ಎಚ್. ಕೆ. ನಾಗೇಶ್, ಮೈಸೂರು
ಮೈಸೂರಿನ ಶ್ರೀರಾಂಪುರ 2 ನೇ ಹಂತದಲ್ಲಿರುವ (ಕಂದಾಯ ನಗರ) ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ವಿಶ್ವ ಮಧ್ವ ಮಹಾಪರಿಷತ್, ಉತ್ತರಾದಿ ಮಠದವರು ನಿರ್ಮಿಸಿರುವ ಈ ಧ್ಯಾನ ಕೇಂದ್ರದಲ್ಲಿ 7.5 ಅಡಿ ಎತ್ತರದ ಏಕಶಿಲಾ ಮೂರ್ತಿ ಶ್ರೀ ಶ್ರೀನಿವಾಸ ದೇವರನ್ನು 29.4.2018 ರಂದು ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀಮತ್ ಉತ್ತರಾಧಿ ಮಠಾಧೀಶರಾದ ಶ್ರೀ 1008 ಸತ್ಯಾತ್ಮ ತೀರ್ಥರ ಅಮೃತಹಸ್ತದಿಂದ ಪ್ರತಿಷ್ಠಾನೆಗೊಂಡು, ಧ್ಯಾನ ಕೇಂದ್ರ ಉದ್ಘಾಟನೆಗೊಂಡಿತು. ಈ ದಿವ್ಯ ಸನ್ನಿಧಿಯಲ್ಲಿ ಹನುಮಂತ ಹಾಗೂ ತಪಸ್ವೀವರೀಣ್ಯರಾದ 4 ಯತಿಪುಂಗವರ ಬೃಂದಾವನವೂ ಪ್ರತಿಷ್ಠಾಪನೆಗೊಂಡಿದೆ. ಶ್ರೀನಿವಾಸ ದೇವರ ಪೀಠದಲ್ಲಿ ಧನ್ವಂತರಿ, ವೇದವ್ಯಾಸ, ಶ್ರೀಕರ ನಾರಾಯಣ ಸೇರಿದಂತೆ 38 ಬಗೆಯ ಯಂತ್ರಗಳನ್ನೂ ಅಳವಡಿಸಲಾಗಿದೆ.
ಎಚ್. ಡಿ. ಕೋಟೆ ಬಳಿಯ ಬೆಟ್ಟದಿಂದ ತಂದ ಶಿಲೆಯಲ್ಲಿ ಮೈಸೂರು ಅರಮನೆಯ ಆಸ್ಥಾನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಈ ಸುಂದರ ಮೂರ್ತಿಯನ್ನು ಕೆತ್ತಿದ್ದಾರೆ. 2 ತಿಂಗಳ ಶಾಸ್ತ್ರೋಕ್ತ ಪೂರ್ವಭಾವಿ ಅಧಿವಾಸ ಸಂಸ್ಕಾರಗಳು ಪೂರ್ಣಗೊಂಡ ನಂತರ ವಿಗ್ರಹ ಪ್ರತಿಷ್ಠಾನೆ ಮಾಡಲಾಗಿದೆ ಎನ್ನುತ್ತಾರೆ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಂ. ಬಾದರಾಯಣಾಚಾರ್ಯ ಅವರು.
ಪ್ರತಿ ದಿನ ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವೇದಾಧ್ಯಯನದ ಅಭ್ಯಾಸ, ಪ್ರವಚನವೂ ಈ ಧ್ಯಾನ ಕೇಂದ್ರದಲ್ಲಿ ಜರುಗುತ್ತಿದೆ. ಪ್ರಧಾನ ಅರ್ಚಕರಾದ ನಚೀಕೇತಾರ್ಚಾರ ನೇತೃತ್ವದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಪ್ರತಿ ಹುಣ್ಣಿಮೆಯಲ್ಲಿ ಸಾಮೂಹಿಕ ಕಲ್ಯಾಣೋತ್ಸವ, ಶುಕ್ರವಾರ ಕ್ಷೀರಾಭಿಷೇಕ, ಗುರುವಾರ ಪಂಚಾಮೃತಾಭಿಷೇಕ, ಸತ್ಯನಾರಾಯಣ ಪೂಜೆ ನಡೆಯುತ್ತದೆ.
ಪ್ರತಿ ದಿನ ಸಂಜೆ ಸ್ಥಳೀಯ ಮಾತೆಯರು , ಸಂಘ ಸಂಸ್ಥೆಗಳವರು ಭಜನೆ, ಲಲಿತಾ ಸಹಸ್ರನಾಮವನ್ನೂ ಪಠಿಸುತ್ತಿದ್ದಾರೆ.
ದೇಗುಲ ನಿರ್ಮಾಣ ಮತ್ತು ವಿಗ್ರಹ ಪ್ರತಿಷ್ಠಾನೆಗೆ ಸ್ಥಳೀಯರು ಸಹಾಯ ಹಸ್ತ ನೀಡಿದ್ದರೆ, ಎ. ಎಸ್. ಮೂರ್ತಿ, ಗೋಪಾಲಚಾರ್, ವಿಜಯೀಂದ್ರ ನಾಯಕ್, ಎಸ್. ಎಸ್. ರವಿ, ಗಿರಿಧರ್, ಸಿ. ವಿ. ಶ್ರೀನಿವಾಸರಾವ್ ಸೇರಿದಂತೆ ಅನೇಕರು ದೇಗುಲದ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 7 ರಿಂದ 11.30, ಸಂಜೆ 5 ರಿಂದ 8 ರವರೆಗೆ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಮೈಸೂರಿನ ಶ್ರೀರಾಂಪುರ 2 ನೇ ಹಂತದಲ್ಲಿರುವ (ಕಂದಾಯ ನಗರ) ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ವಿಶ್ವ ಮಧ್ವ ಮಹಾಪರಿಷತ್, ಉತ್ತರಾದಿ ಮಠದವರು ನಿರ್ಮಿಸಿರುವ ಈ ಧ್ಯಾನ ಕೇಂದ್ರದಲ್ಲಿ 7.5 ಅಡಿ ಎತ್ತರದ ಏಕಶಿಲಾ ಮೂರ್ತಿ ಶ್ರೀ ಶ್ರೀನಿವಾಸ ದೇವರನ್ನು 29.4.2018 ರಂದು ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀಮತ್ ಉತ್ತರಾಧಿ ಮಠಾಧೀಶರಾದ ಶ್ರೀ 1008 ಸತ್ಯಾತ್ಮ ತೀರ್ಥರ ಅಮೃತಹಸ್ತದಿಂದ ಪ್ರತಿಷ್ಠಾನೆಗೊಂಡು, ಧ್ಯಾನ ಕೇಂದ್ರ ಉದ್ಘಾಟನೆಗೊಂಡಿತು. ಈ ದಿವ್ಯ ಸನ್ನಿಧಿಯಲ್ಲಿ ಹನುಮಂತ ಹಾಗೂ ತಪಸ್ವೀವರೀಣ್ಯರಾದ 4 ಯತಿಪುಂಗವರ ಬೃಂದಾವನವೂ ಪ್ರತಿಷ್ಠಾಪನೆಗೊಂಡಿದೆ. ಶ್ರೀನಿವಾಸ ದೇವರ ಪೀಠದಲ್ಲಿ ಧನ್ವಂತರಿ, ವೇದವ್ಯಾಸ, ಶ್ರೀಕರ ನಾರಾಯಣ ಸೇರಿದಂತೆ 38 ಬಗೆಯ ಯಂತ್ರಗಳನ್ನೂ ಅಳವಡಿಸಲಾಗಿದೆ.
ಎಚ್. ಡಿ. ಕೋಟೆ ಬಳಿಯ ಬೆಟ್ಟದಿಂದ ತಂದ ಶಿಲೆಯಲ್ಲಿ ಮೈಸೂರು ಅರಮನೆಯ ಆಸ್ಥಾನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಈ ಸುಂದರ ಮೂರ್ತಿಯನ್ನು ಕೆತ್ತಿದ್ದಾರೆ. 2 ತಿಂಗಳ ಶಾಸ್ತ್ರೋಕ್ತ ಪೂರ್ವಭಾವಿ ಅಧಿವಾಸ ಸಂಸ್ಕಾರಗಳು ಪೂರ್ಣಗೊಂಡ ನಂತರ ವಿಗ್ರಹ ಪ್ರತಿಷ್ಠಾನೆ ಮಾಡಲಾಗಿದೆ ಎನ್ನುತ್ತಾರೆ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಂ. ಬಾದರಾಯಣಾಚಾರ್ಯ ಅವರು.
ಪ್ರತಿ ದಿನ ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವೇದಾಧ್ಯಯನದ ಅಭ್ಯಾಸ, ಪ್ರವಚನವೂ ಈ ಧ್ಯಾನ ಕೇಂದ್ರದಲ್ಲಿ ಜರುಗುತ್ತಿದೆ. ಪ್ರಧಾನ ಅರ್ಚಕರಾದ ನಚೀಕೇತಾರ್ಚಾರ ನೇತೃತ್ವದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಪ್ರತಿ ಹುಣ್ಣಿಮೆಯಲ್ಲಿ ಸಾಮೂಹಿಕ ಕಲ್ಯಾಣೋತ್ಸವ, ಶುಕ್ರವಾರ ಕ್ಷೀರಾಭಿಷೇಕ, ಗುರುವಾರ ಪಂಚಾಮೃತಾಭಿಷೇಕ, ಸತ್ಯನಾರಾಯಣ ಪೂಜೆ ನಡೆಯುತ್ತದೆ.
ಪ್ರತಿ ದಿನ ಸಂಜೆ ಸ್ಥಳೀಯ ಮಾತೆಯರು , ಸಂಘ ಸಂಸ್ಥೆಗಳವರು ಭಜನೆ, ಲಲಿತಾ ಸಹಸ್ರನಾಮವನ್ನೂ ಪಠಿಸುತ್ತಿದ್ದಾರೆ.
ದೇಗುಲ ನಿರ್ಮಾಣ ಮತ್ತು ವಿಗ್ರಹ ಪ್ರತಿಷ್ಠಾನೆಗೆ ಸ್ಥಳೀಯರು ಸಹಾಯ ಹಸ್ತ ನೀಡಿದ್ದರೆ, ಎ. ಎಸ್. ಮೂರ್ತಿ, ಗೋಪಾಲಚಾರ್, ವಿಜಯೀಂದ್ರ ನಾಯಕ್, ಎಸ್. ಎಸ್. ರವಿ, ಗಿರಿಧರ್, ಸಿ. ವಿ. ಶ್ರೀನಿವಾಸರಾವ್ ಸೇರಿದಂತೆ ಅನೇಕರು ದೇಗುಲದ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 7 ರಿಂದ 11.30, ಸಂಜೆ 5 ರಿಂದ 8 ರವರೆಗೆ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ.