ಮೈಸೂರು: ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಪೊಲೀಸ್ ಸಿಬ್ಬಂದಿಗೆ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಹಾಗಾಗಿ ಮುಂದಿನ ದಿನದಲ್ಲಿ ವಿಶೇಷವಾಗಿ ಪೊಲೀಸ್ ಸಿಬ್ಬಂದಿಗೆ ಶಿಫ್ಟ್ ಬೇಸಿಸ್ ಹಾಕಿ ಎಂದು ತಿಳಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಕೆ.ಆರ್.ಪೇಟೆ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನಲ್ಲಿ, ಕೆ.ಆರ್.ಪೇಟ್ ಹೆಡ್ ಕಾನ್ಸಟೇಬಲ್, ಶಿವಮೊಗ್ಗದಲ್ಲೂ ಪೊಲೀಸರನ್ನು ಕ್ವಾರೆಂಟೈನ್ ಮಾಡಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ತಬ್ಲಿಘಿ ಜಮಾತ್ ನಿಂದ ಗುರುತಿಸಿ ನಿಯಂತ್ರಿಸುವಲ್ಲಿ ಪ್ರಮುಖಪಾತ್ರ ವಹಿಸಿದವರು ಪೊಲೀಸರೇ. ಎಂದರು.
ಇನ್ನು ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಸೋಂಕಿತರು ಬಹಳ ಕಡಿಮೆ ಇದೆ. ಆದರೂ ಕೂಡ ನಾವು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಇನ್ನು ಪೊಲೀಸರಿಗೆ 55ವರ್ಷ ಮೇಲಿನವರಿಗೆ ಠಾಣೆಯಲ್ಲಿಯೇ ಕೆಲಸ ಕೊಡಿ. ಯುವಕರಿಗೆ ಶಿಫ್ಟ್ ಹಾಕಿ ಪ್ರತಿ ವಾರ-10ದಿನಗಳಿಗೆ ರಜೆ ನೀಡಿ ಎಂದಿದ್ದೇನೆ. ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಅವರ ಮೂವ್ ಮೆಂಟ್ ನೋಡಿ ಅವಶ್ಯಕತೆ ಇದ್ದರೆ ಫ್ರೀಜರ್ ಟೌನ್ ಸೀಲ್ ಡೌನ್ ಮಾಡಲಾಗುತ್ತದೆ ಎಂದರು.
ಮೈಸೂರು: ಶುದ್ಧ ನೀರು ನೀಡದ ಕಂಪೆನಿ ಕಪ್ಪುಪಟ್ಟಿಗೆ
ಸದ್ಯ ಅಂತಾರಾಜ್ಯ ಚಲನವಲನಗಳನ್ನು ನಿಯಂತ್ರಿಸುತ್ತಿದ್ದೇವೆ. ಕೊರೊನಾ ಕೇಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಂತರ ಜಿಲ್ಲಾ ಪ್ರವಾಸದ ಮೇಲೂ ನಿಯಂತ್ರಣ ಬೇಕು. ಮುಂಬೈನಿಂದ ಬಂದ ವಲಸಿಗರಿಂದ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ. ಆದ್ದರಿಂದ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಲಾಕ್ಡೌನ್ 4 ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟೇ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೊರ ರಾಜ್ಯದಿಂದ ಮೈಸೂರಿಗೆ ಬಂದವರಿಗೆ ಕ್ವಾರಂಟೈನ್, ತೀವ್ರ...
ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಿದ್ದೇವೆ. ಜ್ಯುಬಿಲಿಯೆಂಟ್ ಫಾರ್ಮಾಸಿಟಿಕಲ್ ಕಂಪನಿ. ಬಾಗಿಲು ಹಾಕಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯಲು ಅನುಮತಿ ಕೇಳಿದ್ದರು. ಹಾಗಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಹ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ 'ಸಾಮಾಜಿಕ ಅ...
ಇನ್ನು ಆನೇಕಲ್ ಗಡಿ ಪ್ರದೇಶದಲ್ಲಿ ಬಂದ್ ಮಾಡಿದ್ದರೂ ಕಳ್ಳಕಿಂಡಿಯಲ್ಲಿ ನುಗ್ಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ನಾನೇ ಅತ್ತಿಬೆಲೆ ಹತ್ತಿರ ಹೋಗಿ ಖುದ್ದು ಹೋಗಿ ಸೀಲ್ ಡೌನ್ ಮಾಡಿಸಿದ್ದೇನೆ. ಹಾಗಾಗಿ ವಿಶೇಷ ಸ್ಕ್ವಾಡ್ ಮಾಡಲಾಗಿದೆ. ಎಸ್ಪಿ ರವಿಚನ್ನಣ್ಣನವರ್ ಹೋಗಿ ಪ್ರಕರಣ ದಾಖಲು ಮಾಡಿದ್ದಾರೆ. ವಿಶೇಷ ಎಕ್ಸೈಸ್ ಓಪನ್ ಆದಾಗ ಬಂದು ಹೋಗಿದ್ದಾರೆ. ಹೊರಗಡೆ ರಾಜ್ಯದಿಂದ ಬಂದವರಿಗೆ ಕ್ವಾರೆಂಟೈನ್ ಮಾಡಲಾಗುವುದು ಅನ್ನೋದು ಗೊತ್ತಾಗಿದೆ ಎಂದರು.
ಮೈಸೂರು: ಮರಗಳು ಬೀಳುತ್ತೆ ಹುಷಾರ್ !
ಇದೇ ವೇಳೆ ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡಿದೆ. ಆಶಾಕಾರ್ಯಕರ್ತರು, ಪೊಲೀಸರು, ವೈದ್ಯರು ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಮುಕ್ತಕಂಠದಿಂದ ಶ್ಲಾಘಿಸುತ್ತೇನೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಕೆ.ಆರ್.ಪೇಟೆ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನಲ್ಲಿ, ಕೆ.ಆರ್.ಪೇಟ್ ಹೆಡ್ ಕಾನ್ಸಟೇಬಲ್, ಶಿವಮೊಗ್ಗದಲ್ಲೂ ಪೊಲೀಸರನ್ನು ಕ್ವಾರೆಂಟೈನ್ ಮಾಡಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ತಬ್ಲಿಘಿ ಜಮಾತ್ ನಿಂದ ಗುರುತಿಸಿ ನಿಯಂತ್ರಿಸುವಲ್ಲಿ ಪ್ರಮುಖಪಾತ್ರ ವಹಿಸಿದವರು ಪೊಲೀಸರೇ. ಎಂದರು.
ಇನ್ನು ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಸೋಂಕಿತರು ಬಹಳ ಕಡಿಮೆ ಇದೆ. ಆದರೂ ಕೂಡ ನಾವು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಇನ್ನು ಪೊಲೀಸರಿಗೆ 55ವರ್ಷ ಮೇಲಿನವರಿಗೆ ಠಾಣೆಯಲ್ಲಿಯೇ ಕೆಲಸ ಕೊಡಿ. ಯುವಕರಿಗೆ ಶಿಫ್ಟ್ ಹಾಕಿ ಪ್ರತಿ ವಾರ-10ದಿನಗಳಿಗೆ ರಜೆ ನೀಡಿ ಎಂದಿದ್ದೇನೆ. ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಅವರ ಮೂವ್ ಮೆಂಟ್ ನೋಡಿ ಅವಶ್ಯಕತೆ ಇದ್ದರೆ ಫ್ರೀಜರ್ ಟೌನ್ ಸೀಲ್ ಡೌನ್ ಮಾಡಲಾಗುತ್ತದೆ ಎಂದರು.
ಮೈಸೂರು: ಶುದ್ಧ ನೀರು ನೀಡದ ಕಂಪೆನಿ ಕಪ್ಪುಪಟ್ಟಿಗೆ
ಸದ್ಯ ಅಂತಾರಾಜ್ಯ ಚಲನವಲನಗಳನ್ನು ನಿಯಂತ್ರಿಸುತ್ತಿದ್ದೇವೆ. ಕೊರೊನಾ ಕೇಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಂತರ ಜಿಲ್ಲಾ ಪ್ರವಾಸದ ಮೇಲೂ ನಿಯಂತ್ರಣ ಬೇಕು. ಮುಂಬೈನಿಂದ ಬಂದ ವಲಸಿಗರಿಂದ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ. ಆದ್ದರಿಂದ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಲಾಕ್ಡೌನ್ 4 ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟೇ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೊರ ರಾಜ್ಯದಿಂದ ಮೈಸೂರಿಗೆ ಬಂದವರಿಗೆ ಕ್ವಾರಂಟೈನ್, ತೀವ್ರ...
ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಿದ್ದೇವೆ. ಜ್ಯುಬಿಲಿಯೆಂಟ್ ಫಾರ್ಮಾಸಿಟಿಕಲ್ ಕಂಪನಿ. ಬಾಗಿಲು ಹಾಕಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯಲು ಅನುಮತಿ ಕೇಳಿದ್ದರು. ಹಾಗಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಹ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ 'ಸಾಮಾಜಿಕ ಅ...
ಇನ್ನು ಆನೇಕಲ್ ಗಡಿ ಪ್ರದೇಶದಲ್ಲಿ ಬಂದ್ ಮಾಡಿದ್ದರೂ ಕಳ್ಳಕಿಂಡಿಯಲ್ಲಿ ನುಗ್ಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ನಾನೇ ಅತ್ತಿಬೆಲೆ ಹತ್ತಿರ ಹೋಗಿ ಖುದ್ದು ಹೋಗಿ ಸೀಲ್ ಡೌನ್ ಮಾಡಿಸಿದ್ದೇನೆ. ಹಾಗಾಗಿ ವಿಶೇಷ ಸ್ಕ್ವಾಡ್ ಮಾಡಲಾಗಿದೆ. ಎಸ್ಪಿ ರವಿಚನ್ನಣ್ಣನವರ್ ಹೋಗಿ ಪ್ರಕರಣ ದಾಖಲು ಮಾಡಿದ್ದಾರೆ. ವಿಶೇಷ ಎಕ್ಸೈಸ್ ಓಪನ್ ಆದಾಗ ಬಂದು ಹೋಗಿದ್ದಾರೆ. ಹೊರಗಡೆ ರಾಜ್ಯದಿಂದ ಬಂದವರಿಗೆ ಕ್ವಾರೆಂಟೈನ್ ಮಾಡಲಾಗುವುದು ಅನ್ನೋದು ಗೊತ್ತಾಗಿದೆ ಎಂದರು.
ಮೈಸೂರು: ಮರಗಳು ಬೀಳುತ್ತೆ ಹುಷಾರ್ !
ಇದೇ ವೇಳೆ ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡಿದೆ. ಆಶಾಕಾರ್ಯಕರ್ತರು, ಪೊಲೀಸರು, ವೈದ್ಯರು ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಮುಕ್ತಕಂಠದಿಂದ ಶ್ಲಾಘಿಸುತ್ತೇನೆ ಎಂದರು.