ಆ್ಯಪ್ನಗರ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶ್ರವಣ ದೋಷ ಮೆಟ್ಟಿ ನಿಂತ ಮೈಸೂರಿನ ಶ್ರೇಯಾಗೆ 480 ಅಂಕ

ವಿಶೇಷ ಚೇತನ ಮಕ್ಕಳೂ ಕೂಡಾ ಎಲ್ಲರಂತೆಯೇ ಬುದ್ದಿವಂತಿಕೆಯಿಂದ ಮುನ್ನುಗ್ಗಬಲ್ಲರು, ಸಾಮಾನ್ಯ ವಿದ್ಯಾರ್ಥಿಗಳಿಗೂ ಸಡ್ಡು ಹೊಡೆಯಬಲ್ಲರು ಅನ್ನೋದಕ್ಕೆ ಇಲ್ಲೊಂದು ಅತ್ಯುತ್ತಮ ಉದಾಹರಣೆ ಇದೆ. ಮೈಸೂರಿನ ಈ ಬಾಲಕಿ ನಾಡಿಗೇ ಮಾದರಿಯಾಗಿದ್ದಾಳೆ.

Vijaya Karnataka Web 12 Aug 2020, 3:17 pm

ಹೈಲೈಟ್ಸ್‌:

  • ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 75 ಅಂಕ ಪಡೆದಿರುವ ಶ್ರೇಯಾ
  • ವಿಶೇ‍ಷ ಚೇತನ ವಿದ್ಯಾರ್ಥಿನಿಯಾದ್ರೂ ಅತ್ಯುತ್ತಮ ಸಾಧನೆ
  • ಶ್ರೇಯಾಗೆ 2 ವರ್ಷ ಇರುವಾಗ ಶ್ರವಣ ದೋಷ ಇರೋದು ತಿಳಿದುಬಂದಿತ್ತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ನಾಗರಾಜ್‌ ನವೀಮನೆ
ಮೈಸೂರು:
ಶ್ರವಣ ದೋಷವನ್ನು ಮೆಟ್ಟಿ ನಿಂತ ರೋಟರಿ ವೆಸ್ಟ್‌ ಶಾಲೆಯ ವಿದ್ಯಾರ್ಥಿನಿ ಶ್ರೇಯಾ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 75ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಆ ಮೂಲಕ ವಿಶೇಷ ಚೇತನ ಮಕ್ಕಳ ಯಾರಿಗೂ ಕಡಿಮೆ ಇಲ್ಲ ಎಂಬ ಸಂದೇಶ ಸಾರಿದ್ದಾಳೆ.
ಶ್ರೇಯಾ ಎರಡು ವರ್ಷ ಇದ್ದಾಗ ಶ್ರವಣ ದೋಷ ಇರುವುದು ಪೋಷಕರಿಗೆ ತಿಳಿಯಿತು. ಬಳಿಕ ಆಕೆಯನ್ನು ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ ಸೇರಿಸಲಾಯಿತು. ಈ ಸಂಸ್ಥೆಯಲ್ಲಿ ಕಿವಿ ಕೇಳದ, ಮಾತು ಬಾರದ ಮಕ್ಕಳಿಗೆ ಶಾಲಾ ಪೂರ್ವ ಘಟಕ (ಪ್ರಿ ಸ್ಕೂಲ್‌)ದಲ್ಲಿ ತರಬೇತಿ ನೀಡಲಾಗುತ್ತದೆ.

ಅಂತೆಯೇ ಶ್ರೇಯಾ ಇಲ್ಲಿ ಮೂರು ವರ್ಷ ತರಬೇತಿ ಪಡೆದಳು. ಆಕೆಗೆ ಮಾತಿನ ಹಾಗೂ ಕೇಳಿಸುವಿಕೆ ತರಬೇತಿ ನೀಡಲಾಯಿತು. ಓದುವುದು ಹಾಗೂ ಬರೆಯುವುದನ್ನು ಹೇಳಿಕೊಡಲಾಯಿತು. ಪರಿಣಾಮ ಶ್ರೇಯಾ ತನ್ನ ಆರನೇ ವಯಸ್ಸಿಗೆ ಇತರ ಮಕ್ಕಳಂತೆ ರೋಟರಿ ವೆಸ್ಟ್‌ ಶಾಲೆಗೆ ಸೇರಿದಳು. ಐಷ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ತರಬೇತಿ ಪಡೆದಿದ್ದ ಶ್ರೇಯಾಗೆ, ರೋಟರಿ ಶಾಲೆಯಲ್ಲಿ ಇಂಗ್ಲಿಷ್‌ ಮೀಡಿಯಂನಲ್ಲಿ ಕಲಿಯುವುದು ಪ್ರಾರಂಭದಲ್ಲಿ ತುಸು ಕಷ್ಟವಾಯಿತು.

ಜಾಸ್ತಿ ಓದಲಿಲ್ಲ, ಆದ್ರೆ ಗಮನವಿಟ್ಟು ಓದಿದೆ: ಮೈಸೂರಿನ ಎಸ್‌ಎಸ್‌ಎಲ್‌ಸಿ ಟಾಪರ್ ಮನು ಸಂದರ್ಶನ

ನಂತರ ಮತ್ತೆ ಸಂಸ್ಥೆಗೆ ಬಂದು ತರಬೇತಿ ಪಡೆದಳು. ತರ್ಜುಮೆ, ಅನುವಾದದ ಬಗ್ಗೆ ತಿಳಿದುಕೊಂಡಳು. ಸಂಸ್ಥೆಯ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿ ಮಾರ್ಗದರ್ಶನ ಮಾಡಿದರು. ಪೋಷಕರು ಹೆಚ್ಚಿನ ಕಾಳಜಿ ವಹಿಸಿದರು. ಈ ಎಲ್ಲಾ ಪ್ರಯತ್ನದ ಫಲವಾಗಿ ಇದೀಗ ಶ್ರೇಯಾ ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ 480 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಪಾಠ ಕೇಳಲು ಕಿವಿ ತುಂಬಾ ಮುಖ್ಯ. ಆದರೆ, ಶ್ರೇಯಾ ಈ ವೈಕಲ್ಯವನ್ನು ಮೆಟ್ಟಿ ನಿಂತು ವಿಶೇಷ ಮಕ್ಕಳಲ್ಲಿ ಹೊಸ ಭರವಸೆ ಮೂಡಿಸಿದ್ದಾಳೆ.

'ಮಗಳು ಎರಡು ವರ್ಷ ಇದ್ದಾಗ ಆಕೆಗೆ ಶ್ರವಣ ದೋಷ ಇರುವುದು ಗೊತ್ತಾಯಿತು. ಐಷ್‌ನಲ್ಲಿ ತರಬೇತಿ ಕೊಡಿಸಲಾಯಿತು. ನಂತರ ಆಕೆಯನ್ನು ರೋಟರಿ ವೆಸ್ಟ್‌ ಶಾಲೆಗೆ ಸೇರಿಸಿದೆ. ಇದೀಗ ಮಗಳು ಎಲ್ಲರಂತೆ ಕಲಿಯುತ್ತಾಳೆ. ಇತರರೊಂದಿಗೆ ಬೆರೆಯುತ್ತಾಳೆ. ಎಸ್ಸೆಸ್ಸೆಲ್ಸಿಯಲ್ಲಿ 480 ಅಂಕ ಪಡೆದಿದ್ದಾಳೆ. ಆ್ಯಂಕರಿಂಗ್‌ ಮಾಡುತ್ತಾಳೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಒಳ್ಳೆಯ ಹುದ್ದೆಗೆ ಹೋಗುವ ಕನಸು ಇಟ್ಟುಕೊಂಡಿದ್ದಾಳೆ' ಎಂದು ತಾಯಿ ರೂಪ ಸಂತಸ ವ್ಯಕ್ತಪಡಿಸಿದರು.

14 ಜಿಲ್ಲೆಗಳಲ್ಲಿ ವಸತಿ ಶಾಲೆ ವಿದ್ಯಾರ್ಥಿಗಳು ಪ್ರಥಮ, ಅನುತ್ತೀರ್ಣರಿಗೆ ಸೆಪ್ಟೆಂಬರ್‌ನಲ್ಲಿ ಪೂರಕ ಪರೀಕ್ಷೆ

ನಮ್ಮ ಸಂಸ್ಥೆಯಿಂದ ತರಬೇತಿ ಪಡೆದ ಸಾಕಷ್ಟು ಮಕ್ಕಳು ಇಂದು ಎಲ್ಲರಂತೆ ಸಹಜವಾದ ಶಾಲೆಗೆ ಹೋಗುತ್ತಿದ್ದಾರೆ. ಕಳೆದ ವರ್ಷ ಸಿಬಿಎಸ್‌ಸಿಯಲ್ಲಿ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿ ಶೇ. 85ರಷ್ಟು ಫಲಿತಾಂಶ ಪಡೆದಿದ್ದಳು. ಈ ವರ್ಷ ಶ್ರೇಯಾ ಆ ಸಾಧನೆ ಮಾಡಿದ್ದಾಳೆ. ಇದು ನಿಜಕ್ಕೂ ಹೆಮ್ಮೆ ತರುವ ವಿಷಯ ಎನ್ನುತ್ತಾರೆ, ಐಷ್‌ ನಿರ್ದೇಶಕಿ ಎಂ. ಪುಷ್ಪಾವತಿ.

ಎರಡು ವರ್ಷ ಇದ್ದಾಗ ಶ್ರೇಯಾ ನಮ್ಮ ಸಂಸ್ಥೆಗೆ ಬಂದಳು. ಮಾತಿನ ಹಾಗೂ ಕೇಳಿಸುವಿಕೆ ಸಮಸ್ಯೆ ಇತ್ತು. ಥೆರಪಿ ಹಾಗೂ ತರಬೇತಿ ಬಳಿಕ ಎಲ್ಲರಂತೆ ಶಾಲೆಗೆ ಸೇರಿದಳು. ಇಂಗ್ಲಿಷ್‌ ಮಾಧ್ಯಮದಿಂದ ಪ್ರಾರಂಭದಲ್ಲಿ ಸಮಸ್ಯೆ ಆಯಿತು. ಪುನಃ ಆಕೆಗೆ ತರಬೇತಿ ನೀಡಲಾಯಿತು. ಇದೀಗ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ಪಡೆದಿರುವುದನ್ನು ಕೇಳಿ ಖುಷಿ ಆಯಿತು ಎನ್ನುತ್ತಾರೆ, ಐಷ್‌ ಸಂಸ್ಥೆಯ ಸ್ಪೆಷಲ್‌ ಎಜುಕೇಟರ್‌ ರಮಣ ಕುಮಾರಿ.

ಕರ್ನಾಟಕ SSLC ಫಲಿತಾಂಶ ಜಿಲ್ಲಾವಾರು ಪಟ್ಟಿ ಇಲ್ಲಿದೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ