ಆ್ಯಪ್ನಗರ

ಮೈಸೂರು: ಜಿಮ್‌ನಲ್ಲೂ ಸಾಮಾಜಿಕ ಅಂತರ

ಲಾಕ್‌ಡೌನ್‌ ಸಡಿಲಿಕೆ ಬಳಿಕ ವಾಯು ವಿಹಾರ ಮತ್ತು ದೈಹಿಕ ಕಸರತ್ತಿಗೆ ಸರಕಾರ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ವ್ಯಾಯಮ ಶಾಲೆಗಳು ಸಹ ಕಾರ್ಯೋನ್ಮುಖವಾಗಲು ಸಿದ್ಧತೆ ನಡೆಸಿವೆ.

Vijaya Karnataka Web 12 Jun 2020, 2:06 pm
ಹರೀಶ ಎಲ್‌. ತಲಕಾಡು
Vijaya Karnataka Web gym


ಮೈಸೂರು: ಲಾಕ್‌ಡೌನ್‌ ಸಡಿಲಿಕೆ ಬಳಿಕ ಉದ್ಯಾನಗಳು ಮತ್ತು ಕ್ರೀಡಾ ಸಂಕೀರ್ಣಗಳಲ್ಲಿ ಸಾರ್ವಜನಿಕರಿಗೆ ವಾಯು ವಿಹಾರ ಮತ್ತು ದೈಹಿಕ ಕಸರತ್ತಿಗೆ ಸರಕಾರ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ವ್ಯಾಯಮ ಶಾಲೆಗಳು ಸಹ ಕಾರ್ಯೋನ್ಮುಖವಾಗಲು ಸಿದ್ಧತೆ ನಡೆಸಿವೆ.

ಹೊಟೇಲ್‌, ಮಾಲ್‌ಗಳು ತೆರೆದಂತೆ ವ್ಯಾಯಾಮ ಶಾಲೆಗಳ ಪ್ರಾರಂಭಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಯಾಮಕ್ಕೆ ಅವಕಾಶ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಮೈಸೂರಿನ ವಿಜಯನಗರರದ ಮುಡಾ ಸಂಕೀರ್ಣದಲ್ಲಿರುವ ಟೆನ್ಸೈಲ್‌ ಅರೇನಾದ ಮಾಲೀಕರಾದ ವಿಜಯ್‌ ರಾಮೇಗೌಡ.

ಕೊರೊನಾ ವೈರಸ್‌ ಹರಡುವ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲಾ ವ್ಯಾಯಾಮಗಳನ್ನು ಬಂದ್‌ ಮಾಡಿದ್ದವು. ಅದರಂತೆ ಮೈಸೂರು ನಗರದ ವ್ಯಾಪ್ತಿಯಲ್ಲಿದ್ದ 150ಕ್ಕೂ ಹೆಚ್ಚು ಜಿಮ್‌ಗಳು ಬಂದ್‌ ಆದವು. ಸಾಲ ಸೋಲ ಮಾಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಕಸರತ್ತಿನ ಹೈಟೆಕ್‌ ಸಾಧನ-ಸಲಕರಣಿಗಳನ್ನು ಖರೀದಿ ಮಾಡಿ ಜಿಮ್‌ ತೆರೆದಿದ್ದ ಮಾಲೀಕರು, ಆಕರ್ಷಕ ಸೌಲಭ್ಯಗಳನ್ನು ನೀಡುವ ಮೂಲಕ ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದವು. ಮಹಿಳೆಯರಿಗಾಗಿ ಕೂಡ ಪ್ರತ್ಯೇಕವಾಗಿ ವ್ಯಾಯಾಮ ಮಾಡಲು ಸಹ ಸಮಯ ನಿಗದಿ ಮಾಡಿದ್ದವು.



ಮೈಸೂರು: ಮುಚ್ಚಿರುವ ಕಾರ್ಖಾನೆ ತೆರೆಯಲು ಒತ್ತಾಯ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ವ್ಯಾಯಮ ಶಾಲೆಗಳು ಬಂದ್‌ ಆಗಿದ್ದರಿಂದ ಸಾಲ ಸೋಲ ಮಾಡಿ ಜಿಮ್‌ ತೆರೆದಿದ್ದ ಜಿಮ್‌ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೇ ಜಿಮ್‌ನಲ್ಲಿ ತರಬೇತಿ ನೀಡುವ ಟ್ರೈನರ್‌ಗಳಾಗಿ 300ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿಸಾಕಷ್ಟು ಮಂದಿ ಪೂರ್ಣಾವಧಿಯಲ್ಲಿ ತರಬೇತಿ ನೀಡುವ ಕಾಯಕದಲ್ಲಿಇದ್ದಾರೆ. ಈಗ ಕಳೆದ ಎರಡು ತಿಂಗಳಿಂದ ವ್ಯಾಯಮ ಶಾಲೆಗಳು, ಲಾಕೌಟ್‌ ಆಗಿದ್ದು, ಲಾಕ್‌ಡೌನ್‌ ಸಡಿಲಿಕೆ ನಮಗೂ ಕೂಡ ವರದಾನವಾಗಲಿದೆ ಎಂಬ ನಿರೀಕ್ಷೆಯಲ್ಲಿರುವ ಜಿಮ್‌ಗಳ ಮಾಲೀಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ವ್ಯಾಯಾಮ ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ