ಆ್ಯಪ್ನಗರ

ಮೈಸೂರು ವಿಭಾಗದ ಕೆಲ ರೈಲು ಸೇವೆ ವ್ಯತ್ಯಯ

ಮಕೂರು-ಅರಸೀಕೆರೆ ನಡುವಿನ ಮಲ್ಲಸಂದ್ರ-ಗುಬ್ಬಿ-ಅರಸೀಕೆರೆ ನಿಲ್ದಾಣಗಳಲ್ಲಿ ಜೋಡಿ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ನೈಋುತ್ಯ ರೈಲ್ವೆ ಮೈಸೂರು ವಿಭಾಗದ ಕೆಲ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

Vijaya Karnataka 18 May 2019, 5:00 am
ಮೈಸೂರು : ಮಕೂರು-ಅರಸೀಕೆರೆ ನಡುವಿನ ಮಲ್ಲಸಂದ್ರ-ಗುಬ್ಬಿ-ಅರಸೀಕೆರೆ ನಿಲ್ದಾಣಗಳಲ್ಲಿ ಜೋಡಿ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ನೈಋುತ್ಯ ರೈಲ್ವೆ ಮೈಸೂರು ವಿಭಾಗದ ಕೆಲ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
Vijaya Karnataka Web some train service variants of mysore division
ಮೈಸೂರು ವಿಭಾಗದ ಕೆಲ ರೈಲು ಸೇವೆ ವ್ಯತ್ಯಯ


ಕೆಲ ರೈಲುಗಳ ಸೇವೆ ಸಂಪೂರ್ಣ ರದ್ದಾಗಿದ್ದರೆ, ಕೆಲವು ಭಾಗಶಃ ಹಾಗೂ ಮತ್ತೆ ಕೆಲವು ಬದಲಿ ಮಾರ್ಗದಲ್ಲಿ ಸಂಚರಿಸಲಿವೆ.

ರದ್ದಾದ ರೈಲುಗಾಡಿಗಳು:

* ಮೇ 22ರಂದು ಪ್ರಯಾಣ ಆರಂಭಿಸುವ ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್‌, 23ರಂದು ಪ್ರಯಾಣ ಆರಂಭಿಸಬೇಕಿರುವ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್‌ ರೈಲು ಸೇವೆ ರದ್ದಾಗಿದೆ.

* ಮೇ 23, 24, 29ರಂದು ಪ್ರಯಾಣ ಆರಂಭಿಸಬೇಕಿರುವ ಹರಿಹರ-ಯಶವಂತಪುರ ಎಕ್ಸ್‌ಪ್ರೆಸ್‌ ಹಾಗೂ 22, 23, 28ರಂದು ಹೊರಡುವ ಯಶವಂತಪುರ-ಹರಿಹರ ಎಕ್ಸ್‌ಪ್ರೆಸ್‌ ರೈಲುಸೇವೆ ರದ್ದಾಗಿದೆ.

* ಮೇ 22ರಂದು ಸೇವೆ ಆರಂಭಿಸುವ ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ ಹಾಗೂ 23ರಂದು ಹೊರಡುವ ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್‌ ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದಾಗಿದೆ.

* ಮೇ 25ರಂದು ಹೊರಡುವ ಯಶವಂತಪುರ-ಶಿವಮೊಗ್ಗ ಹಾಗೂ ಮೇ 25,26,27 ರಂದು ಹೊರಡುವ ಶಿವಮೊಗ್ಗ ಯಶವಂತಪುರ ರೈಲು ಸೇವೆ ರದ್ದಾಗಿದೆ.

* ಮೇ 23ರಂದು ಹೊರಡುವ ಕೆಎಸ್‌ಆರ್‌ ಬೆಂಗಳೂರು/ಚಿಕ್ಕಜಾಜೂರು-ಚಿತ್ರದುರ್ಗ ಪ್ಯಾಸೆಂಜರ್‌ ಹಾಗೂ ಮೇ 23ರಂದು ಹೊರಡುವ ಚಿತ್ರದುರ್ಗ-ಹರಿಹರ ಪ್ಯಾಸೆಂಜರ್‌ ರೈಲು ಸೇವೆ ರದ್ದಾಗಿದೆ.

ಭಾಗಶಃ ರದ್ದು:

* ಮೇ 23ರಂದು ಹೊರಡಬೇಕಿದ್ದ ಚಿಕ್ಕಮಗಳೂರು-ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್‌ ರೈಲುಗಾಡಿಯ ಅರಸೀಕೆರೆ-ಯಶವಂತಪುರ ಪ್ರಯಾಣ ರದ್ದಾಗಿದೆ. ಹಾಗೆಯೇ 23ರಂದು ಹೊರಡುವ ಬೆಂಗಳೂರು-ಚಿಕ್ಕಮಗಳೂರು ಪ್ಯಾಸೆಂಜರ್‌ ರೈಲು ಗಾಡಿಯ ಯಶವಂತಪುರ-ಅರಸೀಕೆರೆ ನಡುವಿನ ಪ್ರಯಾಣ ರದ್ದಾಗಿದೆ.

ಪ್ರಯಾಣದಲ್ಲಿ ವಿಳಂಬ:

ಮೇ 22ರಂದು ಹೊರಡುವ ಹುಬ್ಬಳ್ಳಿ-ಅಶೋಕಪುರಂ ಎಕ್ಸ್‌ಪ್ರೆಸ್‌ ರೈಲುಗಾಡಿ ಪ್ರಯಾಣ 55 ನಿಮಿಷ ವಿಳಂಬವಾಗಲಿದೆ ಹಾಗೂ ಮೇ 22ರಂದು ಹೊರಡುವ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್‌ ರೈಲುಗಾಡಿಯ ಪ್ರಯಾಣವು 60 ನಿಮಿಷ ವಿಳಂಬವಾಗಲಿದೆ.

ವೇಳಾಪಟ್ಟಿ ಬದಲಾವಣೆ:

ಮೇ 22ರಂದು ಹೊರಡುವ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್‌ 60 ನಿಮಿಷ, ಮೇ 21, 29ರಂದು ಹೊರಡುವ-ಹುಬ್ಬಳ್ಳಿ-ಕೂಚುವೆಲಿ ರೈಲು ಗಾಡಿ 120 ನಿಮಿಷ ಹಾಗೂ ಮೇ 26ರಂದು ಹೊರಡುವ ಯಶವಂತಪುರ-ಟಾಟಾ ನಗರ್‌ ಎಕ್ಸ್‌ಪ್ರೆಸ್‌ ರೈಲು 90 ನಿಮಿಷ ತಡವಾಗಿ ಹೊರಡಲಿದೆ.

ಬದಲಿ ಮಾರ್ಗ:

* ಮೇ 23ರಂದು ಹೊರಡುವ ಹುಬ್ಬಳ್ಳಿ-ಅಶೋಕಪುರಂ ಎಕ್ಸ್‌ಪ್ರೆಸ್‌ ಯಶವಂತಪುರ ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ.

* ಮೇ 23ರಂದು ಹೊರಡುವ ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್‌ ರೈಲುಗಾಡಿಯು ಯಶವಂತಪುರ, ನೆಲಮಂಗಲ, ಹಾಸನ ಮಾರ್ಗವಾಗಿ ಸಂಚರಿಸಲಿದೆ.

* ಮೇ 28ರಂದು ಹೊರಡುವ ಧಾರವಾಡ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ಹಾಗೂ ಮೇ 27ರಂದು ಉದಯಪುರ-ಮೈಸೂರು ಎಕ್ಸ್‌ಪ್ರೆಸ್‌ ರೈಲುಗಾಡಿಯು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ