ಆ್ಯಪ್ನಗರ

ತನಗಾಗಿ ಕೂಡಿಟ್ಟ ಹಣವನ್ನೇ ಕೊರೊನಾ ಪರಿಹಾರ ನಿಧಿಗೆ ನೀಡಿದ ಮೈಸೂರು ಬಾಲಕ..!

ಕೊರೊನಾ ಮಹಾಮಾರಿ ಇಡೀ ವಿಶ್ವವನ್ನು ನಡುಗಿಸುತ್ತಿದ್ದು, ವೈರಸ್‌ ನಿಯಂತ್ರಣಕ್ಕೆ ಎಲ್ಲ ಸರಕಾರಗಳು ಸಮರವನ್ನೇ ಸಾರಿವೆ. ಸರಕಾರಗಳು ಸ್ಥಾಪಿಸಿರುವ ಪರಿಹಾರ ನಿಧಿಗೆ ಸಾಮನ್ಯ ಜನರಿಂದಿಡಿದು ಸೆಲೆಬ್ರಿಟಿ, ಉದ್ಯಮಿಗಳು ದೇಣಿಗೆ ನೀಡುತ್ತಿದ್ದು, ಈಗ ಇವರ ಸಾಲಿಗೆ ಮೈಸೂರಿನ ವಿದ್ಯಾರ್ಥಿಯೊಬ್ಬ ತಾನೂ ಕೂಡಿಟ್ಟಿರುವ ಹಣವನ್ನು ದೇಣಿಗೆಯಾಗಿ ನೀಡಿದ್ದಾನೆ.

Vijaya Karnataka Web 9 Apr 2020, 9:10 pm
ಮೈಸೂರು: ಡೆಡ್ಲಿ ವೈರಸ್‌ ಕೊರೊನಾ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಹರಿದುಬರುತ್ತಿದೆ. ಜನರ ಕಷ್ಟಕ್ಕೆ ಜನರೇ ದನಿಯಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಗೋಲಕದಲ್ಲಿ ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾನೆ.
Vijaya Karnataka Web MYSURU


ಹೌದು, ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಹದೇವಪುರ ನಿವಾಸಿ ಜಯಸಿಂಹ ಶ್ರೀಧರ್, ಶ್ರೀಲಕ್ಷಿ ಅವರ ಪುತ್ರ ಪ್ರಮುಖ್ ಸಿಂಹ ತನ್ನ ಜನ್ಮದಿನದ ಪ್ರಯುಕ್ತ ತನ್ನ ಗೋಲಕದ ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾನೆ. ಮೈಸೂರು - ಬೆಂಗಳೂರು ರಸ್ತೆಯಲ್ಲಿರುವ ಸರಕಾರಿ ಅತಿಥಿ ಗೃಹದಲ್ಲಿಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡಿದ್ದಾನೆ.

ಗೋಲಕದ ಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ ಹಸ್ತಾಂತರ ಮಾಡಿದ ವೇಳೆ ಸಚಿವರು, ಗೋಲಕಕ್ಕೆ ಎರಡು ಸಾವಿರ ರೂ ಹಾಕಿ ಆ ಗೋಲಕವನ್ನು ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತರಿಗೆ ನೀಡಿದರಲ್ಲದೇ, ಅಲ್ಲಿರುವ ಹಣವನ್ನು ಲೆಕ್ಕ ಹಾಕಿ ಸರಕಾರಕ್ಕೆ ಕಳುಹಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್‌ ಸಿಂಹ ಕೂಡ ಹಾಜರಿದ್ದರು.

ಕೊರೊನಾ ನಿಯಂತ್ರಣಕ್ಕೆ ನ್ಯಾನೋ ವಾಚ್‌ ಕಂಡು ಹಿಡಿದ ಮೈಸೂರಿನ ಸ್ವಾತಿ ಹೆಗ್ಡೆ..!

ಇದೇ ವೇಳೆ ಮಾತನಾಡಿದ ಬಾಲಕ ಪ್ರಮುಖ್‌, ನನ್ನ ಜನ್ಮ ದಿನದ ಪ್ರಯುಕ್ತ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಅನಿಸಿತ್ತು. ನಮ್ಮ ದೇಶ ಇಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ಜನ್ಮದಿನ ಆಚರಣೆ ಬೇಡ ಎಂದು ವರ್ಷದಿಂದ ಕೂಡಿಟ್ಟ ಹುಂಡಿ ಹಣವನ್ನು ಕಷ್ಟದಲ್ಲಿರುವವರಿಗೆ ನೆರವಾಗಲಿ ಎಂದು ನೀಡಿದ್ದೇನೆ. ಇದೇ ನನ್ನ ಆಚರಣೆ. ಇದಕ್ಕೆ ನಮ್ಮ ಶಾಲೆ ಮತ್ತು ಕುಟುಂಬದ ಬೆಂಬಲವಿದೆ ಎಂದು ತಿಳಿಸಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನಾಯಕತ್ವ ಸಹಿಸದ ಪಾಕ್‌ನಿಂದ ಹೊಸ ತಂಟೆ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ