ಆ್ಯಪ್ನಗರ

ಶ್ರೀಕಂಠೇಶ್ವರಸ್ವಾಮಿ ವರ್ಧಂತಿ ಮಹೋತ್ಸವ ವಿಜೃಂಭಣೆ

ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ್ರಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿಶ್ರೀಕಂಠೇಶ್ವರಸ್ವಾಮಿ ವರ್ಧಂತಿ ಮಹೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ಜರುಗಿತು. ಆಕರ್ಷಣೆಯ ದೀಪಾಲಂಕೃತ ರಥೋತ್ಸವ ರಥಬೀದಿಯಲ್ಲಿವಿಜೃಂಭಣೆಯಿಂದ ಸಾಗಿತು.

Vijaya Karnataka 5 Oct 2019, 5:00 am
ನಂಜನಗೂಡು: ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ್ರಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿಶ್ರೀಕಂಠೇಶ್ವರಸ್ವಾಮಿ ವರ್ಧಂತಿ ಮಹೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ಜರುಗಿತು. ಆಕರ್ಷಣೆಯ ದೀಪಾಲಂಕೃತ ರಥೋತ್ಸವ ರಥಬೀದಿಯಲ್ಲಿವಿಜೃಂಭಣೆಯಿಂದ ಸಾಗಿತು.
Vijaya Karnataka Web MYS4NGD1_45


ವರ್ಧಂತಿ ಅಂಗವಾಗಿ ದೇವಾಲಯದ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿಶ್ರೀಕಂಠೇಶ್ವರಸ್ವಾಮಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಏಕಾದಶವರ ಸೇರಿದಂತೆ ವಿವಿಧ ಪ್ರಕಾರದ ಪೂಜೆ ಪುನಸ್ಕಾರ ನೆರವೇರಿಸಿ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಂಜೆ ದೇವಸ್ಥಾನದಲ್ಲಿಉತ್ಸÊ Üಮೂರ್ತಿಗಳಾದ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ, ಗಣಪತಿ, ಸುಬ್ರಹ್ಮಣ್ಯಸ್ವಾಮಿ, ಪಾರ್ವತಮ್ಮ, ತಾಂಡವೇಶ್ವರ ಸ್ವಾಮಿ, ಚಾಮುಂಡೇಶ್ವರಿ, ಶ್ರೀದೇವಿ ಹಾಗೂ ಭೂದೇವಿ ಸಮೇತವಿರುವ ಶ್ರೀನಾರಾಯಣಸ್ವಾಮಿ, ಚಂಡಿಕೇಶ್ವರ ಹಾಗೂ ಮೈಸೂರು ರಾಜ ಮನೆತನದ ಮುಮ್ಮಡಿ ಕೃಷ್ಣರಾಜ ಒಡೆಯರ್‌ರ ಉತ್ಸÊ Üಮೂರ್ತಿಯನ್ನು ಹೊತ್ತ ರಥಗಳಿಗೆ ಪುಷ್ಪಾಲಂಕಾರದಿಂದ ಸಿಂಗರಿಸಿ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ರಥೋತ್ಸವದಲ್ಲಿಪ್ರತಿಷ್ಠಾಪಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಬಳಿಕ ಭಕ್ತರು ರಥಗಳನ್ನು ಭಕ್ತಿ, ಭಾವದಿಂದ ಎಳೆಯುವ ಮೂಲಕ ಪರಾಕಾಷ್ಠೆ ಮೆರೆದರು. ದೇವಾಲಯದಿಂದ ಆರಂಭಗೊಂಡ ರಥೋತ್ಸವ ರಥ ಬೀದಿಯಲ್ಲಿಸಂಚರಿಸಿ ವಾಪಸ್‌ ಸ ್ವಸ್ಥಾನಕ್ಕೆ ಮರಳಿತು. ಇನ್ನು ರಥ ಸಾಗುವ ಮಾರ್ಗದಲ್ಲಿರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿ ಭಕ್ತರು ಬರಮಾಡಿಕೊಂಡು ಪೂಜೆ ಸಲ್ಲಿಸಿದರು. ವರ್ಧಂತಿ ಅಂಗವಾಗಿ ಜಾನಪದ ಕಲಾವಿದ ವಿವಿಧ ಶೈಲಿಯ ನೃತ್ಯ ನರ್ತನ ನೆರೆದಿದ್ದ ಭಕ್ತರಿಗೆ ತಂಪನೆ ಇಳಿ ಹೊತ್ತಲ್ಲಿರಥೋತ್ಸವಕ್ಕೆ ಮೆರಗು ನೀಡಿದವು. ಕೀಲು ಕುದುರೆ, ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಪಟ್ಟದ ಕುಣಿತ, ವೀರಮಕ್ಕಳ ಕುಣಿತ, ಗೊರವರ ಕುಣಿತ, ಸೋಮನ ಕುಣಿತ, ನಂದಿಕಂಬ, ನಾದಸ್ವರ ಸೇರಿದಂತೆ ಹಲವಾರು ಕಲಾವಿದರು ತಮ್ಮ ಕೌಶಲ್ಯ ಪ್ರದರ್ಶಿಸಿದರು. ವರ್ಧಂತಿಗೆ ಆಗಮಿಸುವ ಭಕ್ತರಿಗೆ ದಾಸೋಹ ಭವನದಲ್ಲಿಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ರಥೋತ್ಸವದಲ್ಲಿದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವನಂಜಯ್ಯ, ಸದಸ್ಯರಾದ ಎನ್‌.ಟಿ.ಗಿರೀಶ್‌, ಆರ್‌.ಇಂದನ್‌ ಬಾಬು, ಮಂಜುಳಾ ಮಧು, ಶ್ರೀಧರ್‌, ಪುಟ್ಟನಿಂಗಶೆಟ್ಟಿ, ಮಾದೇಶ್‌, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ