ಆ್ಯಪ್ನಗರ

ಮೊಬೈಲ್‌ ಕಳ್ಳನನ್ನು ಬೆನ್ನಟ್ಟಿ ಹಿಡಿದ ವಿದ್ಯಾರ್ಥಿಗಳು

ಮೊಬೈಲ್‌ ಕದಿಯಲು ಮುಂದಾದ ದುಷ್ಕರ್ಮಿಯನ್ನು ಕಾಲೇಜು ವಿದ್ಯಾರ್ಥಿಗಳಿಬ್ಬರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

Vijaya Karnataka 1 Dec 2018, 5:00 am
ಮೈಸೂರು: ಮೊಬೈಲ್‌ ಕದಿಯಲು ಮುಂದಾದ ದುಷ್ಕರ್ಮಿಯನ್ನು ಕಾಲೇಜು ವಿದ್ಯಾರ್ಥಿಗಳಿಬ್ಬರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.
Vijaya Karnataka Web students who chase a mobile thief
ಮೊಬೈಲ್‌ ಕಳ್ಳನನ್ನು ಬೆನ್ನಟ್ಟಿ ಹಿಡಿದ ವಿದ್ಯಾರ್ಥಿಗಳು


ನಗರದ ಗೌಸಿಯಾನಗರ ನಿವಾಸಿ ರಿಯಾಜ್‌ ಪಾಷಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಹೆಬ್ಬಾಳಿನ ಕೇನ್ಸ್‌ ಐಟಿಐ ಕಾಲೇಜು ವಿದ್ಯಾರ್ಥಿಗಳಾದ ಮಹದೇವಪುರ ನಿವಾಸಿ ಪ್ರಮೋದ್‌ ಹಾಗೂ ನಂಜನಗೂಡು ತಾಲೂಕು ಹುಲ್ಲಹಳ್ಳಿ ನಿವಾಸಿ ಪುಟ್ಟರಾಜು ಸಾಹಸ ಮೆರೆದ ವಿದ್ಯಾರ್ಥಿಗಳು.

ಘಟನೆ ವಿವರ: ಪ್ರಮೋದ್‌ ಸ್ನೇಹಿತನಾದ ಪುಟ್ಟರಾಜ್‌ನೊಂದಿಗೆ ಕಾಲೇಜಿಗೆ ತೆರಳಲು ಗುರುವಾರ ಬೆಳಗ್ಗೆ 9.45ರ ವೇಳೆಯಲ್ಲಿ ನಗರ ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ ಬಳಿ ಬಸ್‌ಗಾಗಿ ಕಾದು ನಿಂತಿದ್ದರು. ಇದೇ ವೇಳೆ ಆತ 21 ಸಾವಿರ ರೂ. ಮೌಲ್ಯದ ವಿ 7ಪ್ಲಸ್‌ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.

ಇದೇ ವೇಳೆ ಪ್ರಮೋದ್‌ನನ್ನು ಹಿಂಬಾಲಿಸಿದ ಆರೋಪಿ ರಿಯಾಜ್‌ಪಾಷಾ, ಮೊಬೈಲ್‌ ಕಸಿದು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಇದರಿಂದ ಎಚ್ಚೆತ್ತ ಪ್ರಮೋದ್‌ ಹಾಗೂ ಪುಟ್ಟರಾಜು ಕೂಗುತ್ತಲೇ ಆರೋಪಿಯನ್ನು ಬೆನ್ನಟ್ಟಿದ್ದಾರೆ. ಅವರ ಕೂಗಿಗೆ ಎಚ್ಚೆತ್ತ ಸಾರ್ವಜನಿಕರೂ ಆರೋಪಿಯನ್ನು ಬೆನ್ನಟ್ಟಿದ್ದಾರೆ. ಸ್ವಲ್ಪ ದೂರ ಓಡಿದ್ದ ಆತನನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ದೇವರಾಜ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ