾರಾಟವನ್ನು ಮುಂದೂಡಲಾಗಿದೆ ಎಂದು ಮಾರಾಟಗಾರರು ತಿಳಿಸಿದರು.
ಹಾಗಾಗಿ ಕಡಿಮೆ ಬೆಲೆಗೆ ಸೀರೆ ಖರೀದಿಸಲು ಬಂದ ಜನತೆ ನಿರಾಸೆಯಿಂದ ಹಿಂತಿರುಗಿದರು. ಮೊದಲಿನಿಂದಲೂ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ(4,500 ರೂ.)ರೇಷ್ಮೆ ಸೀರೆ ಮಾರಾಟ ಮಾಡುವುದಾಗಿ ಪ್ರಚಾರ ಮಾಡಿ ಅಂತಿಮ ಹಂತದಲ್ಲಿ ನೀತಿ ಸಂಹಿತೆ ಕಾರಣಕ್ಕೆ ರಿಯಾಯಿತಿ ಮಾರಾಟ ರದ್ದುಪಡಿಸಿರುವುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದೆ ಇರುವುದೆ ಈ ಗೊಂದಲಕ್ಕೆ ಕಾರಣವಾಗಿದೆ. ನಗರದಲ್ಲಿ ಕೆಎಸ್ಐಸಿಯ ಆರು ಮಾರಾಟ ಮಳಿಗೆಗಳಿದ್ದು ಸಿಲ್ಕ್ ಫ್ಯಾಕ್ಟರಿ ಔಟ್ಲೆಟ್ನ ಮುಂಭಾಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.