ಆ್ಯಪ್ನಗರ

'ಸಿದ್ದರಾಮೋತ್ಸವ': ಸಿದ್ದರಾಮಯ್ಯ ಅವರ ಕೊನೆ ಅವತಾರ ಎಂದ ಎಸ್‌ಟಿ ಸೋಮಶೇಖರ್‌

ಜುಲೈ 10ರ ಬಳಿಕ ದಸರಾ ಹೈಪವರ್ ಕಮಿಟಿ ಮೀಟಿಂಗ್ ನಡೆಯಲಿದೆ. ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ​​ಆ ಬಳಿಕ ಮೈಸೂರಿನಲ್ಲಿ ಸಭೆ ನಡೆಸಲಾಗುವುದು

Lipi 5 Jul 2022, 6:42 pm
ಮೈಸೂರು: ಸಿದ್ದರಾಮೋತ್ಸವ ಕಾರ್ಯಕ್ರಮ ಕರುನಾಡ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಹಲವಾರು ಮಂದಿ ಅವರದ್ದೇ ಆದ ಶೈಲಿಯಲ್ಲಿ ಈ ಬಗ್ಗೆ ವ್ಯಾಖ್ಯಾನ ನೀಡುತ್ತಿದ್ದಾರೆ.
Vijaya Karnataka Web st somashekar slams siddaramaiah over birthday programme at davanagere
'ಸಿದ್ದರಾಮೋತ್ಸವ': ಸಿದ್ದರಾಮಯ್ಯ ಅವರ ಕೊನೆ ಅವತಾರ ಎಂದ ಎಸ್‌ಟಿ ಸೋಮಶೇಖರ್‌


ಈ ನಡುವೆ ಸಚಿವ ಎಸ್. ಟಿ. ಸೋಮಶೇಖರ್ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮೈಸೂರಲ್ಲಿ ಮಾತಾಡಿದ ಎಸ್.ಟಿ ಸೋಮಶೇಖರ್, ಇವರು ಸಿಎಂ ಆಗಿ ಸರಿಯಾಗಿ ಕೆಲಸ ಮಾಡಿದ್ದರೇ 35 ಸಾವಿರ ಮತಗಳಿಂದ ಹೀನಾಯವಾಗಿ ಸೋಲುತ್ತಿರಲಿಲ್ಲ. ಇಂತಹ ವೈಪಲ್ಯಗಳನ್ನು ಮರೆಮಾಚಿಕೊಳ್ಳಲು ಸಿದ್ದರಾಮೋತ್ಸವ ಆಚರಿಸುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ವೈಭವೀಕರಣ ಅಷ್ಟೇ. ಹುಟ್ಟುಹಬ್ಬವನ್ನು ಕಾಂಗ್ರೆಸ್ ಹೆಸರಿನಲ್ಲೇ ಮಾಡಬಹುದಿತ್ತು. ಆದರೆ ಒಬ್ಬ ವ್ಯಕ್ತಿ ಪರವಾಗಿ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

Brand Mysuru: ಮೈಸೂರು ಬ್ರ್ಯಾಂಡ್‌ ಪ್ರಚುರಪಡಿಸಿದರೆ ಉದ್ಯೋಗಾವಕಾಶ: ಯದುವೀರ್‌ ಒಡೆಯರ್‌

ಜುಲೈ 10ಕ್ಕೆ ದಸರಾ ಹೈಪವರ್ ಕಮಿಟಿ ಮೀಟಿಂಗ್..!

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಜುಲೈ 10 ರ ಬಳಿಕ ದಸರಾ ಹೈಪವರ್ ಕಮಿಟಿ ಮೀಟಿಂಗ್ ನಡೆಯಲಿದೆ. ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಆ ಬಳಿಕ ಮೈಸೂರಿನಲ್ಲಿ ಸಭೆ ನಡೆಸಲಾಗುವುದು ಎಂದರು.

ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ಎಸಿಬಿ ದಾಳಿಗೆ ಕಾಂಗ್ರೆಸ್ ವಿರೋಧ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಜಮೀರ್ ಮನೆ ಮೇಲೆ ಎಸಿಬಿ ದಾಳಿಗೆ ಮೊದಲು ಖುಷಿ ಪಟ್ಟಿರೋದು ಕಾಂಗ್ರೆಸ್‌ನವರೇ. ಅವರು ಸಿಎಂ ಆಗಲಿ, ಇವರು ಸಿಎಂ ಆಗಲಿ ಎಂದು ಜಮೀರ್ ಅಹ್ಮದ್ ಖಾನ್ ಹೇಳುತ್ತಿರುತ್ತಾರೆ. ಅದಕ್ಕೆ ಒಳಗೆ ಖುಷಿ ಪಟ್ಕೊಂಡು, ಹೊರಗಡೆ ಪ್ರತಿಭಟನೆ ಮಾಡ್ತಿದ್ದಾರೆ. ಜಮೀರ್ ಪ್ರಾಮಾಣಿಕವಾಗಿದ್ರೆ ಏನೂ ಆಗಲ್ಲ. ಯಾಕೆ ಕಾಂಗ್ರೆಸ್‌ನವರು ಪ್ರತಿಭಟಿಸಬೇಕು. ಕಾಂಗ್ರೆಸ್‌ನವರು ನೀವು ಪ್ರಾಮಾಣಿಕವಾಗಿದ್ದರೆ ಏನು ಆಗಲ್ಲ ಅಂತ ಧೈರ್ಯ ತುಂಬಬೇಕು. ಅದನ್ನ ಬಿಟ್ಟು ಪ್ರತಿಭಟನೆ ಏಕೆ ಮಾಡಬೇಕು.? ಎಂದು ಪ್ರಶ್ನಿಸಿದರು.

ಪೌರ ಕಾರ್ಮಿಕರ ಮುಷ್ಕರದ ಎಫೆಕ್ಟ್; ಮೈಸೂರಲ್ಲಿ ಎಲ್ಲಿ ನೋಡಿದರು ಕಸವೋ ಕಸ, ಗಬ್ಬೆದ್ದು ನಾರುತ್ತಿದೆ ಅರಮನೆ ನಗರಿ

ಪಿಎಸ್‌ಐ ಹಗರಣದಲ್ಲಿ ಐಎಎಸ್ ಅಧಿಕಾರಿ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಮುಖ್ಯಮಂತ್ರಿಗಳನ್ನ ಅಭಿನಂದಿಸುತ್ತೇನೆ. ನಿರುದ್ಯೋಗಿಗಳ ಬದುಕಲ್ಲಿ ಚೆಲ್ಲಾಟವಾಡಿದವರ ಮೇಲೆ ಸರ್ಕಾರ ಕ್ರಮ ಜರುಗಿಸಿದೆ.ಈ ಪ್ರಕರಣದಲ್ಲಿ ಎಷ್ಟೇ ದೊಡ್ಡವರಾದರೂ ಮಟ್ಟ ಹಾಕುವ ಕೆಲಸ ಸರಕಾರ ಮಾಡಲಿದೆ. ಯಾವ ಕಾರಣಕ್ಕೂ ಸರಕಾರ ಮಧ್ಯ ಪ್ರವೇಶಿಸುವುದಿಲ್ಲ. ಎಸಿಬಿ ಅಥವಾ ತನಿಖಾಧಿಕಾರಿಗೆ ಸರಕಾರ ಮುಕ್ತ ಅಧಿಕಾರ ನೀಡಿದೆ. ಕಾನೂನು ಬಾಹಿರ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಸಿಎಂ ಈ ಮುಂಚೆಯೇ ಮಾತನಾಡುತ್ತಿದ್ದರು. ಸಿಎಂ ಈ ವಿಚಾರದಲ್ಲಿ ದಿಟ್ಟ, ನೇರ ಕ್ರಮ ಕೈಗೊಂಡಿದ್ದಾರೆ. ಸಿಎಂಗೆ ಒತ್ತಡ ಇದ್ದರು ಸಹ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ