ಆ್ಯಪ್ನಗರ

ಜೀತಕ್ಕಿದ್ದ ಕಾರ್ಮಿಕರ ರಕ್ಷಣೆ, ಪ್ರಮುಖ ಆರೋಪಿಯ ಬಂಧನ

ಟಿಬೇಟಿಯನ್ ನಿರಾಶ್ರಿತರ ಕ್ಯಾಂಪ್ ಪ್ರದೇಶದಲ್ಲಿ ಜೀತಕ್ಕಿದ್ದ 17 ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ.

Vijaya Karnataka Web 8 Sep 2018, 5:05 pm
ಪಿರಿಯಾಪಟ್ಟಣ: ಟಿಬೇಟಿಯನ್ ನಿರಾಶ್ರಿತರ ಕ್ಯಾಂಪ್ ಪ್ರದೇಶದಲ್ಲಿ ಜೀತಕ್ಕಿದ್ದ 17 ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ.
Vijaya Karnataka Web arrest


ಗದಗ, ಅಣ್ಣಿಗೇರಿ, ದಾವಣಗೆರೆ, ತುಮಕೂರು ಮತ್ತಿತರ ಕಡೆಯಿಂದ ಬಂದ ಕಾರ್ಮಿಕರನ್ನು ಕೆಲವು ತಿಂಗಳಿನಿಂದ ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಟಿಬೆಟಿಯನ್ ಪ್ರಜೆಯಿಂದ 25 ಎಕರೆ ಭೂಮಿ ಗುತ್ತಿಗೆಗೆ ಪಡೆದಿದ್ದ ಸ್ಥಳೀಯ ವ್ಯಕ್ತಿಯೊಬ್ಬ ಇಲ್ಲಿ ಶುಂಠಿ ಬೆಳೆದಿದ್ದ. ಉತ್ತಮ ಸಂಬಳದ ಆಮಿಷವೊಡ್ಡಿ ಕರೆ ತಂದ ಕಾರ್ಮಿಕರನ್ನು ವೇತನ ನೀಡದೆ ಹಗಲು ರಾತ್ರಿ ಕೆಲಸ ಮಾಡಿಸಲಾಗುತ್ತಿತ್ತು. ಇವರೆಲ್ಲನ್ನೂ ಶೆಡ್ ಒಂದರಲ್ಲಿ ಕೂಡಿ ಹಾಕಲಾಗಿತ್ತು. ಊಟ ಬಿಟ್ಟರೆ ಮತ್ತೇನೂ ನೀಡುತ್ತಿರಲಿಲ್ಲ. ಕಾವಲು ಕಾಯುತ್ತಿದ್ದ ನಾಲ್ಕೈದು ಮಂದಿ ಪ್ರಶ್ನಿಸಿದವರನ್ನು ಯದ್ವಾತದ್ವಾ ಥಳಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಲ್ಲಿಂದ ತಪ್ಪಿಸಿಕೊಂಡ ಹೋದ ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಪಿರಿಯಾಪಟ್ಟಣ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ದಾಳಿ ನಡೆಸಿದ್ದು ಎಲ್ಲರನ್ನೂ ಬಿಡುಗಡೆ ಮಾಡಿ ಹೇಳಿಕೆ ಪಡೆದಿದ್ದಾರೆ.

ಪ್ರಕರಣದಲ್ಲಿ ಒಟ್ಟು 14 ಆರೋಪಿಗಳಿದ್ದು, ಪ್ರಮುಖ ಆರೋಪಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಶಂಕರ್ ಮತ್ತು ನಿರಂಜನ್ ಹೆಸರಿನ ಇನ್ನಿಬ್ಬರು ಆರೋಪಿಗಳಿಗೆ ಶೋಧ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ